ಬ್ರೇಕಿಂಗ್ ನ್ಯೂಸ್
24-02-21 12:22 pm Source: FILMIBEAT ಸಿನಿಮಾ
ಕೆಜಿಎಫ್ ಚಾಪ್ಟರ್ 2 ಚಿತ್ರದ ಮೇಲೆ ಭಾರತೀಯ ಚಿತ್ರರಂಗ ಕಣ್ಣಿಟ್ಟಿದೆ. ಕನ್ನಡದಲ್ಲಿ ತಯಾರಾಗುತ್ತಿರುವ ಕೆಜಿಎಫ್ ಸೀಕ್ವೆಲ್ ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಜುಲೈ 16 ರಂದು ಕೆಜಿಎಫ್ ಸಿನಿಮಾ ವರ್ಲ್ಡ್ ವೈಡ್ ತೆರೆಕಾಣುತ್ತಿದೆ. ಈಗಾಗಲೇ ಭಾರಿ ಮೊತ್ತಕ್ಕೆ ಹಿಂದಿ ವಿತರಣೆ ಹಕ್ಕು ಮಾರಾಟ ಆಗಿದೆ.
ಈ ಕಡೆ ಸೌತ್ ಇಂಡಿಯಾದಲ್ಲಿ ಕೆಜಿಎಫ್ ಹವಾ ಹೆಚ್ಚಿದ್ದು, ತೆಲುಗು ವರ್ಷನ್ ವಿತರಣೆ ಹಕ್ಕು ದಾಖಲೆ ಬೆಲೆಗೆ ಸೇಲ್ ಆಗಿದೆ ಎಂದು ಹೇಳಲಾಗುತ್ತಿದೆ. ಚಾಪ್ಟರ್ 1 ಸಿನಿಮಾ ರಿಲೀಸ್ ಮಾಡಿದ್ದ ವಿತರಕ ಈ ಸಲ ಹಿಂದೆ ಸರಿದಿದ್ದು, ಮತ್ತೊಬ್ಬ ಸ್ಟಾರ್ ನಿರ್ಮಾಪಕ ಕೆಜಿಎಫ್ ಹಕ್ಕು ಖರೀದಿಸಿದ್ದಾರೆ. ಹಾಗಾದ್ರೆ, ಕೆಜಿಎಫ್ ಚಿತ್ರದ ತೆಲುಗು ವಿತರಣೆ ಹಕ್ಕಿಗೆ ನೀಡಿದ ಹಣವೆಷ್ಟು? ಮುಂದೆ ಓದಿ...
ವರಾಹಿ ಬದಲು ದಿಲ್ ರಾಜು?
ಕೆಜಿಎಫ್ ಚಾಪ್ಟರ್ 1 ಚಿತ್ರವನ್ನು ತೆಲುಗು ಭಾಷೆಯಲ್ಲಿ ವರಾಹಿ ಸಂಸ್ಥೆ ಬಿಡುಗಡೆ ಮಾಡಿತ್ತು. ಇದೀಗ, ಚಾಪ್ಟರ್ 2ರಿಂದ ವರಾಹಿ ಸಂಸ್ಥೆ ಹಿಂದೆ ಸರಿದಿದೆ. ಕೆಜಿಎಫ್ ಚಿತ್ರತಂಡ ಹೆಚ್ಚು ಹಣ ಬೇಡಿಕೆಯಿಟ್ಟ ಕಾರಣ ವಿತರಣೆಯಿಂದ ಹಿಂದೆ ಹೆಜ್ಜೆಯಿಟ್ಟಿದೆ ಎಂಬ ಸುದ್ದಿ ಹೊರಬಿದ್ದಿದೆ. ಇದೀಗ, ಚಾಪ್ಟರ್ 2 ಚಿತ್ರವನ್ನು ತೆಲುಗಿನಲ್ಲಿ ಖ್ಯಾತ ನಿರ್ಮಾಪಕ ದಿಲ್ ರಾಜು ರಿಲೀಸ್ ಮಾಡಲಿದ್ದಾರೆ.
ಭಾರಿ ಮೊತ್ತಕ್ಕೆ ಕೆಜಿಎಫ್ ತೆಲುಗು ಹಕ್ಕು?
ಸಾಕ್ಷಿ ವೆಬ್ಸೈಟ್ ವರದಿ ಮಾಡಿರುವಂತೆ ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ದಿಲ್ ರಾಜು ಅವರು ವಿತರಣೆ ಮಾಡಲಿದ್ದಾರೆ. ಸದ್ಯದ ವರದಿ ಪ್ರಕಾರ ಸುಮಾರು 65 ಕೋಟಿ ಹಣ ನೀಡಿ ಕೆಜಿಎಫ್ ಚಾಪ್ಟರ್ 2 ಹಕ್ಕು ಖರೀದಿಸಿದ್ದಾರೆ ಎಂದು ಹೇಳಲಾಗಿದೆ.
5 ಕೋಟಿಗೆ ಸೇಲ್ ಆಗಿತ್ತು ಚಾಪ್ಟರ್ 1?
ಅಂದ್ಹಾಗೆ, ಕೆಜಿಎಫ್ ಚಾಪ್ಟರ್ 1 ಸಿನಿಮಾದ ತೆಲುಗು ವಿತರಣೆ ಹಕ್ಕು ಕೇವಲ 5 ಕೋಟಿಗೆ ಮಾರಾಟವಾಗಿತ್ತು. ತೆಲುಗು ವರ್ಷನ್ನಿಂದ ಸುಮಾರು 20 ಕೋಟಿ ಗಳಿಕೆ ಕಂಡಿತ್ತು ಎಂಬ ವರದಿ ಇದೆ. ಆದ್ರೀಗ, ಕೆಜಿಎಫ್ ಮೇಲಿನ ನಿರೀಕ್ಷೆ ಹೆಚ್ಚಾಗಿರುವುದರಿಂದ ಚಿತ್ರತಂಡ ಬೇಡಿಕೆ ಹೆಚ್ಚಿಸಿದೆ.
ಜುಲೈ 16ಕ್ಕೆ ಕೆಜಿಎಫ್
ಈ ಕಡೆ ತಮಿಳು ಭಾಷೆಯಲ್ಲೂ ಕೆಜಿಎಫ್ ಚಿತ್ರಕ್ಕೆ ಭಾರಿ ಕ್ರೇಜ್ ಇದ್ದು, ದಾಖಲೆ ಬೆಲೆಗೆ ವಿತರಣೆ ಹಕ್ಕು ಮಾರಾಟವಾಗಿದೆಯಂತೆ. ಆದರೆ, ನಿಖರವಾದ ಮಾಹಿತಿ ಲಭ್ಯವಾಗಿಲ್ಲ. ಇನ್ನುಳಿದಂತೆ ಜುಲೈ 16 ರಂದು ಸಿನಿಮಾ ರಿಲೀಸ್ ಆಗಲಿದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರದಲ್ಲಿ ಸಂಜಯ್ ದತ್, ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್, ಪ್ರಕಾಶ್ ರಾಜ್ ಸೇರಿದಂತೆ ಹಲವರು ನಟಿಸಿದ್ದಾರೆ.
This News Article is a Copy of FILMIBEAT
29-04-24 04:48 pm
HK News Desk
Prajwal Revanna, Jds, Sex videos: ಮೊಮ್ಮಗನ ರಾಸ...
29-04-24 04:19 pm
Prajwal Revanna video case: ಪ್ರಜ್ವಲ್ ರೇವಣ್ಣ...
29-04-24 02:11 pm
BJP MP Sreenivasa Prasad passes away: ಚಾಮರಾಜನ...
29-04-24 11:33 am
Bellari Accident, wedding: ಬಳ್ಳಾರಿ ; ಮದುವೆ ದಿ...
28-04-24 09:39 pm
29-04-24 12:33 pm
HK News Desk
ನಿಲ್ಲಿಸಿದ್ದ ಟಾಟಾ 407 ವಾಹನಕ್ಕೆ ಡಿಕ್ಕಿ ಹೊಡೆದ ಪಿ...
29-04-24 12:09 pm
ನಾಯಿಮರಿ ನಾಪತ್ತೆ ; 12 ವರ್ಷದ ಬಾಲಕಿ ಆತ್ಮಹತ್ಯೆ
28-04-24 10:35 pm
Alejandra Rodríguez, Miss Universe Buenos Air...
28-04-24 10:51 am
ಸುಪ್ರೀಂ ಕೋರ್ಟ್ ಚಾಟಿ ಬೆನ್ನಲ್ಲೇ ಎಚ್ಚೆತ್ತ ಕೇಂದ್ರ...
27-04-24 05:46 pm
29-04-24 11:05 am
Mangalore Correspondent
Contentful CEO Karthik Rau, Udupi: ಜಗತ್ತಿನ ಮು...
28-04-24 11:03 pm
ಕೇರಳದಲ್ಲಿ ಹಕ್ಕಿಜ್ವರ ಭೀತಿ ; ಕರ್ನಾಟಕದ ಗಡಿ ಜಿಲ್ಲ...
28-04-24 03:36 pm
Mangalore, Congress Mp candidate Padmaraj: ಕಾ...
27-04-24 11:06 pm
loksabha elections 2024, Mangalore: ದಕ್ಷಿಣ ಕನ...
27-04-24 09:43 pm
29-04-24 11:50 am
Bangalore Correspondent
Drugs case, Gujarat coast: ಬೋಟ್ ನಲ್ಲಿ ಸಿಕ್ತು...
28-04-24 09:46 pm
Bangalore crime, Instagram: ತಾಯಿಯ ಫೋಟೋ ಅಶ್ಲೀಲ...
28-04-24 05:22 pm
Bangalore crime, Divorce: ಇನ್ನೊಬ್ಬಳ ಜೊತೆ ಪತಿಯ...
27-04-24 01:37 pm
Mangalore crime, stabbed, Pawan: ಫರಂಗಿಪೇಟೆ ;...
26-04-24 03:59 pm