ಬ್ರೇಕಿಂಗ್ ನ್ಯೂಸ್
09-04-21 06:56 pm Headline Karnataka News Network ಡಾಕ್ಟರ್ಸ್ ನೋಟ್
ದೇಹದಲ್ಲಿ ನೀರು ಶೇಖರಣೆಯಾಗುವುದು ಸಾಮಾನ್ಯ ಮತ್ತು ತಾತ್ಕಾಲಿಕ ಸ್ಥಿತಿಯಾಗಿದ್ದು ಅದು ಕೆಲವು ದಿನಗಳ ನಂತರ ಸಾಮಾನ್ಯ ಸ್ಥಿತಿಗೆ ಬರುತ್ತದೆ. ನಿಮ್ಮ ದೇಹವು ಹೆಚ್ಚು ನೀರನ್ನು ಹಿಡಿದಿಟ್ಟುಕೊಳ್ಳುವುದರಿಂದ ನಿಮಗೆ ಅನಾನುಕೂಲವಾಗುತ್ತದೆ. ಇದರಿಂದ ನಿಮ್ಮ ತೂಕದ ಪ್ರಮಾಣದಲ್ಲಿ ಏರಿಳಿತ ಕಂಡುಬರುತ್ತದೆ. ಆದರೆ ಕೆಲವು ಸರಳ ಸಲಹೆಗಳನ್ನು ಅನುಸರಿಸುವ ಮೂಲಕ ನೀವು ನೀರಿನ ತೂಕವನ್ನು ಪರಿಣಾಮಕಾರಿ ರೀತಿಯಲ್ಲಿ ಸುಲಭವಾಗಿ ಕಳೆದುಕೊಳ್ಳಬಹುದು.
ನೀರಿನ ತೂಕ ಇಳಿಸಿಕೊಳ್ಳಲು ನಿಮಗಾಗಿ ಕೆಲವೊಂದು ಸಲಹೆಗಳನ್ನು ನೀಡಿದ್ದೇವೆ:
ನೀರಿನ ತೂಕ ಎಂದರೇನು?:
ಮಾನವನ ದೇಹವು ಶೇಕಡಾ 60 ರಷ್ಟು ನೀರಿನಿಂದ ಕೂಡಿದೆ, ಅದರಲ್ಲಿ ಹೆಚ್ಚಿನವು ಜೀವಕೋಶಗಳಲ್ಲಿ ಉಳಿಯುತ್ತವೆ. ಅಂಗಾಂಶಗಳಲ್ಲಿ ದ್ರವವನ್ನು ಸಂಗ್ರಹಿಸಿ ದೇಹದ ಊತಕ್ಕೆ ಕಾರಣವಾದಾಗ ವ್ಯಕ್ತಿಯು ನೀರಿನ ತೂಕವನ್ನು ಪಡೆಯುತ್ತಾನೆ. ದೇಹವು ನೀರನ್ನು ಮೂತ್ರದ ರೂಪದಲ್ಲಿ ದೇಹದಿಂದ ಹೊರಹಾಖುವ ಬದಲು ಅಂಗಗಳು ಮತ್ತು ಚರ್ಮದ ನಡುವೆ ಹೆಚ್ಚುವರಿ ದ್ರವವನ್ನು ಸಂಗ್ರಹಿಸಲು ಪ್ರಾರಂಭಿಸುತ್ತದೆ. ಹಲವಾರು ಕಾರಣಗಳಿಂದಾಗಿ ಇದು ಸಂಭವಿಸಬಹುದು. ಆದರೆ ಯಾವುದೇ ಸಂದರ್ಭದಲ್ಲಿ, ನೀರಿನ ತೂಕ ಹೆಚ್ಚಾಗುವುದು ಶಾಶ್ವತವಲ್ಲ ಮತ್ತು ನಿಜವಾದ ತೂಕ ಹೆಚ್ಚಾಗಲು ಕಾರಣವಾಗುವುದಿಲ್ಲ.
ನೀರಿನ ತೂಕ ಹೆಚ್ಚಾಗಲು ಕಾರಣವೇನು?:
ದೇಹದಲ್ಲಿ ನೀರು ಉಳಿಸಿಕೊಳ್ಳಲು ಕಾರಣವಾಗುವ ಮತ್ತು ನಿಮ್ಮ ತೂಕವನ್ನು ಹೆಚ್ಚಿಸುವ ಯಾವುದೇ ಒಂದು ಅಂಶವಿಲ್ಲ. ನೀವು ತಿಳಿಯದೆ ಒಂದು ದಿನದಲ್ಲಿ ಮಾಡುವ ಹಲವಾರು ಕೆಲಸಗಳು ನೀರಿನ ತೂಕವನ್ನು ಹೆಚ್ಚಿಸಬಹುದು. ಹೆಚ್ಚು ಉಪ್ಪು ಅಥವಾ ಕಾರ್ಬ್ ಬಳಕೆ, ನಿರ್ಜಲೀಕರಣ, ಮುಟ್ಟಿನ ಹಾರ್ಮೋನುಗಳು, ಜನನ ನಿಯಂತ್ರಣ ಹಾರ್ಮೋನುಗಳು, ಕಾರ್ಟಿಸೋಲ್ ಮಟ್ಟ ಮತ್ತು ಔಷಧಿಗಳು ಈ ಎಲ್ಲ ವಿಷಯಗಳು ನಿಮ್ಮ ದೇಹ ನೀರನ್ನು ಹಿಡಿದಿಡಲು ಒತ್ತಾಯಿಸಬಹುದು. ಸಾಮಾನ್ಯವಾಗಿ, ನೀವು ಇದರ ಬಗ್ಗೆ ಹೆಚ್ಚು ಚಿಂತೆ ಮಾಡುವ ಅಗತ್ಯವಿಲ್ಲ, ಆದರೆ ನೀವು ತೂಕ ಇಳಿಸಿಕೊಳ್ಳಲು ಉತ್ಸುಕರಾಗಿದ್ದೀರಿ, ನೀವು ಪ್ರಯತ್ನಿಸಬಹುದಾದ 5 ಪರಿಣಾಮಕಾರಿ ವಿಧಾನಗಳು ಇಲ್ಲಿವೆ.
ಕಾರ್ಬ್ ಸೇವನೆಯನ್ನು ಕಡಿಮೆಮಾಡಿ:
ನಮ್ಮ ದೇಹಕ್ಕೆ ಹೇರಳವಾಗಿ ಅಗತ್ಯವಿರುವ ಮೂರು ಅಗತ್ಯ ಮ್ಯಾಕ್ರೋನ್ಯೂಟ್ರಿಯಂಟ್ಗಳಲ್ಲಿ ಕಾರ್ಬೋಹೈಡ್ರೇಟ್ ಒಂದು. ನೀವು ಅದನ್ನು ಹೆಚ್ಚು ಸೇವಿಸಿದಾಗ ಮಾತ್ರ ಅದು ನೀರಿನ ಶೇಖರಣೆಗೆ ಕಾರಣವಾಗುತ್ತದೆ. ಶಕ್ತಿಯನ್ನು ಉತ್ಪಾದಿಸಲು ದೇಹವು ಬಳಸದ ಬಹಳಷ್ಟು ಕಾರ್ಬ್ಗಳನ್ನು ನೀವು ಸೇವಿಸಿದಾಗ, ಅದನ್ನು ಗ್ಲೈಕೊಜೆನ್ ಆಗಿ ಪರಿವರ್ತಿಸಲಾಗುತ್ತದೆ ಮತ್ತು ಶಕ್ತಿಗಾಗಿ ಸ್ನಾಯುಗಳಲ್ಲಿ ಸಂಗ್ರಹಿಸಲಾಗುತ್ತದೆ. ಆದ್ದರಿಂದ, ನೀರಿನ ತೂಕವನ್ನು ಕಳೆದುಕೊಳ್ಳಲು, ಕಾರ್ಬ್ ಸೇವನೆಯನ್ನು ಕಡಿತಗೊಳಿಸಿ ಮತ್ತು ನಿಮ್ಮ ಆಹಾರಕ್ರಮದಲ್ಲಿ ಆರೋಗ್ಯಕರವಾದ ಕಾರ್ಬ್ಗಳ ಮೂಲಗಳನ್ನು ಸೇರಿಸಲು ಪ್ರಯತ್ನಿಸಿ.
ಸೋಡಿಯಂ ಸೇವನೆಯನ್ನು ಕಡಿತಗೊಳಿಸಿ:
ಉಪ್ಪು ನೀರನ್ನು ಆಕರ್ಷಿಸುತ್ತದೆ, ನಿಮ್ಮ ದೇಹದಲ್ಲಿ ನೀರನ್ನು ಉಳಿಸಿಕೊಳ್ಳುವ ಮೂಲಕ ಅದು ಊತ ಮತ್ತು ತೂಕ ಹೆಚ್ಚಾಗುತ್ತದೆ. ನೀವು ಇತ್ತೀಚೆಗೆ ಹೆಚ್ಚು ಉಪ್ಪು ತಿಂಡಿಗಳನ್ನು ಸೇವಿಸುತ್ತಿದ್ದರೆ ಅದನ್ನು ಕಡಿತಗೊಳಿಸುವ ಸಮಯ. ನಮ್ಮ ದೇಹವು ಕಾರ್ಯನಿರ್ವಹಿಸಲು ದಿನಕ್ಕೆ 2,300 ಮಿಲಿಗ್ರಾಂ ಉಪ್ಪು ಮಾತ್ರ ಬೇಕಾಗುತ್ತದೆ. ಆದರೆ ಉಪ್ಪು ನಮಗೆ ತಿಳಿದಿಲ್ಲದ ಬಹಳಷ್ಟು ಆಹಾರ ಉತ್ಪನ್ನಗಳಲ್ಲಿ ಅಡಗಿರುತ್ತದೆ. ಆದ್ದರಿಂದ, ನಿಮ್ಮ ದೈನಂದಿನ ಸೋಡಿಯಂ ಸೇವನೆಯೊಂದಿಗೆ ಜಾಗರೂಕರಾಗಿರಿ ಮತ್ತು ಕಡಿಮೆ ಉಪ್ಪನ್ನು ಬಳಸಲು ಪ್ರಯತ್ನಿಸಿ.
ಹೈಡ್ರೀಕರಿಸಿದಂತೆ ಇರಿ:
ನೀರಿನ ತೂಕವನ್ನು ಕಳೆದುಕೊಳ್ಳಲು ಹೆಚ್ಚು ನೀರು ಕುಡಿಯುವುದು ಸ್ವಲ್ಪ ವಿಚಿತ್ರವೆಂದು ತೋರುತ್ತದೆ, ಆದರೆ ಅದು ಕೆಲಸ ಮಾಡುತ್ತದೆ. ನಮ್ಮ ದೇಹವು ಹೆಚ್ಚಾಗಿ ನೀರಿನಿಂದ ಕೂಡಿದೆ ಮತ್ತು ನೀವು ಸಾಕಷ್ಟು ಕುಡಿಯದಿದ್ದಾಗ, ನಿಮ್ಮ ದೇಹವು ಅದರಲ್ಲಿರುವ ದ್ರವವನ್ನು ಸಂಗ್ರಹಿಸಲು ಪ್ರಾರಂಭಿಸುತ್ತದೆ. ಇದು ಕೆಲವೊಮ್ಮೆ ಮಲಬದ್ಧತೆಗೆ ಕಾರಣವಾಗುತ್ತದೆ. ನಿಮ್ಮ ದೈನಂದಿನ ದ್ರವ ಸೇವನೆಯನ್ನು ನೀವು 2 ರಿಂದ 3 ಲೀಟರ್ಗಳವರೆಗೆ ನಿರ್ವಹಿಸಿದಾಗ, ಅದು ನೀರನ್ನು ಹಿಡಿದಿಟ್ಟುಕೊಳ್ಳುವುದಿಲ್ಲ ಮತ್ತು ಅದರಲ್ಲಿ ಹೆಚ್ಚಿನದನ್ನು ಮೂತ್ರದಿಂದ ಹೊರಹಾಕಲಾಗುತ್ತದೆ. ನಿಮ್ಮ ಆಹಾರದಲ್ಲಿ ಸೌತೆಕಾಯಿ, ಕಲ್ಲಂಗಡಿ ಮತ್ತು ಟೊಮೆಟೊಗಳಂತಹ ಹೈಡ್ರೇಟಿಂಗ್ ಹಣ್ಣುಗಳನ್ನು ಸಹ ನೀವು ಸೇರಿಸಬಹುದು.
ನಿಮ್ಮ ಆಹಾರದಲ್ಲಿ ಹೆಚ್ಚು ಪೊಟ್ಯಾಸಿಯಮ್ ಸೇರಿಸಿ:
ಪೊಟ್ಯಾಸಿಯಮ್ ಒಂದು ಪ್ರಮುಖ ಪೋಷಕಾಂಶವಾಗಿದ್ದು ಅದು ನಮ್ಮ ನರಮಂಡಲ ಮತ್ತು ಸ್ನಾಯುಗಳನ್ನು ಸಂಕುಚಿತಗೊಳಿಸಲು ಸಹಾಯ ಮಾಡುತ್ತದೆ. ಇದು ಸೋಡಿಯಂಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಪೋಷಕಾಂಶಗಳನ್ನು ಜೀವಕೋಶಗಳಿಗೆ ಮತ್ತು ತ್ಯಾಜ್ಯ ಉತ್ಪನ್ನಗಳನ್ನು ಕೋಶಗಳಿಂದ ಹೊರಹಾಕಲು ಸಹಾಯ ಮಾಡುತ್ತದೆ. ನೀರಿನ ತೂಕ ಹೆಚ್ಚಾದ ಸಂದರ್ಭದಲ್ಲಿ, ಹೆಚ್ಚಿನ ಪೊಟ್ಯಾಸಿಯಮ್ ಭರಿತ ಆಹಾರವನ್ನು ಸೇವಿಸುವುದರಿಂದ ನೀರಿನ ಶೇಖರಣೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬಾಳೆಹಣ್ಣು, ಆಲೂಗಡ್ಡೆ, ಪಾಲಕ ಪೊಟ್ಯಾಸಿಯಮ್ನ ಕೆಲವು ಉತ್ತಮ ಮೂಲಗಳಾಗಿವೆ.
ವ್ಯಾಯಾಮ:
ನೀರಿನ ತೂಕವನ್ನು ಕಳೆದುಕೊಳ್ಳಲು ವ್ಯಾಯಾಮ ಮಾಡುವುದು ಒಂದು ಮೂಲಭೂತ ಮಾರ್ಗವಾಗಿದೆ. ವ್ಯಾಯಾಮದಲ್ಲಿ ತೊಡಗುವುದರಿಂದ ಜೀವಕೋಶಗಳಲ್ಲಿರುವ ಹೆಚ್ಚುವರಿ ನೀರನ್ನು ಬೆವರು ಮಾಡಲು ಮತ್ತು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಹೆಚ್ಚು ಗ್ಲೈಕೊಜೆನ್ ಅನ್ನು ಸುಡಲು ವ್ಯಾಯಾಮವು ನಿಮಗೆ ಸಹಾಯ ಮಾಡುತ್ತದೆ ಮತ್ತು ದುಗ್ಧರಸ ಗ್ರಂಥಿಗಳನ್ನು ಕಾರ್ಯರೂಪಕ್ಕೆ ತರುತ್ತದೆ. ಇದಲ್ಲದೆ, ವರ್ಕೌಟ್ ರಕ್ತದ ಹರಿವನ್ನು ಉತ್ತೇಜಿಸುತ್ತದೆ ಮತ್ತು ರಕ್ತಪರಿಚಲನೆಯನ್ನು ಸುಧಾರಿಸುತ್ತದೆ, ಇದು ದೇಹದಾದ್ಯಂತ ದ್ರವದ ರಚನೆಯನ್ನು ಕಡಿಮೆ ಮಾಡುತ್ತದೆ.
This News Article Is A Copy Of BOLDSKY
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm