ಬ್ರೇಕಿಂಗ್ ನ್ಯೂಸ್
03-03-21 09:08 pm Source: FILMIBEAT ಸಿನಿಮಾ
ಸುಶಾಂತ್ ಸಿಂಗ್ ರಜಪೂತ್ ಹಾಗೂ ರಿಯಾ ಚಕ್ರವರ್ತಿ ಪರಸ್ಪರ ಪ್ರೇಮದಲ್ಲಿದ್ದಾಗ ಇಬ್ಬರೂ ಒಟ್ಟಿಗೆ ಸಿನಿಮಾ ಮಾಡಲು ತಯಾರಾಗಿದ್ದರು. ಕತೆ, ನಿರ್ಮಾಪಕರೂ ಓಕೆ ಆಗಿದ್ದರು. ಆದರೆ ಸಿನಿಮಾ ಸೆಟ್ಟೇರುವ ಹೊತ್ತಿಗೆ ಲಾಕ್ಡೌನ್ ಆಯಿತು, ಆ ನಂತರ ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಶರಣಾದರು.
ಆದರೆ ಆಗ ನಿಂತಿದ್ದ ಸುಶಾಂತ್ ಸಿಂಗ್-ರಿಯಾ ಚಕ್ರವರ್ತಿ ಸಿನಿಮಾ ಈಗ ಮತ್ತೆ ಪ್ರಾರಂಭವಾಗುತ್ತಿದೆ. ಸುಶಾಂತ್ ಸಿಂಗ್ ರಜಪೂತ್ ಬದಲಿಗೆ ಬೇರೊಬ್ಬ ನಾಯಕನನ್ನು ಹಾಕಿಕೊಂಡು ಸಿನಿಮಾ ಮಾಡುವುದಾಗಿ ಹೇಳಿದ್ದಾರೆ ನಿರ್ದೇಶಕರು.
ರಿಯಾ ಜೊತೆಗೆ ಈಗಾಗಲೇ 'ಚೆಹರೆ' ಸಿನಿಮಾ ಮಾಡಿರುವ ನಿರ್ದೇಶಕ ರೂಮಿ ಜಫ್ರಿ, ರಿಯಾ ಜೊತೆ ಮತ್ತೊಂದು ಸಿನಿಮಾ ಮಾಡುತ್ತೇನೆ ಎಂದು ಹೇಳಿದ್ದಾರೆ. ಸಿನಿಮಾದ ಕತೆಯೂ ಈಗಾಗಲೇ ತಯಾರಾಗಿದ್ದು, ನಾಯಕ-ನಾಯಕಿ ಪಾತ್ರವೂ ಸಹ ಅಂತಿಮವಾಗಿದೆಯಂತೆ.
ಸುಶಾಂತ್ ಸಿಂಗ್ ಹಾಗೂ ರಿಯಾ ಚಕ್ರವರ್ತಿ ಅವರೊಟ್ಟಿಗೆ ಲಾಕ್ಡೌನ್ ಗೂ ಮೊದಲೇ ಸಿನಿಮಾ ಯೋಜನೆ ಆಗಿತ್ತು. ಲಂಡನ್ನಲ್ಲಿ ನಡೆಯುವ ಪ್ರೇಮಕತಾ ಸಿನಿಮಾವನ್ನು ನಿರ್ಮಿಸುವ ಯೋಜನೆ ಮಾಡಿ ಇಬ್ಬರಿಗೂ ಕತೆ ಹೇಳಿ, ಅವರೂ ಸಹ ಒಪ್ಪಿಕೊಂಡಿದ್ದರು. ಆದರೆ ಈ ಲಾಕ್ಡೌನ್ ನಲ್ಲಿಯೇ ಬೇರೆಯೇ ನಡೆಯಿತು' ಎಂದಿದ್ದಾರೆ ರೂಮಿ ಜಫ್ರಿ.
ಸುಶಾಂತ್ ಸಿಂಗ್ ನಟಿಸಬೇಕಿದ್ದ ಸ್ಥಾನಕ್ಕೆ ಪ್ರತಿಭಾವಂತ ಸ್ಟಾರ್ ನಟನನ್ನೇ ಆಯ್ಕೆ ಮಾಡಿದ್ದಾರಂತೆ ರೂಮಿ. ಆದರೆ ಆ ನಾಯಕ ಯಾರು ಎಂದು ಮಾಧ್ಯಮಗಳ ಮುಂದೆ ಹೇಳಿಲ್ಲ. ಬದಲಿಗೆ ರಿಯಾ ಜೊತೆ ಕೆಲಸ ಮಾಡಲು ಆ ನಟನಿಗೆ ಬಹಳ ಇಷ್ಟವಿರುವುದಾಗಿ ಮಾತ್ರ ಹೇಳಿದ್ದಾರೆ. ನಾನು ಆ ನಟನಿಗೆ ಕತೆ ಹೇಳಿ ರಿಯಾ ಚಕ್ರವರ್ತಿ ನಾಯಕಿ ಎಂದು ಹೇಳಿದಾಗ, 'ನನಗೂ ಆಕೆಯೊಂದಿಗೆ ನಟಿಸಲು ಇಷ್ಟವಿದೆ.
ಆಕೆ ಸುಂದರ ಹಾಗೂ ಪ್ರತಿಭಾವಂತ ಹುಡುಗಿ. ಆಕೆ ಜಾಮೀನಿನ ಮೇಲಿದ್ದರೂ ನನಗೆ ಆಕೆಯೊಂದಿಗೆ ನಟಿಸಲು ಅಡ್ಡಿಯಿಲ್ಲ. ಸಂಜಯ್ ದತ್ ಸಹ ಜಾಮೀನಿನ ಮೇಲಿದ್ದಾಗ ಎಷ್ಟೋಂದು ಸಿನಿಮಾಗಳನ್ನು ಮಾಡಿದರು' ಎಂದು ಆ ನಟ ಹೇಳಿದ್ದಾರಂತೆ. ರಿಯಾ ಚಕ್ರವರ್ತಿ, ಅಮಿತಾಬ್ ಬಚ್ಚನ್, ಇಮ್ರಾನ್ ಅಶ್ಮಿ ಇನ್ನೂ ಹಲವರು ನಟಿಸಿರುವ 'ಚೆಹ್ರೆ' ಸಿನಿಮಾವು ಏಪ್ರಿಲ್ 30 ರಂದು ಬಿಡುಗಡೆ ಆಗುತ್ತಿದ್ದು, ಆ ಸಿನಿಮಾದ ಬಿಡುಗಡೆ ನಂತರ ರಿಯಾ ನಾಯಕಿಯಾಗಿರುವ ಹೊಸ ಸಿನಿಮಾ ಸೆಟ್ಟೇರಲಿದೆ. ಸಿನಿಮಾದ ನಿರ್ಮಾಣವನ್ನು ವಶು ಭಗ್ನಾನಿ ಮಾಡಲಿದ್ದಾರೆ.
This News Article Is A Copy Of FILMIBEAT
23-10-25 03:42 pm
HK News Desk
ಪಿಜಿಯಲ್ಲಿ ತಿಗಣೆ ಔಷಧಿ ದುರ್ವಾಸನೆಗೆ ವಿದ್ಯಾರ್ಥಿ ಬ...
23-10-25 12:46 pm
ಸಿಎಂ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ಅರ್ಹ ವ್ಯಕ್ತಿ ;...
22-10-25 08:12 pm
ರಾಜ್ಯದ ಸಂಪನ್ಮೂಲವನ್ನು ಹೈಕಮಾಂಡ್ ಸಮರ್ಪಣಾಮಸ್ತು ಮಾ...
21-10-25 11:01 pm
Dharmasthala Case, CM Siddaramaiah: ಧರ್ಮಸ್ಥಳ...
21-10-25 09:45 pm
23-10-25 03:39 pm
HK News Desk
ಶಬರಿಮಲೆಗೆ ಭೇಟಿಯಿತ್ತ ಮೊದಲ ಮಹಿಳಾ ರಾಷ್ಟ್ರಪತಿ ; ಪ...
22-10-25 10:56 pm
ರಾಷ್ಟ್ರಪತಿ ಮುರ್ಮು ಶಬರಿಮಲೆಗೆ ; ಹೆಲಿಪ್ಯಾಡ್ ನಲ್ಲ...
22-10-25 10:23 pm
ಜೈಶ್ ಮಹಿಳಾ ಉಗ್ರರಿಂದ ಆನ್ಲೈನ್ ತರಬೇತಿ ಕೋರ್ಸ್ ; ಜ...
22-10-25 05:45 pm
ಡ್ರೆಸ್ಸಿಂಗ್ ರೂಮಿನಲ್ಲಿ ಇಸ್ಲಾಂ ಪ್ರಚಾರ ಮಾಡಿದ್ದಕ...
21-10-25 03:11 pm
23-10-25 10:52 pm
Mangalore Correspondent
ಸತ್ತು ಬದುಕಿದ ಸುದ್ದಿ ಬಗ್ಗೆ ಯೇನಪೋಯ ಆಸ್ಪತ್ರೆ ಸ್ಪ...
23-10-25 10:46 pm
ಮಂಗಳೂರಿನಲ್ಲಿ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಪಂದ್ಯಾ...
23-10-25 07:35 pm
ಜಾನುವಾರು ಸಾಗಾಟಕ್ಕೆ ಪೊಲೀಸರ ತಡೆ ; ಲಾರಿಯಿಂದ ಹಗ್ಗ...
22-10-25 09:55 pm
ಗಟ್ಟಿಯವರ ಆಯುಷ್ಯ ಗಟ್ಟಿಯಿದೆ! ದೇರಳಕಟ್ಟೆ ವೈದ್ಯರು...
22-10-25 04:30 pm
23-10-25 06:53 pm
Mangalore Correspondent
Dj Halli Inspector Sunil, Rape: ಠಾಣೆಗೆ ಬಂದಿದ್...
23-10-25 05:20 pm
Puttur, Illegal cattle transport, Arrest: ಗೋಪ...
22-10-25 11:51 am
Mulki Fraud, Mangalore Police: ಹಣ ಡಬಲ್ ಆಮಿಷದಲ...
21-10-25 10:51 pm
ಅಭಿಷೇಕ್ ಹನಿಟ್ರ್ಯಾಪ್ ಕೇಸ್ ; ನ್ಯಾಯಕ್ಕಾಗಿ ಜಾಲತಾಣ...
21-10-25 08:24 pm