ಬ್ರೇಕಿಂಗ್ ನ್ಯೂಸ್
12-02-21 03:19 pm Source: FILMIBEAT Manjunatha C ಸಿನಿಮಾ
ನಟಿ ರಶ್ಮಿಕಾ ಮಂದಣ್ಣ ರ ಬಾಲಿವುಡ್ ಪಯಣ ಈಗಾಗಲೇ ಆರಂಭವಾಗಿದೆ. ಎರಡು ಹಿಂದಿ ಸಿನಿಮಾಗಳಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಆದರೆ ಅವರ ಬಾಲಿವುಡ್ ಪಯಣ ಆರಂಭವಾಗಿದ್ದು ಹಾಡೊಂದರ ಮೂಲಕ. ಆ ಹಾಡು ಈಗ ಬಿಡುಗಡೆ ಆಗಿದೆ.
ರ್ಯಾಪರ್ ಬಾದ್ಶಾ 'ಟಾಪ್ ಠಕ್ಕರ್' ಆಲ್ಬಂ ನ ಹಾಡಿಗೆ ಸೊಂಟ ಬಳುಕಿಸಿದ್ದಾರೆ ರಶ್ಮಿಕಾ ಮಂದಣ್ಣ. ಆ ಹಾಡಿನ ಚಿತ್ರೀಕರಣ ಮುಗಿಯುತ್ತಿದ್ದಂತೆ ಎರಡು ಹಿಂದಿ ಸಿನಿಮಾಗಳಿಂದ ರಶ್ಮಿಕಾ ಗೆ ಬುಲಾವ್ ಬಂದಿತ್ತು. ರಶ್ಮಿಕಾರ ಬಾಲಿವುಡ್ ಪಯಣ ಆರಂಭಕ್ಕೆ ನಾಂದಿಯಾಗಿದ್ದ 'ಟಾಪ್ ಠಕ್ಕರ್' ಹಾಡು ಇಂದು (ಫೆಬ್ರವರಿ 12) ಬಿಡುಗಡೆ ಆಗಿದೆ.
ದಕ್ಷಿಣದ ಖ್ಯಾತ ಸಂಗೀತ ನಿರ್ದೇಶಕ ಯುವನ್ ಶಂಕರ್ ರಾಜ ಸಂಗೀತ ನಿರ್ದೇಶಿಸಿ, ಬಾದ್ ಶಾ, ರಶ್ಮಿಕಾ ಮಂದಣ್ಣ, ಅಮಿತ್ ಉಚ್ಚಾನಾ ನಟಿಸಿರುವ ಈ ಹಾಡು ಯೂಟ್ಯೂಬ್ನಲ್ಲಿ ಬಿಡುಗಡೆ ಆಗಿದೆ.
ಹಾಡಿನಲ್ಲಿ ನಟಿ ರಶ್ಮಿಕಾ ಮಂದಣ್ಣ ದಕ್ಷಿಣದ ಚೆಲುವೆಯಾಗಿದ್ದು, ಆಕೆಯ ಹಿಂದೆ ಕಳ್ಳರಾದ ಬಾದ್ ಶಾ, ಅಮಿತ್ ಉಚ್ಚಾನಾ ಬಿದ್ದಿದ್ದಾರೆ. ಆಕೆಯ ಮನಸ್ಸು ಗೆಲ್ಲುವ ಜೊತೆಗೆ ಆಕೆಯ ಸರವನ್ನೂ ದೋಚುವ ಉದ್ದೇಶ ಅವರದ್ದು.
ಆದರೆ ಚಾಲಾಕಿ ರಶ್ಮಿಕಾ ಮಂದಣ್ಣ ಅವರ ಯೋಚನೆಗಳನ್ನು ಫಲಿಸಲು ಬಿಡುವುದಿಲ್ಲ. ಅವರದ್ದೇ ಯೋಜನೆಯನ್ನು ಅವರಿಗೆ ತಿರುಗಿಸಿ ಸರ ಉಳಿಸಿಕೊಳ್ಳುತ್ತಾರೆ. ರಶ್ಮಿಕಾ ಜೊತೆಗೆ ಯುವನ್ ಶಂಕರ್ ರಾಜಾ ಸಹ ಹಾಡಿನಲ್ಲಿ ನಟಿಸಿದ್ದಾರೆ.
ಹಾಡಿಗೆ ಸಾಹಿತ್ಯವನ್ನು ಬಾದ್ ಶಾ ಬರೆದಿದ್ದಾರೆ. ಹಾಡಿನಲ್ಲಿ ಬರುವ ತಮಿಳು ಸಾಲುಗಳನ್ನು ನಯನತಾರಾ ಬಾಯ್ಫ್ರೆಂಡ್ ವಿಗ್ನೇಶ್ ಶಿವನ್ ಬರೆದಿದ್ದಾರೆ. ಹಾಡು ಬಿಡುಗಡೆ ಆದ ನಾಲ್ಕು ಗಂಟೆಗಳಲ್ಲಿ 13 ಲಕ್ಷಕ್ಕೂ ಹೆಚ್ಚು ಬಾರಿ ಹಾಡನ್ನು ವೀಕ್ಷಿಸಲಾಗಿದೆ.
This News Article is a Copy of FILMIBEAT
24-05-26 09:03 pm
HK News Staffer
ಕಪ್ಪೆಚಿಪ್ಪು ತೆಗೆಯಲು ನದಿಗಿಳಿದಿದ್ದ ಏಳು ಮಹಿಳೆಯರು...
24-05-26 05:36 pm
ಬೆಂಗಳೂರು ಜಿಬಿಎ ಚುನಾವಣೆಗೆ ವಿಜಯ್ ಪಕ್ಷ ಎಂಟ್ರಿ ?...
23-05-26 11:37 pm
ಸರ್ಕಾರಿ ಶಾಲೆಗಳಲ್ಲಿ ಕೇಸರಿ ಶಾಲು ಧರಿಸಲು ಅವಕಾಶ ಇಲ...
23-05-26 10:40 pm
ಹಾವೇರಿ ; ಕಾಲು ಜಾರಿ ನೀರಿನ ಹೊಂಡಕ್ಕೆ ಬಿದ್ದ 8 ವರ್...
22-05-26 10:24 pm
25-05-26 10:19 am
HK News Staffer
ರಾಜ್ಯಸಭೆ ಚುನಾವಣೆ ; ಮಲ್ಲಿಕಾರ್ಜುನ ಖರ್ಗೆ, ದೇವೇಗೌ...
23-05-26 08:47 pm
ಸಕಲೇಶಪುರ ವಿದ್ಯುದೀಕರಣ, ಸದ್ಯದಲ್ಲೇ 'ಮಂ- ಬೆಂ' ವಂದ...
23-05-26 03:53 pm
ಬೆಲೆ ಏರಿಕೆ, ನಿರುದ್ಯೋಗ, ಮೋದಿ ವಿದೇಶ ಪ್ರವಾಸ ವಿರೋ...
23-05-26 01:59 pm
ಪೆಟ್ರೋಲ್ - ಡೀಸೆಲ್ ಬೆಲೆ ಮತ್ತೆ ಏರಿಕೆ ! ಬೆಂಗಳೂರಿ...
23-05-26 09:15 am
24-05-26 09:22 pm
Mangaluru Staffer
ಕುಳೂರು ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಹ...
24-05-26 04:45 pm
ಮಂಗಳೂರು ವಿಮಾನ ದುರಂತಕ್ಕೆ 16 ವರ್ಷ ; 158 ಜೀವಗಳನ್...
22-05-26 09:47 pm
ಬೈಕಂಪಾಡಿ- KIOCL ಜಂಕ್ಷನ್ ಮಧ್ಯೆ ಬಹು ನಿರೀಕ್ಷಿತ ಫ...
22-05-26 08:10 pm
ಮಂಗಳೂರಿನ ನಾಲ್ಕು ಕಡೆ ಅದ್ದೂರಿ ಸಭಾಭವನ ; ಲ್ಯಾಂಡ್...
21-05-26 05:52 pm
25-05-26 09:27 am
HK News Staffer
Bangalore Digital Arrest: ಅಕ್ರಮ ಹಣ ವರ್ಗಾವಣೆ ಹ...
24-05-26 09:01 pm
Assault on police Mangalore: ಗಸ್ತಿನಲ್ಲಿದ್ದ ಉರ...
24-05-26 06:44 pm
ವರದಕ್ಷಿಣೆ ಕಿರುಕುಳ ; ಪೊಲೀಸ್ ಕಾನ್ಸ್ ಟೇಬಲ್ ಪತ್ನಿ...
24-05-26 02:01 pm
ಉಡುಪಿಯಲ್ಲಿ ನಿರ್ಮಾಣ ಹಂತದ ಬಾವಿ ಕುಸಿದು 25 ವರ್ಷದ...
23-05-26 11:54 am