ಬ್ರೇಕಿಂಗ್ ನ್ಯೂಸ್
20-01-21 12:32 pm Source: FILMIBEAT Manjunatha C ಸಿನಿಮಾ
ನಟ ಸುದೀಪ್ ಮಾಡಿರುವ, ಮಾಡುತ್ತಿರುವ ಸಮಾಜ ಸೇವೆಗೆ ಪೀಠಿಕೆ ಅಗತ್ಯವಿಲ್ಲ. ಅವರ ಸಮಾಜ ಸೇವೆಗಳ ಬಗ್ಗೆ ಆಗಾಗ್ಗೆ ಸುದ್ದಿಗಳು ಪ್ರಕಟವಾಗುತ್ತಲೇ ಇರುತ್ತವೆ. ಇದೀಗ ಕಿಚ್ಚ ಸುದೀಪ್ ಬೆಂಬಲದೊಂದಿಗೆ ಅವರ ಅಭಿಮಾನಿಗಳು ನಿರ್ವಹಿಸುತ್ತಿರುವ 'ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ' ಅಂಧ ವ್ಯಕ್ತಿಯೊಬ್ಬನ ಬಾಳಿಗೆ ಬೆಳಕಾಗುವ ಪ್ರಯತ್ನ ಮಾಡಿದ್ದಾರೆ. ಗುಲ್ಬರ್ಗ ಜಿಲ್ಲೆಯ ಔರಾದ್ ಗ್ರಾಮದ ಅಂಧ ಯುವಕ ಸಾಯಿನಾಥ್ ಗೆ ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ ವತಿಯಿಂದ ನೆರವು ದೊರೆತಿದೆ. ನೆರವಿನ ರೂಪದಲ್ಲಿ ಹಣವನ್ನು ನಿರಾಕರಿಸಿದ ಯುವಕ, ತನಗೆ ಒಂದು ಮೈಕ್ ಹಾಗೂ ಒಂದು ಸ್ಪೀಕರ್ ಬೇಕೆಂದು ಕೇಳಿದ್ದಾನೆ.
ಆತನ ಆಸೆಯಂತೆಯೇ ಒಂದು ಮೈಕ್ ಹಾಗೂ ಸ್ಪೀಕರ್ ಅನ್ನು ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ ಸದಸ್ಯರು ಒದಗಿಸಿದ್ದಾರೆ. ಆ ಮೈಕ್ ಹಾಗೂ ಸ್ಪೀಕರ್ ಮೂಲಕ ಹಾಡುಗಳನ್ನು ಹಾಡಿ ತಾನು ಜೀವನಕ್ಕೆ ಹಣ ಗಳಿಸುವುದಾಗಿ ಸಾಯಿನಾಥ್ ಹೇಳಿದ್ದಾನೆ. ಉತ್ತಮವಾಗಿ ಹಾಡು ಹೇಳುವ ಸಾಯಿನಾಥ್, ಆ ಮೈಕ್ ಹಾಗೂ ಸ್ಪೀಕರ್ ಮೂಲಕ ಜೀವನಕ್ಕೆ ಹಣ ಗಳಿಸುವ ಉಮೇದು ಹೊಂದಿದ್ದಾನೆ. ಆತನ ಜೀವನ ಸುಗಮವಾಗಿ ನಡೆಯಲು ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ ನೆರವಾಗಿದೆ. ಈ ಹಿಂದೆ ಸಹ ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿಯು ಈ ರೀತಿಯ ಹಲವು ಕಾರ್ಯಗಳನ್ನು ಮಾಡಿದೆ.
ಕೆಲವು ದಿನಗಳ ಹಿಂದೆಯಷ್ಟೆ ಸುದೀಪ್ ಅವರು ಚಾಮುಂಡೇಶ್ವರಿ ದೇವಾಲಯಕ್ಕೆ ಬಂದಾಗ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದ ವ್ಯಕ್ತಿಗೆ ನೆರವಾಗಿದ್ದರು.
This News Article is a Copy of FILMIBEAT
23-10-25 12:46 pm
Bangalore Correspondent
ಸಿಎಂ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ಅರ್ಹ ವ್ಯಕ್ತಿ ;...
22-10-25 08:12 pm
ರಾಜ್ಯದ ಸಂಪನ್ಮೂಲವನ್ನು ಹೈಕಮಾಂಡ್ ಸಮರ್ಪಣಾಮಸ್ತು ಮಾ...
21-10-25 11:01 pm
Dharmasthala Case, CM Siddaramaiah: ಧರ್ಮಸ್ಥಳ...
21-10-25 09:45 pm
ನೆಲ್ಲಿಕಾರು ; ಟ್ರ್ಯಾಕ್ಟರ್ ಜೊತೆಗೆ ಬಾವಿಗೆ ಬಿದ್ದ...
21-10-25 03:40 pm
22-10-25 10:56 pm
HK News Desk
ರಾಷ್ಟ್ರಪತಿ ಮುರ್ಮು ಶಬರಿಮಲೆಗೆ ; ಹೆಲಿಪ್ಯಾಡ್ ನಲ್ಲ...
22-10-25 10:23 pm
ಜೈಶ್ ಮಹಿಳಾ ಉಗ್ರರಿಂದ ಆನ್ಲೈನ್ ತರಬೇತಿ ಕೋರ್ಸ್ ; ಜ...
22-10-25 05:45 pm
ಡ್ರೆಸ್ಸಿಂಗ್ ರೂಮಿನಲ್ಲಿ ಇಸ್ಲಾಂ ಪ್ರಚಾರ ಮಾಡಿದ್ದಕ...
21-10-25 03:11 pm
INS Vikrant in Goa, PM Narendra Modi: ಗೋವಾದಲ್...
20-10-25 08:34 pm
22-10-25 09:55 pm
Mangalore Correspondent
ಗಟ್ಟಿಯವರ ಆಯುಷ್ಯ ಗಟ್ಟಿಯಿದೆ! ದೇರಳಕಟ್ಟೆ ವೈದ್ಯರು...
22-10-25 04:30 pm
ಮೋದಿ ಸರ್ಕಾರದ ಜಿಎಸ್ಟಿ ಸುಧಾರಣೆಗಳ ಬಗ್ಗೆ ಸಿದ್ದರಾಮ...
21-10-25 09:49 pm
Ashok Rai Puttur: 10 ಸಾವಿರ ಕುರ್ಚಿ ಹಾಕಿ ಒಂದು ಲ...
21-10-25 07:32 pm
ನಮ್ಮ ಸರ್ಕಾರ ಆರ್ಎಸ್ಎಸ್ ನಿಷೇಧ ಮಾಡಿಲ್ಲ, ಬಿಜೆಪಿ...
21-10-25 03:07 pm
22-10-25 11:51 am
Mangalore Correspondent
Mulki Fraud, Mangalore Police: ಹಣ ಡಬಲ್ ಆಮಿಷದಲ...
21-10-25 10:51 pm
ಅಭಿಷೇಕ್ ಹನಿಟ್ರ್ಯಾಪ್ ಕೇಸ್ ; ನ್ಯಾಯಕ್ಕಾಗಿ ಜಾಲತಾಣ...
21-10-25 08:24 pm
ಮನೆಮಂದಿ ಮಲಗಿದ್ದಾಗಲೇ ಅಪಾರ್ಟ್ಮೆಂಟಿನ ಮೂರು ಮನೆಗಳಿ...
21-10-25 05:12 pm
MSME Fraud, Mangalore Bank, SBI Mallikatte: ಸ...
20-10-25 10:51 pm