ಬ್ರೇಕಿಂಗ್ ನ್ಯೂಸ್
13-11-22 07:29 pm HK News Desk ಡಾಕ್ಟರ್ಸ್ ನೋಟ್
ಧಾರವಾಡ, ನ.13: ಮಕ್ಕಳ ಆರೋಗ್ಯದಲ್ಲಿ ಕಣ್ಣು ಅತಿಮುಖ್ಯ ಪಾತ್ರವನ್ನು ವಹಿಸುತ್ತದೆ. ಕಣ್ಣಿನ ದೃಷ್ಟಿಯ ಬೆಳವಣಿಗೆ ಮಗು ಗರ್ಭವಾಸ್ಥೆಯಲ್ಲಿರುವಾಗಲೇ ಶುರುವಾಗಿ ಮಗುವಿನ ಜನನದ ನಂತರ ಪ್ರೌಡಾವಸ್ಥೆಯವರೆಗೂ ಮುಂದುವರೆಯುತ್ತದೆ. ಕಣ್ಣಿನ ಸಮಸ್ಯೆಯನ್ನು ನಾವು ಎಷ್ಟು ಬೇಗ ಪತ್ತೆಹಚ್ಚುತ್ತೇವೆಯೋ ಅಷ್ಟು ಒಳ್ಳೆಯದು. ಮಕ್ಕಳ ಕಣ್ಣುಗಳನ್ನು ಪರೀಕ್ಷಿಸಿ ಸೂಕ್ತ ಚಿಕಿತ್ಸೆ ಕೊಡಿಸುವದರಿಂದ ಸಾಕಷ್ಟು ಕಣ್ಣಿನ ತೊಂದರೆಗಳನ್ನು ಪರಿಹರಿಸಬಹುದು ಹಾಗೂ ಶಾಶ್ವತ ಅಂಧತ್ವವನ್ನು ತಡೆಗಟ್ಟಬಹುದು ಎಂದು ಡಾ. ರೂಪಾ ಹಿರೇಮಠ ಚಿಕ್ಕ ಮಕ್ಕಳ ನೇತ್ರ ತಜ್ಞರು ಎಂ. ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ, ಧಾರವಾಡ, ಇಂದು ನಗರದ ಎಂ. ಎಂ. ಜೋಶಿ ಕಣ್ಣಿನ ಆಸ್ಪತ್ರೆಯಲ್ಲಿ ಮಕ್ಕಳ ದಿನಾಚರಣೆಯ ನಿಮಿತ್ತ ಜರುಗಿದ ಉಚಿತ ನೇತ್ರ ತಪಾಸಣೆಯಲ್ಲಿ ತಿಳಿಸಿದರು. ಮಕ್ಕಳ ಕಣ್ಣಿನ ಸಾಮಾನ್ಯ ತೊಂದರೆಗಳು, ಲಕ್ಷಣಗಳು ಹಾಗೂ ಕೆಲವು ಸೂಚನೆಗಳನ್ನು ಕೂಡ ಈ ಕೆಳಗಿನಂತೆ ನೀಡಿದ್ದಾರೆ.
ಸಾಮಾನ್ಯವಾಗಿ ಮಕ್ಕಳಲ್ಲಿ ಕಂಡು ಬರುವ ತೊಂದರೆಗಳಾದ ದ್ರಷ್ಟಿ ದೋಷ, ಮೆಳ್ಳುಗಣ್ಣು, ಅಲರ್ಜಿ ಯಿಂದಾಗುವ ತೊಂದರೆಗಳು, ಕಣ್ಣಿಗಾಗುವ ಗಾಯಗಳು, ಕಾಚಬಿಂದು ಹಾಗೂ ಅಕ್ಷಿಪಟಲದ ತೊಂದರೆಗಳಿಗೆ ದೊಡ್ಡವರ ಹಾಗೆ ಚಿಕ್ಕ ಮಕ್ಕಳು ತಮ್ಮ ತೊಂದರೆಯನ್ನು ಹೇಳಿಕೊಳ್ಳುವದಿಲ್ಲ ಆದ್ದರಿಂದ ಇವುಗಳನ್ನು ಸರಿಯಾದ ಸಮಯದಲ್ಲಿ ಪತ್ತೆಹಚ್ಚುವಲ್ಲಿ ಪಾಲಕರ ಹಾಗೂ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ. ಕಾರಣ ಮಕ್ಕಳು ಪುಸ್ತಕವನ್ನು ಹತ್ತಿರ ಹಿಡಿದು ಓದುವದು, ಟಿ.ವಿ. ಯನ್ನು ಹತ್ತಿರದಿಂದ ನೋಡುವದು, ಕಣ್ಣುಗಳನ್ನು ಉಜ್ಜುವದು, ಕಣ್ಣುಗಳಲ್ಲಿ ನೀರು ಬರುವದು, ಕಣ್ಣು ಕೆಂಪಗಾಗುವದು, ಮೆಳ್ಳಗಣ್ಣು, ಕರಿಗುಡ್ಡೆಯ ಕಲೆಗಳು ಈ ತರಹದ ಸಾಮಾನ್ಯ ಲಕ್ಷಣಗಳು ಮಕ್ಕಳಲ್ಲಿ ಕಂಡು ಬಂದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ.
ಮಕ್ಕಳ ಕಣ್ಣಿನ ಆರೋಗ್ಯಕ್ಕೆ ಕೆಲವು ಸಲಹೆಗಳು
ಮಕ್ಕಳು ಮೊಬೈಲ್ ಬಳಕೆಯನ್ನು ಕಡಿಮೆ ಅಥವಾ ಸಾಧ್ಯವಾದಷ್ಟು ಬಳಸದೆ ಇರುವದು ಉತ್ತಮ, ಸೂರ್ಯನ ಬೆಳಕಿನಲ್ಲಿ ಆಟವಾಡುವುದು, ಕಣ್ಣುಗಳನ್ನು ಉಜ್ಜದೇ ಇರುವದು, ಮೆಳ್ಳುಗಣ್ಣನ್ನು ನಿರ್ಲಕ್ಷಿಸದೆ ಸೂಕ್ತ ಚಿಕಿತ್ಸೆ ಪಡೆಯುವುದು, ಕಣ್ಣಿಗೆ ಯಾವುದೇ ತೊಂದರೆಯಾದಲ್ಲಿ ತಕ್ಷಣ ವೈದ್ಯರನ್ನು ಕಾಣುವದು, ಶಾಲೆಗೆ ಹೋಗುವ ಎಲ್ಲ ಮಕ್ಕಳಿಗೆ ವರ್ಷದಲ್ಲಿ ಒಂದು ಸಲ ಕಣ್ಣಿನ ತಪಾಸಣೆ ಮಾಡಿಸುದು ಉತ್ತಮ ಎಂದು ಅಭಿಪ್ರಾಯ ಪಟ್ಟರು.
ಧಾರವಾಡದ ವಿವಿಧ ಶಾಲಾ ವಿಧ್ಯಾರ್ಥಿಗಳು ಪಾಲಕರೊಂದಿಗೆ ಆಗಮಿಸಿ ನೇತ್ರ ತಪಾಸಣೆಯಲ್ಲಿ ಭಾಗವಹಿಸಿದರು.
M M Joshi Eye Hospital Hubbali conducts free eye checkup on childrens day
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
09-09-25 11:09 pm
HK News Desk
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
09-09-25 10:47 pm
Mangalore Correspondent
Mangalore Accident, Kulur, NHAI: ಕುಳೂರು ರಸ್ತೆ...
09-09-25 08:01 pm
YouTuber Munaf, SIT, Dharmasthala Case: ಎಸ್ಐಟ...
09-09-25 05:59 pm
Mangalore, NHAI, Padmaraj: ಇನ್ನೆಷ್ಟು ಜೀವ ಬಲಿಯ...
09-09-25 05:14 pm
MLA Vedavyas Kamath, Mangalore, Yakshangana:...
09-09-25 04:47 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm