ಬ್ರೇಕಿಂಗ್ ನ್ಯೂಸ್
10-01-21 02:08 pm Source: FILMIBEAT Manjunatha C ಸಿನಿಮಾ
ಖ್ಯಾತ ಗಾಯಕಿ ಸುನಿತಾ ಮದುವೆಯಾಗಿದ್ದಾರೆ. ಮಕ್ಕಳೇ ಮುಂದೆ ನಿಂತು ಅಮ್ಮನ ಮದುವೆಯನ್ನು ನೆರವೇರಿಸಿದ್ದಾರೆ.
43 ವರ್ಷದ ತೆಲುಗಿನ ಖ್ಯಾತ ಗಾಯಕಿ ಸುನಿತಾ ಜನವರಿ 09 ರಂದು ರಾಮ್ ವೀರಪನೇನಿ ಎಂಬುವರನ್ನು ವಿವಾಹವಾಗಿದ್ದಾರೆ. ಗಾಯಕಿ ಸುನಿತಾ ಗೆ ಇದು ಎರಡನೇ ವಿವಾಹ. ಮಕ್ಕಳೇ ಮುಂದೆ ನಿಂತು ಈ ವಿವಾಹ ಕಾರ್ಯ ನೆರವೇರಿಸಿದ್ದಾರೆ.
ಗಾಯಕಿ ಸುನಿತಾ ಹಾಗೂ ರಾಮ್ ವೀರಪನೇನಿ ಅವರ ಮದುವೆಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ. ಅದ್ಧೂರಿಯಾಗಿಯೇ ನಡೆದ ಈ ಮದುವೆಗೆ ಹಲವು ಅತಿಥಿಗಳು ಭಾಗವಹಿಸಿ, ನವ ವಧು-ವರರಿಗೆ ಶುಭಾಶಯ ತಿಳಿಸಿದ್ದಾರೆ.
19 ವರ್ಷಕ್ಕೆ ಸುನೀತಾಗೆ ಮದುವೆಯಾಗಿತ್ತು
ಸುನಿತಾ ಅವರಿಗೆ 19 ನೇ ವರ್ಷಕ್ಕೆ ಮದುವೆ ಮಾಡಲಾಗಿತ್ತು. ಮೊದಲ ಪತಿ, ಪತ್ರಕರ್ತ ಕಿರಣ್ ಗೋಪುರಾಜು ಇಂದು ವಿಚ್ಛೇಧನ ಪಡೆದು ಹಲವು ವರ್ಷಗಳಾಗಿದ್ದವು ಸುನಿತಾ. ಇದೀಗ ಕೆಲವು ತಿಂಗಳ ಹಿಂದೆ ಮಕ್ಕಳ ಸಮ್ಮುಖದಲ್ಲಿಯೇ ಸುನೀತಾ ಹಾಗೂ ರಾಮ್ ನಿಶ್ಚಿತಾರ್ಥ ಮಾಡಿಕೊಂಡು ಈಗ ಮದುವೆ ಆಗಿದ್ದಾರೆ.
ಡಿಜಿಟಲ್ ಮಿಡಿಯಾ ಸಂಸ್ಥೆಯೊಂದರ ಸಿಇಒ
ರಾಮ್ ವೀರಪನೇನಿ ಡಿಜಿಟಲ್ ಮೀಡಿಯಾ ಸಂಸ್ಥೆಯ ಸಿಇಒ ಆಗಿದ್ದು, 'ನನ್ನ ಬಾಳಿಗೆ ಸ್ನೇಹಿತನಾಗಿ ಬಂದು ಈಗ ನನ್ನ ಜೀವನದ ಭಾಗವೇ ಆಗುತ್ತಿದ್ದಾರೆ ರಾಮ್' ಎಂದು ಹೇಳಿದ್ದಾರೆ ಸುನೀತಾ. ಸುನೀತಾ ಅವರ ಮರು ಮದುವೆ ನಿರ್ಧಾರಕ್ಕೆ ಹಲವಾರು ಮಂದಿ ಶುಭಾಶಯಗಳನ್ನು ತಿಳಿಸಿದ್ದಾರೆ.
ಸುನೀತಾ ಗೆ ಇಬ್ಬರು ಮಕ್ಕಳಿದ್ದಾರೆ
ಸುನಿತಾಗೆ ಮತ್ತು ಮೊದಲ ಪತಿ ಕಿರಣ್ ದಾಂಪತ್ಯಕ್ಕೆ ಇಬ್ಬರು ಮಕ್ಕಳಿದ್ದಾರೆ. ಮಗ ಆಕಾಶ್ ಮತ್ತು ಮಗಳು ಶ್ರೇಯಾ ಎನ್ನುವ ಇಬ್ಬರು ಮಕ್ಕಳಿದ್ದಾರೆ. ಗಾಯಕಿ ಸುನಿತಾ ತೆಲುಗು ಮಾತ್ರವಲ್ಲದೇ ತಮಿಳು ಮತ್ತು ಕನ್ನಡದಲ್ಲೂ ಸಾಕಷ್ಟು ಹಾಡಿಗಳಿಗೆ ಧ್ವನಿ ನೀಡಿದ್ದಾರೆ.
ಮದುವೆ ಬಗ್ಗೆ ಟೀಕೆಗಳು ವ್ಯಕ್ತವಾಗಿದ್ದವು
ಗಾಯಕಿ ಸುನಿತಾ ತಾವು ಮದುವೆ ಆಗುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದಾಗ ಸಾಕಷ್ಟು ಮಂದಿ ಟೀಕಿಸಿದ್ದರು. ಆದರೆ ಎಲ್ಲ ಟೀಕೆಯನ್ನು ನಿರ್ಲಕ್ಷಿಸಿ ಮದುವೆ ಆಗಿದ್ದಾರೆ ಸುನೀತಾ. 'ನನ್ನ ಮಕ್ಕಳು ಸೆಟಲ್ ಆಗಲಿ ಎಂದು ನಾನು ನಿರೀಕ್ಷಿಸುತ್ತೇನೆ. ಆದರೆ ನಾನೂ ಸಹ ಸೆಟಲ್ ಆಗಲಿ ಎಂದು ನನ್ನ ಮಕ್ಕಳು ಯೋಚಿಸಿದ್ದಾರೆ. ಅದ್ಭುತವಾದ ಮಕ್ಕಳನ್ನು ನಾನು ಪಡೆದಿದ್ದೇನೆ' ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು ಸುನೀತಾ.
This News Article is a Copy of FILMIBEAT
07-05-24 09:11 pm
HK News Desk
Lok Sabha Elections 2024, Uttar Karnataka Vot...
07-05-24 07:11 pm
Karnataka Bitcoin scam, Srikrishna Ramesh ali...
07-05-24 06:18 pm
Ramesh Jarkiholi, DK Shivakumar, Prajwal Reva...
07-05-24 12:43 pm
ಮಂಡ್ಯದಲ್ಲಿ ಭ್ರೂಣಹತ್ಯೆ ಪ್ರಕರಣ ಜೀವಂತ ! ಪಾಂಡವಪುರ...
07-05-24 11:27 am
07-05-24 10:26 pm
HK News Desk
Solapur Lok Sabha Constituency, Maharashtra,...
07-05-24 08:38 pm
Ram Mandir, Rahul Gandhi, Acharya Pramod Kris...
07-05-24 05:16 pm
Kasaragod Manjeshwar accident, Ambulance: ಮಂಜ...
07-05-24 03:26 pm
ಕನ್ಯಾಕುಮಾರಿ ; ವೇಮೂರ್ ಬೀಚ್ ನಲ್ಲಿ ಐವರು ಮೆಡಿಕಲ್...
06-05-24 09:31 pm
07-05-24 02:34 pm
Mangalore Correspondent
Mangalore Crime News, suicide: ವೆನ್ಲಾಕ್ ಆಸ್ಪತ...
06-05-24 08:17 pm
Lok Sabha election, Prajwal Revanna: ಪ್ರಜ್ವಲ್...
06-05-24 04:54 pm
Prajwal Revanna sex, Congress Shalet Pinto Ma...
06-05-24 02:51 pm
Ksrtc Mangalore, crime: ಸೈಡ್ ಕೊಟ್ಟಿಲ್ಲ ಎಂಬ ಕಾ...
06-05-24 02:14 pm
07-05-24 10:03 pm
HK News Desk
Bangalore Cyber crime: ಸ್ಟಾಕ್ ಮಾರ್ಕೆಟ್ ಹೂಡಿಕೆ...
07-05-24 09:48 pm
Bangalore crime, Robbery: ಊರಿಗೆ ಹೋದ್ಲು ಅಕ್ಕ ;...
07-05-24 02:57 pm
Crime News: ಗಂಡನ ಕೈ - ಕಾಲು ಕಟ್ಟಿ ಸಿಗರೇಟ್ ನಿಂ...
07-05-24 12:53 pm
Crime News, Bangalore: ಕುಡಿದ ಮತ್ತಿನಲ್ಲಿ ತಾಯಿಯ...
07-05-24 12:14 pm