ಬರಲಿದೆ ದಂತಚೋರ ವೀರಪ್ಪನ್ ಮೇಲಿನ ಮೊದಲ ಕನ್ನಡ ವೆಬ್ ಸೀರೀಸ್

22-08-20 06:48 pm       Headline Karnataka News Network   ಸಿನಿಮಾ

ದಂತಚೋರ ವಿರಪ್ಪನ್ ಕುರಿತಂತೆ ವೆಬ್ ಸೀರಿಸ್ ಒಂದು ಬರುತ್ತಿದ್ದು ಅದಕ್ಕೆ ಕೆಎಸ್ಆರ್ ಆವರಣದಲ್ಲಿ ಕೆಎಸ್ಆರ್ ಪಿ ಎಡಿಜಿಪಿ ಅಲೋಕ್ ಕುಮಾರ್ ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿದರು.

ಬೆಂಗಳೂರು, ಆ.22:ಕಾಡುಗಳ್ಳ ವೀರಪ್ಪನ್ ಕುರಿತಾಗಿ ವೆಬ್ ಸೀರೀಸ್ ಶುರುವಾಗಿದೆ. ಈ ಹಿಂದೆ ವೀರಪ್ಪನ್ ಬಗ್ಗೆ ಅಟ್ಟಹಾಸ ಚಿತ್ರ ನಿರ್ಮಾಣ ಮಾಡಿದ್ದ ಎಎಂಆರ್ ರಮೇಶ್ ವೆಬ್ ಸೀರೀಸ್ ನಿರ್ಮಾಣ ಮಾಡಲು ಮುಂದಾಗಿದ್ದಾರೆ. 

ದಂತಚೋರ ವೀರಪ್ಪನ್ ಕುರಿತಾಗಿ ನಿರ್ಮಾಣ ಆಗುತ್ತಿರುವ ವೆಬ್ ಸೀರೀಸ್ ಗೆ ಹಿರಿಯ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿದರು. ಕೆಎಸ್ಆರ್ ಪಿ ಅವರಣದ ದೇವಸ್ಥಾನದಲ್ಲಿ ವೆಬ್ ಸೀರೀಸ್ ಚಿತ್ರೀಕರಣಕ್ಕೆ ಅಲೋಕ್ ಕುಮಾರ್ ಚಾಲನೆ ನೀಡಿದರು. ಈ ವೇಳೆ ವೆಬ್ ಸೀರೀಸ್ ನಿರ್ದೇಶಕ ಎಎಂಆರ್ ರಮೇಶ್, ನಟ ಕಿಶೋರ್ ಹಾಗೂ ಚಿತ್ರತಂಡ ಹಾಜರಿದ್ದರು.

ಕಾಡುಗಳ್ಳ, ದಂತಚೋರ ಎಂದೇ ಕುಖ್ಯಾತನಾಗಿದ್ದ ವೀರಪ್ಪನ್ ಬೇಟೆಯಲ್ಲಿ ರಾಜ್ಯದ ಕೆಎಸ್ಆರ್ ಪಿ ಪ್ರಮುಖ ಪಾತ್ರ ವಹಿಸಿತ್ತು. ವೀರಪ್ಪನ್ ಪತ್ತೆ ಮತ್ತು ಬಂಧನದ ಕಾರ್ಯಾಚರಣಗಾಗಿ ರಚನೆಯಾಗಿದ್ದ ಎಸ್ ಟಿ ಎಫ್ ಪಡೆಯಲ್ಲಿ ಕೆಎಸ್ಆರ್ ಪಿ ಪಡೆ ಪ್ರಮುಖ ಪಾತ್ರ ವಹಿಸಿತ್ತು. ಹಾಗೂ ಎಎನ್ಎಫ್ ಪಡೆ ಸಹ ಬಂಧನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.