ನನ್ನ ಸಹಾಯಕ್ಕೆ ಯಾರೂ ಬರಲಿಲ್ಲ‌‌.. ಸಾಯ್ತಿದ್ದೇನೆ, ಸತ್ತರೆ ಇವರೇ ಹೊಣೆ ; ನಟಿ ವಿಜಯಲಕ್ಷ್ಮಿ ಆತಂಕ

17-09-21 11:50 am       Headline Karnataka News Network   ಸಿನಿಮಾ

ನಾನು ಇನ್ನು ಬದುಕುವುದು ಅನುಮಾನ ಅಂತಾ ನಟಿ ವಿಜಯ ಲಕ್ಷ್ಮೀ ಅತಂಕದ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಚೆನ್ನೈ, ಸೆ.17 : ನಾನು ಇನ್ನು ಬದುಕುವುದು ಅನುಮಾನ ಅಂತ ತಮಿಳು ನಟಿ ವಿಜಯ ಲಕ್ಷ್ಮೀ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ನನಗೆ ಕೋವಿಡ್ ಪಾಸಿಟಿವ್ ಆಗಿ ನ್ಯುಮೋನಿಯಾ ಆಗಿತ್ತು. ಆಸ್ಪತ್ರೆಯ ಖರ್ಚಿಗೂ ದುಡ್ಡಿಲ್ಲದೆ ಡಿಸ್ಚಾರ್ಜ್ ಮಾಡಿಕೊಂಡು ಬಂದಿದ್ದೇನೆ. ಜ್ವರ ಬಂದು ವಾಂತಿ ಮಾಡಿ ಸುಸ್ತಾಗಿದ್ದೇನೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. 

ನಾನು ಸಾಕಷ್ಟು ಸಮಸ್ಯೆಗಳಿಂದ ಬಳಲುತ್ತಿದ್ದೇನೆ. ಸಹಾಯಕ್ಕಾಗಿ ಕಲಾವಿದರ ಸಂಘಕ್ಕೆ ಸಹಾಯ ಕೇಳಿ ಕೇಳಿ ಸುಸ್ತಾಗಿ ಹೋಗಿದೆ. ದಯವಿಟ್ಟು ಇದನ್ನ ಗಂಭೀರವಾಗಿ ತೆಗೆದುಕೊಳ್ಳಿ. ಅಭಿಮಾನಿಗಳೇ, ನೀವು ತಿಳಿದುಕೊಳ್ಳಬೇಕು. ಎಲ್ಲರೂ ಸೇರಿ ನನ್ನನ್ನು ಮರ್ಡರ್ ಮಾಡಿದಂತೆ ನನ್ನ ಕಥೆ ಮುಗಿಸಿದ್ದಾರೆ ಎಂದು ಅಳಲು ತೊಡಿಕೊಂಡಿದ್ದಾರೆ. ನನಗೆ ಇದರ ಮುಂದೆ ಶಕ್ತಿ ಇಲ್ಲ. ಯಾರ ಸಹಾಯವೂ ಸಿಗುತ್ತಿಲ್ಲ. ಎಲ್ಲರಲ್ಲೂ ಸಹಾಯ ಕೇಳಿ ಸುಸ್ತಾಗಿದ್ದೇನೆ ಎಂದಿದ್ದಾರೆ. 

ನಾನು ಸತ್ತು ಹೋದರೆ ಇವರೆಲ್ಲರೂ ಸೇರಿ ಸಾಯಿಸಿದರು ಅಂತ ಗಂಭೀರವಾಗಿ ತೆಗೆದುಕೊಳ್ಳಿ. ಸಹಾಯ ಮಾಡದೇ ನನ್ನನ್ನು ಸಾಯಿಸುತ್ತಿದ್ದಾರೆ. ನಾನು ಉಳಿತೀನಾ ಇಲ್ಲವಾ ನನಗೆ ಗೊತ್ತಿಲ್ಲ ಎಂದು ಅಭಿಮಾನಿಗಳಲ್ಲಿ ದುಃಖ ತೊಡಿಕೊಂಡಿದ್ದಾರೆ. ಈ ಹಿಂದೆಯೂ ನಟಿ ವಿಜಯ ಲಕ್ಷ್ಮೀ ಸಾಕಷ್ಟು ಬಾರಿ ಸಹಾಯವನ್ನು ಸಿನಿಮಾ ಮಂದಿಯಲ್ಲಿ ಕೇಳಿದ್ದರು. ಯಾರು ಸ್ಪಂದಿಸದೆ ಇದ್ದಾಗ ಅವರ ವಿರುದ್ದವೂ ವಿಡಿಯೋದಲ್ಲಿ ಮಾತನಾಡಿ ತಮ್ಮ ಕೋಪ ಹಾಗೂ ಅಸಹಾಯಕತೆಯನ್ನು ಹೊರ ಹಾಕಿದ್ದರು.