ಬ್ರೇಕಿಂಗ್ ನ್ಯೂಸ್
10-01-21 02:08 pm Source: FILMIBEAT Manjunatha C ಸಿನಿಮಾ
ಖ್ಯಾತ ಗಾಯಕಿ ಸುನಿತಾ ಮದುವೆಯಾಗಿದ್ದಾರೆ. ಮಕ್ಕಳೇ ಮುಂದೆ ನಿಂತು ಅಮ್ಮನ ಮದುವೆಯನ್ನು ನೆರವೇರಿಸಿದ್ದಾರೆ.
43 ವರ್ಷದ ತೆಲುಗಿನ ಖ್ಯಾತ ಗಾಯಕಿ ಸುನಿತಾ ಜನವರಿ 09 ರಂದು ರಾಮ್ ವೀರಪನೇನಿ ಎಂಬುವರನ್ನು ವಿವಾಹವಾಗಿದ್ದಾರೆ. ಗಾಯಕಿ ಸುನಿತಾ ಗೆ ಇದು ಎರಡನೇ ವಿವಾಹ. ಮಕ್ಕಳೇ ಮುಂದೆ ನಿಂತು ಈ ವಿವಾಹ ಕಾರ್ಯ ನೆರವೇರಿಸಿದ್ದಾರೆ.
ಗಾಯಕಿ ಸುನಿತಾ ಹಾಗೂ ರಾಮ್ ವೀರಪನೇನಿ ಅವರ ಮದುವೆಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ. ಅದ್ಧೂರಿಯಾಗಿಯೇ ನಡೆದ ಈ ಮದುವೆಗೆ ಹಲವು ಅತಿಥಿಗಳು ಭಾಗವಹಿಸಿ, ನವ ವಧು-ವರರಿಗೆ ಶುಭಾಶಯ ತಿಳಿಸಿದ್ದಾರೆ.
19 ವರ್ಷಕ್ಕೆ ಸುನೀತಾಗೆ ಮದುವೆಯಾಗಿತ್ತು
ಸುನಿತಾ ಅವರಿಗೆ 19 ನೇ ವರ್ಷಕ್ಕೆ ಮದುವೆ ಮಾಡಲಾಗಿತ್ತು. ಮೊದಲ ಪತಿ, ಪತ್ರಕರ್ತ ಕಿರಣ್ ಗೋಪುರಾಜು ಇಂದು ವಿಚ್ಛೇಧನ ಪಡೆದು ಹಲವು ವರ್ಷಗಳಾಗಿದ್ದವು ಸುನಿತಾ. ಇದೀಗ ಕೆಲವು ತಿಂಗಳ ಹಿಂದೆ ಮಕ್ಕಳ ಸಮ್ಮುಖದಲ್ಲಿಯೇ ಸುನೀತಾ ಹಾಗೂ ರಾಮ್ ನಿಶ್ಚಿತಾರ್ಥ ಮಾಡಿಕೊಂಡು ಈಗ ಮದುವೆ ಆಗಿದ್ದಾರೆ.

ಡಿಜಿಟಲ್ ಮಿಡಿಯಾ ಸಂಸ್ಥೆಯೊಂದರ ಸಿಇಒ
ರಾಮ್ ವೀರಪನೇನಿ ಡಿಜಿಟಲ್ ಮೀಡಿಯಾ ಸಂಸ್ಥೆಯ ಸಿಇಒ ಆಗಿದ್ದು, 'ನನ್ನ ಬಾಳಿಗೆ ಸ್ನೇಹಿತನಾಗಿ ಬಂದು ಈಗ ನನ್ನ ಜೀವನದ ಭಾಗವೇ ಆಗುತ್ತಿದ್ದಾರೆ ರಾಮ್' ಎಂದು ಹೇಳಿದ್ದಾರೆ ಸುನೀತಾ. ಸುನೀತಾ ಅವರ ಮರು ಮದುವೆ ನಿರ್ಧಾರಕ್ಕೆ ಹಲವಾರು ಮಂದಿ ಶುಭಾಶಯಗಳನ್ನು ತಿಳಿಸಿದ್ದಾರೆ.

ಸುನೀತಾ ಗೆ ಇಬ್ಬರು ಮಕ್ಕಳಿದ್ದಾರೆ
ಸುನಿತಾಗೆ ಮತ್ತು ಮೊದಲ ಪತಿ ಕಿರಣ್ ದಾಂಪತ್ಯಕ್ಕೆ ಇಬ್ಬರು ಮಕ್ಕಳಿದ್ದಾರೆ. ಮಗ ಆಕಾಶ್ ಮತ್ತು ಮಗಳು ಶ್ರೇಯಾ ಎನ್ನುವ ಇಬ್ಬರು ಮಕ್ಕಳಿದ್ದಾರೆ. ಗಾಯಕಿ ಸುನಿತಾ ತೆಲುಗು ಮಾತ್ರವಲ್ಲದೇ ತಮಿಳು ಮತ್ತು ಕನ್ನಡದಲ್ಲೂ ಸಾಕಷ್ಟು ಹಾಡಿಗಳಿಗೆ ಧ್ವನಿ ನೀಡಿದ್ದಾರೆ.

ಮದುವೆ ಬಗ್ಗೆ ಟೀಕೆಗಳು ವ್ಯಕ್ತವಾಗಿದ್ದವು
ಗಾಯಕಿ ಸುನಿತಾ ತಾವು ಮದುವೆ ಆಗುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದಾಗ ಸಾಕಷ್ಟು ಮಂದಿ ಟೀಕಿಸಿದ್ದರು. ಆದರೆ ಎಲ್ಲ ಟೀಕೆಯನ್ನು ನಿರ್ಲಕ್ಷಿಸಿ ಮದುವೆ ಆಗಿದ್ದಾರೆ ಸುನೀತಾ. 'ನನ್ನ ಮಕ್ಕಳು ಸೆಟಲ್ ಆಗಲಿ ಎಂದು ನಾನು ನಿರೀಕ್ಷಿಸುತ್ತೇನೆ. ಆದರೆ ನಾನೂ ಸಹ ಸೆಟಲ್ ಆಗಲಿ ಎಂದು ನನ್ನ ಮಕ್ಕಳು ಯೋಚಿಸಿದ್ದಾರೆ. ಅದ್ಭುತವಾದ ಮಕ್ಕಳನ್ನು ನಾನು ಪಡೆದಿದ್ದೇನೆ' ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು ಸುನೀತಾ.
This News Article is a Copy of FILMIBEAT
24-08-26 03:16 pm
HK News Staffer
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
24-08-26 06:25 pm
HK News Staffer
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
ಅಡಿಕೆ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ಸಿಪಿಸಿಆರ್ ಐ...
24-08-26 04:11 pm
ಎಂಆರ್ ಪಿಎಲ್ ನಲ್ಲಿ 26 ಇಂಜಿನಿಯರಿಂಗ್ ಹುದ್ದೆಗಳ ಭರ...
24-08-26 01:13 pm
ಹಲ್ಲೆಗೀಡಾದವರ ಮೇಲೆ ಕೊಲೆಯತ್ನ ಕೇಸು ಹಾಕಿದ್ದಾರೆ, ಹ...
23-08-26 06:17 pm
24-08-26 09:06 pm
HK News Staffer
ಸಾವಿರಾರು ಕೋಟಿ ವಂಚಕ, ಶಿವಂ ಅಸೋಸಿಯೇಟ್ಸ್ ಮಾಲೀಕ ಶಿ...
24-08-26 07:04 pm
ಚಿಕ್ಕಮಗಳೂರಿನಲ್ಲಿ ಈದ್ ಮೆರವಣಿಗೆ ಸಿದ್ಧತೆ ; ಬೃಹತ್...
24-08-26 02:35 pm
ಕುಂಬಳೆಯ ಮುಸ್ಲಿಂ ವ್ಯಾಪಾರಿಗೆ ಹನಿಟ್ರ್ಯಾಪ್ ; ವಿಡಿ...
24-08-26 02:25 pm
ನದಿಗೆ ಬಿದ್ದ ಫುಟ್ಬಾಲ್ ಹೆಕ್ಕಲು ಹೋಗಿ ಜೀವ ಕಳಕೊಂಡ...
24-08-26 01:03 pm