ಬ್ರೇಕಿಂಗ್ ನ್ಯೂಸ್
10-03-21 03:08 pm source: BOLDSKY ಡಾಕ್ಟರ್ಸ್ ನೋಟ್
ನಿಮಗೆ ಈಗಾಗಲೇ ಗೊತ್ತಿರುವ ಹಾಗೆ ಭಾರತದಲ್ಲಿ ವಾಯುಮಾಲಿನ್ಯವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅನಾರೋಗ್ಯಕರ ಗಾಳಿಯನ್ನು ಉಸಿರಾಡಲು ಸಾಧ್ಯವಾಗದು, ವಿಶೇಷವಾಗಿ ಚಳಿಗಾಲದಲ್ಲಿ ನಡೆದ ಕೃಷಿ ಬೆಂಕಿಯಿಂದ ಹೊರಸೂಸುವ ಕಣಗಳ ಕಾರಣದಿಂದಾಗಿ. ನೇಚರ್ ಕಮ್ಯುನಿಕೇಷನ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಕಾಡ್ಗಿಚ್ಚಿನ ಹೊಗೆಯು ಇತರ ಯಾವುದೇ ವಾಯುಮಾಲಿನ್ಯಕ್ಕಿಂತ ಸಾರ್ವಜನಿಕ ಆರೋಗ್ಯಕ್ಕೆ ಹೆಚ್ಚು ಹಾನಿಕಾರಕ ಎಂದು ಹೇಳುತ್ತದೆ.
ವಾಯುಮಾಲಿನ್ಯವು ಪ್ರತಿಯೊಬ್ಬರನ್ನು ಅಪಾಯಕ್ಕೆ ದೂಡಿದರೆ, ಮಕ್ಕಳಲ್ಲಿ ಕೆಲವು ಕಾಯಿಲೆಗಳನ್ನು ಬೆಳೆಸುವ ಅಪಾಯವನ್ನು ಹೊಂದಿರುತ್ತಾರೆ. ಸ್ಟ್ಯಾನ್ ಫೋರ್ಡ್ ನೇತೃತ್ವದ ಅಧ್ಯಯನವು ಮಕ್ಕಳು ಕಾಡ್ಗಿಚ್ಚಿನ ಹೊಗೆ ಮತ್ತು ಕಾರಿಗೆ ಹೊಗೆಯ ವಾಯುಮಾಲಿನ್ಯಕ್ಕೆ ಒಡ್ಡಿಕೊಂಡಾಗ ವಯಸ್ಸಾದಾಗ ಹೃದಯ ಕಾಯಿಲೆ ಮತ್ತು ಇತರ ಕಾಯಿಲೆಗಳನ್ನು ಉಂಟುಮಾಡುವ ಹೆಚ್ಚಿನ ಅಪಾಯವಿದೆ ಎಂದು ಕಂಡುಹಿಡಿದಿದೆ. ಹೃದಯರಕ್ತನಾಳದ ಆರೋಗ್ಯ ಮತ್ತು ಮಕ್ಕಳಲ್ಲಿ ರೋಗನಿರೋಧಕ ವ್ಯವಸ್ಥೆಯ ಮೇಲೆ ವಾಯುಮಾಲಿನ್ಯದ ಪರಿಣಾಮಗಳನ್ನು ಅಧ್ಯಯನವು ವಿಶ್ಲೇಷಿಸಿದೆ.
ವಾಯುಮಾಲಿನ್ಯವು ಮಕ್ಕಳಲ್ಲಿ ಈ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ:
ನೇಚರ್ ಸೈಂಟಿಫಿಕ್ ರಿಪೋರ್ಟ್ಸ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ವಾಯುಮಾಲಿನ್ಯವು ಪ್ರತಿರಕ್ಷಣಾ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಉಂಟುಮಾಡುತ್ತದೆ ಮತ್ತು ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ಆಸ್ತಮಾ ಮತ್ತು ಉಸಿರಾಟದ ಕಾಯಿಲೆಗಳಂತಹ ರೋಗಗಳಿಗೆ ಕಾರಣವಾಗಬಹುದು. ವಾಯುಮಾಲಿನ್ಯವು ಮಗುವಿನ ವಂಶವಾಹಿಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ರಕ್ತದೊತ್ತಡಕ್ಕೆ ಕಾರಣವಾಗಬಹುದು ಮತ್ತು ಪ್ರೌಢಾವಸ್ಥೆಯಲ್ಲಿ ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಅಧ್ಯಯನಕ್ಕಾಗಿ, ಸಂಶೋಧಕರು ಕ್ಯಾಲಿಫೋರ್ನಿಯಾದ ಫ್ರೆಸ್ನೊದಲ್ಲಿ 6 ರಿಂದ 8 ವರ್ಷದ ಹಿಸ್ಪಾನಿಕ್ ಮಕ್ಕಳ ಡೇಟಾವನ್ನು ಅಧ್ಯಯನ ಮಾಡಿದರು.
ಪರಿಸರ ಅಪಾಯಗಳಿಂದ ನಿಮ್ಮ ಮಗುವನ್ನು ರಕ್ಷಿಸಲು ನೀವು ಏನು ಮಾಡಬಹುದು?
ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿಯ ಪ್ರಕಾರ, ಮಕ್ಕಳ ಸಾವಿಗೆ ವಾಯುಮಾಲಿನ್ಯವು ಒಂದು ಪ್ರಮುಖ ಕಾರಣವಾಗಿದೆ. ಮಗು ವಯಸ್ಕರಿಗಿಂತ ವೇಗವಾಗಿ ಉಸಿರಾಡುತ್ತದೆ, ಅನಾರೋಗ್ಯಕರ ಗಾಳಿಯನ್ನು ಉಸಿರಾಡುವ ಮೂಲಕ ಆರೋಗ್ಯ ಸಮಸ್ಯೆಗಳಿಗೆ ಹೆಚ್ಚು ಒಳಗಾಗುತ್ತದೆ. ಹದಗೆಡುತ್ತಿರುವ ಗಾಳಿಯ ಗುಣಮಟ್ಟದಿಂದ, ಪೋಷಕರು ಜಾಗರೂಕರಾಗಿರಬೇಕು ಮತ್ತು ತಮ್ಮ ಮಕ್ಕಳನ್ನು ಉಸಿರಾಟದ ತೊಂದರೆಯಿಂದ ರಕ್ಷಿಸಬೇಕು. ನೀವು ಅದನ್ನು ಮಾಡುವ ಕೆಲವು ವಿಧಾನಗಳು ಇಲ್ಲಿವೆ.
ನಿಮ್ಮ ಮಗುವನ್ನು ಉಸಿರಾಟ ಸಮಸ್ಯೆಯಿಂದ ಕಾಪಾಡಲು ಸಲಹೆಗಳು:
*ನಿಮ್ಮ ಮಗುವನ್ನು ಬೆಳಿಗ್ಗೆ ಸಮಯದಲ್ಲಿ ಹೊರಕರೆದುಕ್ಪೊಂಡು ಹೋಗಬೇಡಿ, ವಿಶೇಷವಾಗಿ ನಿಮ್ಮ ಮಗು ಆರು ತಿಂಗಳಿಗಿಂತ ಕಡಿಮೆ ವಯಸ್ಸಿನವರಾಗಿದ್ದರೆ.
*ಮೂಗಿನ ಅಡಚಣೆಯನ್ನು ತಪ್ಪಿಸಲು ಮನೆಯಲ್ಲಿ ಏರ್ ಪ್ಯೂರಿಫೈಯರ್ಗಳನ್ನು ಬಳಸಿ.
*ನೀವು ಒಳಾಂಗಣ ಸಸ್ಯಗಳನ್ನು ನೈಸರ್ಗಿಕ ಗಾಳಿ ಶುದ್ಧೀಕರಿಸುವ ಸಾಧನವಾಗಿ ಬಳಸಬಹುದು. ನಿಮ್ಮ ಮಗುವಿನ ಸುತ್ತಲೂ ರಾಸಾಯನಿಕ ದ್ರವೌಷಧಗಳನ್ನು ಬಳಸುವುದು, ಧೂಳು ಹಿಡಿಯುವುದು ಅಥವಾ ಸ್ವಚ್ಛಗೊಳಿಸುವುದನ್ನು ತಪ್ಪಿಸಿ. ಮಾಲಿನ್ಯಕಾರಕಗಳಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಲು ಗಾಳಿಯ ಮುಖವಾಡಗಳನ್ನು ಬಳಸಿ.
*ಮಾಲಿನ್ಯದ ಗರಿಷ್ಠ ಸಮಯದಲ್ಲಿ ಬಾಗಿಲು ಮತ್ತು ಕಿಟಕಿಗಳನ್ನು ತೆರೆಯುವುದನ್ನು ತಪ್ಪಿಸಿ.
*ನಿಮ್ಮ ಮಕ್ಕಳ ರೋಗನಿರೋಧಕ ಶಕ್ತಿಯನ್ನು ನೈಸರ್ಗಿಕವಾಗಿ ಬಲಪಡಿಸಲು ಅರಿಶಿನ, ಜೇನುತುಪ್ಪ, ನಿಂಬೆಹಣ್ಣು, ಬೆಲ್ಲ, ತುಪ್ಪ ಮತ್ತು ಇತರ ನೈಸರ್ಗಿಕ ಪದಾರ್ಥಗಳನ್ನು ಸಂಯೋಜಿಸಿ.
*ನಿಮ್ಮ ಮಗು ಸ್ವಲ್ಪ ಬೆಳೆದಿದ್ದರೆ, ಉಸಿರಾಟದ ಕಾಯಿಲೆಗಳನ್ನು ತಡೆಗಟ್ಟಲು ಸಹಾಯ ಮಾಡುವ ಉಸಿರಾಟದ ವ್ಯಾಯಾಮಗಳನ್ನು ಮಾಡಲು ನೀವು ಅವರನ್ನು ಪ್ರೋತ್ಸಾಹಿಸಬಹುದು.
*ಸೊಪ್ಪಿನ ಹಸಿರು ತರಕಾರಿಗಳು, ಧಾನ್ಯಗಳು, ಹಣ್ಣುಗಳು, ಆವಕಾಡೊಗಳು, ಕೊಬ್ಬಿನ ಮೀನು, ವಾಲ್್ನಟ್ಸ್, ಬೀನ್ಸ್ ಮುಂತಾದ ಹೃದಯ-ಆರೋಗ್ಯಕರ ಆಹಾರಗಳನ್ನು ಅವರಿಗೆ ನೀಡಿ
This News Article Is A Copy Of BOLDSKY
20-05-24 01:44 pm
Bangalore Correspondent
Charmadi Ghat, Blocked: ಚಾರ್ಮಾಡಿ ಘಾಟಿಯಲ್ಲಿ ಕೆ...
20-05-24 12:38 pm
ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಬೆಂಕಿ ; ಬ...
19-05-24 11:54 am
Hubballi Anjali Murder, Police DCP P Rajeev:...
19-05-24 10:42 am
Deve Gowda, prajwal Revanna: ಪ್ರಜ್ವಲ್ ರೇವಣ್ಣ...
18-05-24 10:01 pm
20-05-24 11:35 am
HK News Desk
ಬ್ಯಾಂಕ್ ಖಾತೆಗೆ ಬರೋಬ್ಬರಿ 9900 ಕೋಟಿ ಹಣ ಜಮೆ ; ಮ...
19-05-24 04:30 pm
Priyanka Gandhi, Rahul Gandhi: ರಾಹುಲ್ ಗೆ ದೇಶದ...
18-05-24 10:18 pm
Pavithra Jayaram, Chandrakanth suicide: ಸೀರಿಯ...
18-05-24 09:15 pm
ಕರೆಂಟ್ ಶಾಕ್ ಹೊಡೆದು ಕುಸಿದು ಬಿದ್ದ ಆರು ವರ್ಷದ ಬಾಲ...
18-05-24 11:54 am
20-05-24 12:20 pm
Udupi Correspondent
Mangalore Moodbidri suicide, couple: ಪ್ರೇಯಸಿ...
20-05-24 11:24 am
Dr Dhananjay Sarji, Raghupati Bhat, Mangalore...
19-05-24 10:11 pm
Case against MLA Harish Poonja in Belthangady...
19-05-24 08:56 pm
Belthangady Harish Poonja, Case: ಯುವಮೋರ್ಚಾ ಮು...
19-05-24 08:36 pm
18-05-24 04:05 pm
HK News Desk
ಹೊಸದುರ್ಗ ; ಮನೆಯಲ್ಲಿ ಮಲಗಿದ್ದ ಬಾಲಕಿಯನ್ನು ನಸುಕಿನ...
17-05-24 09:52 pm
Kalaburagi police bus, crime: ಕುಡಿದ ನಶೆಯಲ್ಲಿ...
17-05-24 07:23 pm
7-8 ಬಾರಿ ಎದೆ, ಹೊಟ್ಟೆಗೆ ತಿವಿದಿದ್ದಾನೆ, ನೆಲಕ್ಕೆ...
17-05-24 05:38 pm
Bangalore crime, Police: ಇವ್ನು ಬೆಸ್ಕಾಂ ಸಹಾಯಕ...
17-05-24 05:17 pm