ಬ್ರೇಕಿಂಗ್ ನ್ಯೂಸ್
14-05-21 02:09 pm Shreeraksha, BoldSky Kannada ಡಾಕ್ಟರ್ಸ್ ನೋಟ್
ಯೋಗ ಪ್ರತಿಯೊಬ್ಬರ ಆರೋಗ್ಯ ಹಾಗೂ ಮನಸ್ಸನ್ನು ಉತ್ತಮ ಸ್ಥಿತಿಯಲ್ಲಿಡಲು ಬಹಳ ಸಹಕಾರಿ. ಅದರಲ್ಲೂ ಗರ್ಭಾವಸ್ಥೆಯಲ್ಲಿ ಯೋಗ ಮಾಡುವುದರಿಂದ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿರುತ್ತಾರೆ. ಜೊತೆಗೆ ಹೆರಿಗೆಯ ಸಮಯದಲ್ಲಿ ತೊಡಕುಗಳು ಕಡಿಮೆಯಾಗುತ್ತವೆ.
ಆದರೆ ಯೋಗ ಮಾಡುವಾಗ ಯಾವ ಭಂಗಿಯನ್ನು ಯಾವಾಗ ಮಾಡಬೇಕು ಮತ್ತು ಯಾವಾಗ ಯಾವ ಭಂಗಿಯನ್ನು ಮಾಡಬಾರದು ಎಂಬುದು ನಿಮಗೆ ತಿಳಿದಿರಬೇಕು ಏಕೆಂದರೆ ಗರ್ಭಾವಸ್ಥೆಯಲ್ಲಿ ಎಲ್ಲಾ ಆಸನವನ್ನು ಮಾಡಲು ಸಾಧ್ಯವಿಲ್ಲ. ಈ ಲೇಖನದಲ್ಲಿ ಗರ್ಭೀಣಿಯರು ಯೋಗ ಮಾಡುವಾಗ ನೆನಪಿಡಬೇಕಾದ ಅಂಶಗಳ ಬಗ್ಗೆ ವಿವರಿಸಿದ್ದೇವೆ.

ಈ ಆಸನಗಳನ್ನು ಮಾಡಬೇಡಿ:
ಗರ್ಭಧಾರಣೆಯ ಆರಂಭದಿಂದಲೂ ನೀವು ಈ ಆಸನಗಳನ್ನು ಮಾಡಬಾರದು, ಉದಾಹರಣೆಗೆ ಚಕ್ರಾಸನ, ನೌಕಾಸನ, ಭುಜಂಗಾಸನ, ಅರ್ಧಮತ್ಯಾಂದ್ರಸಾನ, ಭುಜಂಗಾಸನ, ಧನುರಾಸನ ಮತ್ತು ಇತರ ಕಿಬ್ಬೊಟ್ಟೆಯ ಆಸನಗಳು ಮತ್ತು ಕಿಬ್ಬೊಟ್ಟೆಯನ್ನು ಹಿಗ್ಗಿಸುವ ಆಸನಗಳನ್ನು ಮಾಡಬೇಡಿ. ಹೊಟ್ಟೆಯಲ್ಲಿ ಜೀವ ಹೊತ್ತಿರುವಾಗ ಈ ಆಸನಗಳನ್ನು ಮಾಡುವುದು ಅಪಾಯಕಾರಿ. ನೀವು ಮಾಡುತ್ತಿರುವ ಎಲ್ಲಾ ಆಸನಗಳ ಬಗ್ಗೆ ಯೋಗ ತರಬೇತುದಾರರ ಸಲಹೆಯನ್ನು ತೆಗೆದುಕೊಳ್ಳಿ.

ಈ ವಿಷಯಗಳನ್ನು ನೆನಪಿನಲ್ಲಿಡಿ:
ಗರ್ಭಧಾರಣೆಯ ಮೊದಲ ಮೂರು ತಿಂಗಳಲ್ಲಿ ನಿಲ್ಲುವ ಆಸನಗಳನ್ನು ಮಾಡಬೇಕು. ಇದನ್ನು ಮಾಡುವುದರಿಂದ, ಪಾದಗಳ ಸ್ನಾಯುಗಳು ಬಲಗೊಳ್ಳುತ್ತವೆ, ದೇಹದಲ್ಲಿ ರಕ್ತ ಪರಿಚಲನೆಗೊಳ್ಳುತ್ತದೆ, ದೇಹವು ಶಕ್ತಿಯನ್ನು ಪಡೆಯುತ್ತದೆ. ಜೊತೆಗೆ ಪಾದಗಳಲ್ಲಿನ ಊತ ಮತ್ತು ಬಿಗಿತವನ್ನು ಸಹ ತೆಗೆದುಹಾಕುತ್ತದೆ. ಜೊತೆಗೆ ಗರ್ಭಧಾರಣೆಯ ಆರಂಭದಲ್ಲಿ ನಿಮ್ಮ ಭುಜಗಳು ಮತ್ತು ಮೇಲಿನ ಬೆನ್ನನ್ನು ಬಲಪಡಿಸುವ ಯೋಗವನ್ನು ಮಾಡಿ.

ಪ್ರಾಣಾಯಾಮದತ್ತ ಗಮನಹರಿಸಿ:
ಗರ್ಭಧಾರಣೆಯ ನಡುವಿನ ಮೂರು ತಿಂಗಳಲ್ಲಿ ನೀವು ಹೆಚ್ಚು ಚುರುಕಾಗಿರುವ ಭಂಗಿಗಳನ್ನು ಮಾಡಬಾರದು. ಆ ಮಧ್ಯದ ಮೂರು ತಿಂಗಳಲ್ಲಿ ಆಸನಗಳಿಗೆ ಗಮನ ಕೊಡುವ ಬದಲು, ಪ್ರಾಣಾಯಾಮ ಮತ್ತು ಧ್ಯಾನ ಮಾಡಿ, ನೀವು ಇದರಿಂದ ಹೆಚ್ಚಿನ ಲಾಭ ಪಡೆಯುತ್ತೀರಿ. ಧ್ಯಾನ ಮತ್ತು ಪ್ರಾಣಾಯಾಮ ನಿಮ್ಮ ಮನಸ್ಸನ್ನು ಶಾಂತಗೊಳಿಸಿ, ಎಲ್ಲಾ ಒತ್ತಡದಿಂದ ದೂರಮಾಡುತ್ತದೆ.

ಈ ಸಮಯದಲ್ಲಿ ಯೋಗ ಮಾಡಬೇಡಿ:
ಗರ್ಭಧಾರಣೆಯ ನಾಲ್ಕನೇ ಮತ್ತು ಐದನೇ ತಿಂಗಳಲ್ಲಿ, ಯಾವುದೇ ಯೋಗವನ್ನು ಮಾಡಬಾರದು ಏಕೆಂದರೆ ಈ ಸಮಯವು ಗರ್ಭಧಾರಣೆಯ ಪ್ರಮುಖ ಸಮಯವಾಗಿದೆ, ಆದ್ದರಿಂದ ನಿಮ್ಮ ಬಗ್ಗೆ ವಿಶೇಷ ಕಾಳಜಿ ವಹಿಸಿ.

ಪ್ರತಿ ಭಂಗಿಯನ್ನು ಮಾಡಬೇಡಿ:
ಈ ಸಮಯದಲ್ಲಿ, ನೀವು ಮಾಡಲು ಸಮರ್ಥವಾಗಿರುವ ಆಸನವನ್ನು ಮಾತ್ರ ಮಾಡಿ. ದೇಹದ ಸಾಮರ್ಥ್ಯಕ್ಕೆ ಅನುಗುಣವಾಗಿ ಆಸನ ಮಾಡಿ. ನಿಮ್ಮ ದೇಹಕ್ಕೆ ಹೆಚ್ಚು ಒತ್ತಡ ನೀಡಬೇಡಿ. ನಿಮಗೆ ಯಾವುದೋ ಸಾಧ್ಯವೋ, ಆ ಭಂಗಿಯನ್ನು ಮಾಡಿದರೆ ಸಾಕು. ನೀವು ಪ್ರತಿ ಆಸನವನ್ನು ಮಾಡುವುದು ಅನಿವಾರ್ಯವಲ್ಲ ಎಂಬುದನ್ನು ನೆನಪಿನಲ್ಲಿಡಿ.
03-12-25 03:01 pm
HK News Desk
ಜೈಷ್-ಇ-ಮೊಹಮ್ಮದ್ ಹೆಸರಲ್ಲಿ ಬೆಂಗಳೂರು ಏರ್ಪೋರ್ಟ್,...
02-12-25 10:17 pm
ಸಂಪುಟ ಪುನಾರಚನೆಯಾದ್ರೆ ಮುನಿಯಪ್ಪ, ಮಹದೇವಪ್ಪ, ಪರಮೇ...
02-12-25 06:29 pm
ಕೃತಕ ಬುದ್ಧಿಮತ್ತೆ ಎಫೆಕ್ಟ್ ; ಭವಿಷ್ಯದಲ್ಲಿ ಜನರು ಕ...
01-12-25 10:59 pm
ಸಿಎಂ, ಡಿಸಿಎಂ ಭೇಟಿಯಾಗಿ ಹೊಟ್ಟೆ ತುಂಬ ಉಪಹಾರ ಸೇವನೆ...
01-12-25 08:28 pm
03-12-25 07:19 pm
HK News Desk
Jawaharlal Nehru, Babri Masjid, Sardar Patel,...
03-12-25 07:14 pm
ಅಮೆರಿಕದ ಡಾಲರ್ ಎದುರು ನೈಂಟಿ ಕ್ರಾಸ್ ಮಾಡಿದ ರೂಪಾಯಿ...
03-12-25 05:32 pm
ಅಫ್ಘಾನಿಸ್ತಾನದಲ್ಲಿ ಒಂದೇ ಕುಟುಂಬದ 13 ಜನರನ್ನು ಕೊಂ...
03-12-25 03:04 pm
ಮುಸ್ಲಿಮರು ಇನ್ನೂ ಎರಡು ಐತಿಹಾಸಿಕ ಸ್ಥಳಗಳನ್ನು ಬಿಟ್...
02-12-25 11:19 pm
03-12-25 10:35 pm
Mangalore Correspondent
Mangalore, CM Siddaramaiah, High Court: ಮಂಗಳೂ...
03-12-25 07:23 pm
CM Siddaramaiah, Mangalore, Narayan Guru: ದೇವ...
03-12-25 04:52 pm
K. C. Venugopal, Mangalore, Dk Shivakumar: ಮಂ...
03-12-25 11:54 am
Bjp, Arun Puthila, Puttur, Mangalore: ಬಿಜೆಪಿ...
01-12-25 09:25 pm
03-12-25 01:41 pm
Bangalore Correspondent
ಲೈಂಗಿಕ ಸಮಸ್ಯೆಗಳಿಗೆ ಆಯುರ್ವೇದ ಔಷಧ ನೆಪದಲ್ಲಿ ವಂಚನ...
02-12-25 10:48 pm
ಇನ್ನೋವಾ ಕಾರಿನಲ್ಲಿ ನಾಲ್ಕು ಕರುಗಳನ್ನು ಸಾಗಿಸುತ್ತಿ...
02-12-25 06:37 pm
ರೈಲಿನಲ್ಲಿ ಬಂದು ನಿಲ್ಲಿಸಿದ್ದ ಸ್ಕೂಟರ್ ಕಳವುಗೈದು ಪ...
02-12-25 02:26 pm
Udupi Rape, Crime, Hindu Jagaran Vedike: ಮದುವ...
01-12-25 04:50 pm