ಬ್ರೇಕಿಂಗ್ ನ್ಯೂಸ್
16-08-21 10:58 am Filmbeat: Manjunatha C ಸಿನಿಮಾ
ಹಿಂದಿಯ ಜನಪ್ರಿಯ ಸಂಗೀತ ರಿಯಾಲಿಟಿ ಶೋ ಇಂಡಿಯನ್ ಐಡಲ್ 12 ನಿನ್ನೆ ಮುಕ್ತಾಯವಾಗಿದೆ. ನಿನ್ನೆ ನಡೆದ ಫಿನಾಲೆಯಲ್ಲಿ ಅಂತಿಮ ಸುತ್ತಿಗೆ ಬಂದಿದ್ದ ಗಾಯಕರು ಪ್ರಶಸ್ತಿಗಾಗಿ ಸೆಣೆಸಾಡಿದರು, ಅಂತಿಮವಾಗಿ ಪ್ರಶಸ್ತಿಯು ಪವನ್ದೀಪ್ ಪಾಲಾಗಿದೆ.
ಸತತವಾಗಿ 12 ಗಂಟೆಗಳ ಕಾಲ ನಡೆದ ಫಿನಾಲೆಯಲ್ಲಿ ಆರು ಸ್ಪರ್ಧಿಗಳು ಪ್ರಶಸ್ತಿಗಾಗಿ ಗಾಯನದ ಮೂಲಕ ಸೆಣಸಾಡಿದರು. ಪವನ್ದೀಪ್ ರಾಜನ್, ಅರುಣಿತಾ ಕಂಜಿಲಾಲ್, ಎಂಡಿ ಧನಿಶ್, ನಿಹಾಲ್ ಟುರೊ, ಶಣ್ಮುಕಪ್ರಿಯ, ಸೈಲ್ ಕಾಂಬ್ಳೆ ಅವರುಗಳು ಫಿನಾಲೆ ವೇದಿಕೆ ಮೇಲೆ ಗಾನ ಸುಧೆ ಹರಿಸಿದರು.



ಅಂತಿಮವಾಗಿ ಪವನ್ದೀಪ್ ರಾಜನ್ ಅನ್ನು ವಿನ್ನರ್ ಆಗಿ ಘೋಷಿಸಲಾಯ್ತು. ಅರುಣಿತಾ ಕಂಜಿಲಾಲ್ ಮೊದಲ ರನರ್ಅಪ್, ಸೈಲ್ ಕಾಂಬ್ಳೆ ಅನ್ನು ಎರಡನೇ ರನ್ನರ್ ಅಪ್ ಆಗಿ ಘೋಷಿಸಲಾಯ್ತು. ಶೋ ವಿಜೇತ ಪವನ್ದೀಪ್ಗೆ 25 ರ ಮೊತ್ತದ ಚೆಕ್ ಹಾಗೂ ಟ್ರೋಫಿಯನ್ನು ನೀಡಲಾಯ್ತು.

ಶೋ ಅನ್ನು ಜಡ್ಜ್ ಮಾಡಿದ ಅನು ಮಲ್ಲಿಕ್, ಹಿಮೇಶ್ ರೆಶಮಿಯಾ, ಸೋನು ಕಕ್ಕರ್ ಅವರುಗಳು ಎಲ್ಲ ಸ್ಪರ್ಧಿಗಳು ಚೆನ್ನಾಗಿ ಹಾಡಿದರೆಂದು ಹುರಿದುಂಬಿಸಿದರು. ಆದರೆ ಪವನ್ದೀಪ್ ರಾಜನ್ ಪ್ರದರ್ಶನ ಅತ್ಯದ್ಭುತವಾಗಿತ್ತೆಂದು ಕೊಂಡಾಡಿದರು.

ಪ್ರಶಸ್ತಿ ಗೆದ್ದ ಬಳಿಕ ಮಾತನಾಡಿದ ಪವನ್ದೀಪ್ ರಾಜನ್, ''ಇಂಡಿಯನ್ ಐಡಲ್ನಲ್ಲಿ ಭಾಗವಹಿಸಿದ್ದೇ ಕನಸು ನನಸಾದಂಥಹಾ ಅನುಭವ. ಫಿನಾಲೆವರೆಗೆ ಬಂದಿದ್ದು ಇನ್ನೂ ಅದ್ಭುತ ಅನುಭವ. ಶೋನ ವಿಜೇತ ನಾನಾಗಿದ್ದೇನೆ ಎಂಬುದನ್ನು ಇನ್ನೂ ನನಗೆ ನಂಬಲಾಗುತ್ತಿಲ್ಲ. ಇದೊಂದು ದೊಡ್ಡ ಗೌರವ ನನಗೆ. ನನಗೆ ಮತ ಹಾಕಿ ನಾನು ಗೆಲ್ಲುವಂತೆ ಮಾಡಿದ ಎಲ್ಲ ಅಭಿಮಾನಿಗಳಿಗೆ ನಾನು ಧನ್ಯವಾದ ಹೇಳುತ್ತನೆ. ಇಂಡಿಯನ್ ಐಡಲ್ ವರೆಗೆ ನನ್ನ ಪಯಣದಲ್ಲಿ ಜೊತೆಯಾಗಿದ್ದ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ. ವಿಶೇಷವಾಗಿ ಇಂಡಿಯನ್ ಐಡಲ್ನ ಎಲ್ಲ ಸಂಗೀತಗಾರರಿಗೆ, ನಮ್ಮ ಕೋಚ್ಗಳಿಗೆ ಈ ಟ್ರೋಫಿ ನಿಮ್ಮೆಲ್ಲರಿಗೂ ಸೇರಿದ್ದು'' ಎಂದಿದ್ದಾರೆ.
(Kannada Copy of Filmbeat Kannada)
Pawandeep Rajan took home Indian Idol 12 trophy along with the prize money of Rs lakh. The other finalists were Arunita Kanjilal, Mohd Danish, Sayli Kamble, Nihal Tauro and Shanmukha Priya.
03-02-26 11:53 am
Bangalore Correspondent
Charmadi Ghat: ಚಾರ್ಮಾಡಿ ಘಾಟಿ ಅರಣ್ಯಕ್ಕೆ ಮತ್ತೆ...
02-02-26 11:02 pm
ಮುಖಂಡರ ಬಳಿಕ ಮಕ್ಕಳ ದರ್ಬಾರ್! ದಾವಣಗೆರೆಯಲ್ಲಿ ಕಾಂಗ...
02-02-26 09:52 pm
Manjeshwar Murder: ಆಸ್ತಿ ವಿಚಾರದಲ್ಲಿ ಗಲಾಟೆ ; ಬ...
02-02-26 08:14 pm
ಪೊಲೀಸರಿಗೇ ಸಡ್ಡು ; ಹಾಡಹಗಲೇ ಸಿಲಿಕಾನ್ ಸಿಟಿಯಲ್ಲಿ...
02-02-26 05:12 pm
03-02-26 11:55 am
HK News Desk
ಸುರಕ್ಷಿತ ಗ್ರೀನ್ ಎನರ್ಜಿ ; ಮಂಗಳೂರಿನಲ್ಲಿ ʼಕಡಲ ಪವ...
02-02-26 10:40 pm
ಎಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ ; ಐ...
02-02-26 11:59 am
ಕೇಂದ್ರ ಬಜೆಟ್ ; ಏಳು ಹೈಸ್ಪೀಡ್ ರೈಲು ಕಾರಿಡಾರ್ ಘೋಷ...
01-02-26 02:00 pm
ಫೆಬ್ರವರಿ 1ಕ್ಕೆ ದೇಶದ ಕಣ್ಣು ದೆಹಲಿ ಕಡೆ! ಟ್ಯಾಕ್ಸ್...
31-01-26 10:20 pm
02-02-26 07:36 pm
Udupi Correspondent
ವಿಜಯೇಂದ್ರ ಕಾರ್ಯಶೈಲಿಗೆ ಮಾಜಿ ಸಂಸದ ನಳಿನ್ ಕುಮಾರ್...
02-02-26 05:09 pm
'ನನ್ನ ಭಾಷಣದ ಕಾರಣಕ್ಕೆ ಗಲಾಟೆ, ಸಂಘರ್ಷ ಆಗಿದ್ದಿದೆಯ...
01-02-26 10:29 pm
Karnataka High Court, Mahesh Shetty Timarodi:...
01-02-26 07:52 pm
ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ ; ಐಟಿ ರಾಜಕೀಯ ಕಾರಣಕ...
31-01-26 08:40 pm
03-02-26 01:05 pm
HK News Desk
ಪೋಲೆಂಡಿನಲ್ಲಿ ಉದ್ಯೋಗ ವೀಸಾ ; 4.50 ಲಕ್ಷ ಹಣ ಪಡೆದು...
03-02-26 11:31 am
ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ ; 65 ವರ್ಷದ ವೃದ್ಧ...
02-02-26 10:37 pm
ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡನ ಮೇಲೆ ತಲ್ವಾರು ದಾಳಿ...
02-02-26 12:16 pm
Kishor Salve Arrest: ಚೋರ್ಲಾ ಘಾಟ್ 400 ಕೋಟಿ ದರೋ...
01-02-26 03:41 pm