ಬ್ರೇಕಿಂಗ್ ನ್ಯೂಸ್
02-01-23 08:38 pm Source: Vijayakarnataka ಡಾಕ್ಟರ್ಸ್ ನೋಟ್
ಇತ್ತೀಚೆಗಂತೂ ಮಧುಮೇಹ ರೋಗಿಗಳ ಸಂಖ್ಯೆಯು ನಿರಂತರವಾಗಿ ಹೆಚ್ಚುತ್ತಿದೆ . ದೈನಂದಿನ ಜೀವನದಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವುದು ಸ್ವಲ್ಪ ಸವಾಲಿನ ಸಂಗತಿಯಾಗಿದೆ. ಏಕೆಂದರೆ ನಮ್ಮ ಜೀವನಶೈಲಿ, ಆಹಾರ ಕ್ರಮಗಳೂ ಇದಕ್ಕೆ ಕಾರಣವಾಗಿರಬಹುದು. ಇಂತಹ ಪರಿಸ್ಥಿತಿಯಲ್ಲಿ ಕುಳಿತು ಕೆಲಸ ಮಾಡುವ ಯುವಕರು ಮಧುಮೇಹಕ್ಕೆ ಒಳಗಾಗುವ ಅಪಾಯವಿದೆ.
ಟೈಪ್ -2 ಮಧುಮೇಹ
ಜೀವನಶೈಲಿ ಅಸ್ವಸ್ಥತೆಗಳು ಮತ್ತು ಆಹಾರ ಸೇವನೆಯ ಅಜಾಗರೂಕತೆಯಿಂದ ಉಂಟಾಗುವ ಮಧುಮೇಹವನ್ನು ಟೈಪ್ -2 ಮಧುಮೇಹ ಎಂದು ಕರೆಯಲಾಗುತ್ತದೆ. ಈ ರೋಗವು ಬರದಂತೆ ತಡೆಯಬಹುದು ಮತ್ತು ಅದನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಇದಕ್ಕಾಗಿ ಇಲ್ಲಿ ಹೇಳಿರುವ ಮೂರು ಸೂಪರ್ಫುಡ್ಗಳನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಇವುಗಳು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ.
ಮಧುಮೇಹವನ್ನು ತಡೆಯುವ ಮೂರು ಸೂಪರ್ಫುಡ್ಗಳು
ಇವು ಟೈಪ್-2 ಮಧುಮೇಹವನ್ನು ತಡೆಗಟ್ಟುವಲ್ಲಿ ಮತ್ತು ಸಕ್ಕರೆ ಕಾಯಿಲೆ ಇರುವವರ ರಕ್ತದ ಸಕ್ಕರೆಯನ್ನು ನಿಯಂತ್ರಿಸುವಲ್ಲಿ ಅತ್ಯಂತ ಪರಿಣಾಮಕಾರಿ ಫಲಿತಾಂಶಗಳನ್ನು ನೀಡುವ ಆಯುರ್ವೇದ ಗಿಡಮೂಲಿಕೆಗಳಾಗಿವೆ. ಅನೇಕ ಗಂಭೀರ ಕಾಯಿಲೆಗಳನ್ನು ಗುಣಪಡಿಸುವ ಔಷಧಿಗಳನ್ನು ತಯಾರಿಸಲು ಇವುಗಳನ್ನು ಬಳಸಲಾಗುತ್ತದೆ. ಹಾಗಾಗಿ ಇವು ಬರೀ ಅಡುಗೆಗೆ ಬಳಸುವ ಮಸಾಲೆಗಳಲ್ಲ ಎನ್ನುವುದು ನೆನಪಿರಲಿ.
ಈ ಗಿಡಮೂಲಿಕೆಗಳನ್ನು ಹೇಗೆ ಬಳಸುವುದು?
ದಾಲ್ಚಿನ್ನಿ, ಕರಿಮೆಣಸು, ಮೆಂತೆ ಕಾಳುಗಳು ನಮ್ಮ ಅಡುಗೆಮನೆಯಲ್ಲಿ ಸುಲಭವಾಗಿ ದೊರೆಯುತ್ತವೆ. ಏಕೆಂದರೆ ಅವುಗಳನ್ನು ಅನೇಕ ರೀತಿಯ ಸಾಮಾನ್ಯ ಆಹಾರಗಳನ್ನು ತಯಾರಿಸಲು ಬಳಸಲಾಗುತ್ತದೆ. ಆದರೆ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ನೀವು ಅವುಗಳನ್ನು ಹೇಗೆ ಸೇವಿಸಬೇಕು ಎಂಬುದರ ಕುರಿತು ಇಲ್ಲಿ ತಿಳಿಯಿರಿ.
ಮೆಂತ್ಯವನ್ನು ಹೇಗೆ ಸೇವಿಸುವುದು?
ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ನೀವು ಮೆಂತ್ಯ ಬೀಜಗಳನ್ನು ಎರಡು ರೀತಿಯಲ್ಲಿ ಬಳಸಬಹುದು. ಮೊದಲ ವಿಧಾನವೆಂದರೆ ಒಂದು ಚಮಚ ಮೆಂತ್ಯವನ್ನು ರಾತ್ರಿ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಅದನ್ನು ಸೇವಿಸುವುದು.
ಎರಡನೆಯ ವಿಧಾನವೆಂದರೆ ನೀವು ಮೆಂತ್ಯ ಬೀಜಗಳನ್ನು ಪುಡಿ ಮಾಡಿಟ್ಟುಕೊಂಡು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು. ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಲು ಸಾಧ್ಯವಾಗದಿದ್ದರೆ ರಾತ್ರಿ ಮಲಗುವ ಮುನ್ನ ನೀರಿನೊಂದಿಗೆ ಸೇವಿಸಿ.
ದಾಲ್ಚಿನ್ನಿ ಸೇವಿಸುವುದು ಹೇಗೆ?
ಅರ್ಧ ಚಮಚ ದಾಲ್ಚಿನ್ನಿ ಪುಡಿ, ಅರ್ಧ ಚಮಚ ಅರಿಶಿನ ಮತ್ತು ಅರ್ಧ ಚಮಚ ಮೆಂತ್ಯ ಪುಡಿಯನ್ನು ಮಿಶ್ರಣ ಮಾಡಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ.
ಪ್ರತಿದಿನ ಮಿಶ್ರಣ ಮಾಡುವ ಸಮಸ್ಯೆಯನ್ನು ತಪ್ಪಿಸಲು, ಈ ಎಲ್ಲಾ ಪುಡಿಗಳನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ ಮತ್ತು ಗಾಜಿನ ಜಾರ್ನಲ್ಲಿ ತುಂಬಿಸಿಟ್ಟುಕೊಳ್ಳಿ.
ಒಮ್ಮೆ ತಯಾರಿಸುವಾಗ 7 ರಿಂದ 10 ದಿನಗಳವರೆಗೆ ಇಟ್ಟುಕೊಳ್ಳುವಷ್ಟು ಮಾತ್ರ ಮಿಶ್ರಣವನ್ನು ತಯಾರಿಸಿ. ಬೆಳಿಗ್ಗೆ ಎದ್ದ ನಂತರ ಮೊದಲು ಒಂದು ಚಮಚ ಈ ಮಿಶ್ರಣವನ್ನು ನೀರಿನೊಂದಿಗೆ ತೆಗೆದುಕೊಳ್ಳಿ. ನೀವು ಇದನ್ನು ಎಳನೀರಿನೊಂದಿಗೆ ಮತ್ತು ಉಗುರುಬೆಚ್ಚನೆಯ ನೀರಿನಿಂದ ಸೇವಿಸಬಹುದು.
ಕರಿಮೆಣಸು ಸೇವಿಸುವುದು ಹೇಗೆ?
ಕರಿಮೆಣಸನ್ನು ಪುಡಿಮಾಡಿ ಅಥವಾ ಅದರ ಪುಡಿ ಮಾಡಿ ಇಟ್ಟುಕೊಳ್ಳಿ.
ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 1/4 ಚಮಚ ಕರಿಮೆಣಸಿನ ಪುಡಿ ಮತ್ತು ಅರ್ಧ ಚಮಚ ಅರಿಶಿನ ಪುಡಿಯನ್ನು ತೆಗೆದುಕೊಂಡು ಸಮಪ್ರಮಾಣದಲ್ಲಿ ತಿನ್ನಿರಿ.
ನೀವು ಬೆಳಿಗ್ಗೆ ಈ ಮಿಶ್ರಣವನ್ನು ಸೇವಿಸಲು ಸಾಧ್ಯವಾಗದಿದ್ದರೆ, ರಾತ್ರಿಯ ಊಟಕ್ಕೆ ಒಂದು ಗಂಟೆ ಮೊದಲು ನೀವು ಅದನ್ನು ಎಳನೀರಿನೊಂದಿಗೆ ಸೇವಿಸಬೇಕು.
Home Remedies To Control Blood Sugar Level.
07-09-25 07:43 pm
Bangalore Correspondent
Fine, Violation, Home Minister: ಮುಖ್ಯಸ್ಥರಿಗೂ...
07-09-25 10:17 am
Mandya Suicide, Marriage: ಮದುವೆ ಕ್ಯಾನ್ಸಲ್ ಆಗಿ...
07-09-25 10:11 am
Sirsi Airgun, Murder, Crime: ಶಿರಸಿ; ಏರ್ಗನ್ ಗ...
06-09-25 08:28 pm
Prathap Simha, Mysuru Dasara: ದಸರಾ ಕುಸ್ತಿ ; ಬ...
06-09-25 07:26 pm
07-09-25 08:33 pm
HK News Desk
UPI Transaction Limit: ಯುಪಿಐ ಪಾವತಿ ಮಿತಿ ಹೆಚ್ಚ...
06-09-25 10:34 am
ಗಣೇಶ ವಿಸರ್ಜನೆ ಸಡಗರ ಹಿನ್ನೆಲೆ ; ಮುಂಬೈ ಮಹಾನಗರದಲ್...
04-09-25 08:47 pm
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
07-09-25 11:24 pm
Mangalore Correspondent
ಬಂಗ್ಲೆಗುಡ್ಡೆ ಕಾಡಿಗೆ ಮತ್ತೆ ಭದ್ರತೆ ; ಸ್ಥಳ ಮಹಜರು...
07-09-25 10:59 pm
ಅಪ್ರಾಪ್ತ ಬಾಲಕನ ತ್ರಿಬಲ್ ರೈಡ್ ; ಸ್ಕೂಟರ್ ಕೊಟ್ಟ ಹ...
07-09-25 10:04 pm
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಗೆಹರಿಯದ ಕೆಂಪು ಕಲ್ಲು...
07-09-25 02:25 pm
Ullal, Mangalore Police: ಮೊದಲ ಪತ್ನಿಗೆ ಜೀವನಾಂಶ...
06-09-25 10:59 pm
07-09-25 03:34 pm
Mangalore Correspondent
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm
Udupi cyber fraud crime; ಷೇರು ಟ್ರೇಡಿಂಗ್ ಹೆಸರಿ...
06-09-25 01:58 pm