ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದರೆ, ಅದು ನನ್ನ ಆತ್ಮಹತ್ಯೆಯಲ್ಲವೆಂದು ತಿಳಿಯಿರಿ' - ಕಂಗನಾ ರಣಾವತ್

31-07-20 07:11 pm       Headline Karnataka News Network   ಸಿನಿಮಾ

''ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದರೆ, ಅದು ನನ್ನ ಆತ್ಮಹತ್ಯೆಯಲ್ಲವೆಂದು ತಿಳಿಯಿರಿ'' ಎಂದು ಬಾಲಿವುಡ್‌ ಕ್ವೀನ್‌ ಕಂಗನಾ ರಣಾವತ್ ಹೇಳಿದ್ದಾರೆ.

ನವದೆಹಲಿ : ''ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದರೆ, ಅದು ನನ್ನ ಆತ್ಮಹತ್ಯೆಯಲ್ಲವೆಂದು ತಿಳಿಯಿರಿ'' ಎಂದು ಬಾಲಿವುಡ್‌ ಕ್ವೀನ್‌ ಕಂಗನಾ ರಣಾವತ್ ಹೇಳಿದ್ದಾರೆ.

ಕಂಗನಾ ರಣಾವತ್, ಸುಶಾಂತ್‌ ಸಿಂಗ್‌ ರಜಪೂತ್‌ ಸಾವು ಪ್ರಕರಣ ಆತ್ಮಹತ್ಯೆಯಲ್ಲ, ಅದು ಕೊಲೆ ಎಂದು ನಿರಂತರವಾಗಿ ಆರೋಪಿಸುತ್ತಾ ಬಂದಿದ್ದು ಸುಶಾಂತ್‌ ಸಾವಿಗೂ ಹಿಂದಿನ ರಾತ್ರಿ ರಾಜಕಾರಣಿಯೊಬ್ಬರ ಮಗ ಸುಶಾಂತ್ ಸಿಂಗ್ ರಜಪೂತ್ ಅವರ ಪಾರ್ಟಿಯಲ್ಲಿ ಹಾಜರಿದ್ದ ಬಗ್ಗೆ ಕೆಆರ್‌ಕೆ ಟ್ವೀಟ್‌ನ್ನು ಉಲ್ಲೇಖಿಸಿ ಸುದ್ದಿಗೆ ಪ್ರತಿಕ್ರಿಯಿಸಿದ ಟೀಮ್‌ ಕಂಗನಾ ರಣಾವತ್‌, ''ಎಲ್ಲರಿಗೂ ತಿಳಿದಿದೆ ಆದರೆ ಯಾರೂ ಅವರ ಹೆಸರನ್ನು ಹೇಳಬಾರದು. ಕರಣ್ ಜೋಹರ್ ಅವರ ಅತ್ಯುತ್ತಮ ಸ್ನೇಹಿತ, ವಿಶ್ವದ ಅತ್ಯುತ್ತಮ ಸಿಎಂ ಅವರ ಅತ್ಯುತ್ತಮ ಪುತ್ರ, ಪ್ರೀತಿಯಿಂದ ಬೇಬಿ ಪೆಂಗ್ವಿನ್ ಎಂದು ಕರೆಯುತ್ತಾರೆ. ನನ್ನ ಮನೆಯಲ್ಲಿ ನೇಣು ಬಿಗಿದುಕೊಂಡರೆ, ದಯವಿಟ್ಟು ನಾನು ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ತಿಳಿಯಿರಿ ಎಂದು ಕಂಗನಾ ರೌನತ್‌ ಹೇಳುತ್ತಾರೆ'' ಎಂದು ತಿಳಿಸಿದೆ.

ಕೆಲವು ದಿನಗಳ ಹಿಂದೆ ಸುದ್ದಿ ವಾಹಿನಿಯೊಂದರಲ್ಲಿ ಖಡಕ್‌ ಆಗಿ ಮಾತನಾಡಿದ್ದ ಕಂಗನಾ ಅವರು, ಹಲವರ ಮೇಲೆ ಗಂಭೀರವಾದ ಆರೋಪ ಮಾಡಿದ್ದಾರೆ.

ಇತ್ತೀಚೆಗೆ ಕಂಗನಾ ಅವರ ತಂಡ, ನಟಿ ದೀಪಿಕಾ ಪಡುಕೋಣೆ ಅವರು ಸುಶಾಂತ್ ಸಿಂಗ್ ರಜಪೂತ್ ಅವರನ್ನು ದೂರ ತಳ್ಳಿದ್ದಾರೆ ಎಂದು ಆರೋಪಿಸಿದ್ದು 2018 ರ ಡಿಸೆಂಬರ್‌ನಲ್ಲಿ ದೀಪಿಕಾ ಅವರು ತನ್ನ ವಿವಾಹಕ್ಕೆ ಸುಶಾಂತ್ ಮತ್ತು ಕಂಗನಾ ಇಬ್ಬರನ್ನೂ ಆಹ್ವಾನಿಸಿಲ್ಲ ಎಂಬ ವರದಿಯೊಂದರ ಸ್ಕ್ರೀನ್‌ಶಾಟ್ ಅನ್ನು ಟ್ವೀಟ್‌ ಮಾಡಿದೆ.