ಬ್ರೇಕಿಂಗ್ ನ್ಯೂಸ್
18-05-21 11:54 am Reena TK, BoldSky Kannada ಡಾಕ್ಟರ್ಸ್ ನೋಟ್
ಕೊರೊನಾ ಲಸಿಕೆ ಕೊರೊನಾದಿಂದ ನಮ್ಮನ್ನು ರಕ್ಷಿಸುವುದಾದರೂ ಇದನ್ನು ತೆಗೆದುಕೊಂಡಾಗ ಕೆಲವರಲ್ಲಿ ಕೆಲವೊಂದು ಬಗೆಯ ಅಡ್ಡಪರಿಣಾಮ ಉಂಟಾಗುವುದುಂಟು. ಕೆಲವರಲ್ಲಿ ಲಸಿಕೆ ಚುಚ್ಚಿದ ಜಾಗದಲ್ಲಿ ಊತ, ಇನ್ನು ಕೆಲವರಲ್ಲಿ ಜ್ವರ ಈ ರೀತಿಯ ಅಡ್ಡಪರಿಣಾಮಗಳು ಕಂಡು ಬಂದಿದ್ದೆವು.
ಆದರೆ ಕೊವಿಶೀಲ್ಡ್ ಲಸಿಕೆ ಪಡೆದ ಕೆಲವರಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಉಂಟಾಗಿರುವುದಾಗಿ AEFI ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ನೀಡಿರುವ ವರದಿಯಲ್ಲಿ ತಿಳಿಸಿದೆ
ಭಾರತದಲ್ಲಿ ಲಸಿಕೆ ಪಡೆದ ಎಷ್ಟು ಜನರಿಗೆ ರಕ್ತ ಹೆಪ್ಪುಗಟ್ಟಿದೆ
ಭಾರತದಲ್ಲಿ ಕೊವಿಶೀಲ್ಡ್ ಹಾಗೂ ಕೋವಾಕ್ಸಿನ್ ಲಸಿಕೆ ನೀಡುತ್ತಿದ್ದು ಅದರಲ್ಲಿ ಕೊವಿಶೀಲ್ಡ್ ಪಡೆದವರಲ್ಲಿ ಶೇ. 0.61 ಜನರಲ್ಲಿ ಈ ರೀತಿ ಕಂಡು ಬಂದಿದೆ. ಇತರ ದೇಶಗಳಿಗೆ ಹೋಲಿಸಿದರೆ ಕೊರೊನಾ ಲಸಿಕೆಯಿಂದ ಈ ರೀತಿಯಾಗಿರುವುದು ಭಾರತದಲ್ಲಿ ತುಂಬಾ ಕಡಿಮೆ. ಯುಕೆ ಮತ್ತು ಜರ್ಮನ್ ದೇಶಗಳಲ್ಲಿ 1ಮಿಲಿಯನ್ನಲ್ಲಿ 10 ಜನರಿಗೆ ಹೀಗೆ ಅಡ್ಡ ಪರಿಣಾಮ ಬೀರಿವೆ. ಭಾರತದಲ್ಲಿ ಇದುವರೆಗೆ 7.5 ಕೋಟಿ ಕೊವಿಶೀಲ್ಡ್ ಲಸಿಕೆ ನೀಡಲಾಗಿದೆ. ಅದರಲ್ಲಿ 700 ಜನರಲ್ಲಿ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಉಂಟಾಗಿದೆ ಎಂದು AEFI ತನ್ನ ವರದಿಯಲ್ಲಿ ತಿಳಿಸಿದೆ.
ಕೊವಾಕ್ಸಿನ್ನಿಂದ ಈ ರೀತಿಯ ಅಡ್ಡಪರಿಣಾಮವಾಗಿಲ್ಲ
ನಮ್ಮಲ್ಲಿ ಕೊವಿಶೀಲ್ಡ್ ಹಾಗೂ ಕೊವಾಕ್ಸಿನ್ ಎಂಬ ಎರಡು ಬಗೆಯ ಲಸಿಕೆ ನೀಡಲಾಗುತ್ತಿದೆ, ಎರಡೂ ಲಸಿಕೆಗಳು ಕೊರೊನಾ ವಿರುದ್ಧ ಹೋರಾಡುವಲ್ಲಿ ಸಮರ್ಥವಾಗಿವೆ. ಎರಡೂ ಲಸಿಕೆಗಳೂ ಕೆಲವರಲ್ಲಿ ಅಡ್ಡ ಪರಿಣಾಮ ಉಂಟು ಮಾಡಿವೆ. ಆದರೆ ಕೊವಾಕ್ಸಿನ್ ಪಡೆದುಕೊಂಡವರಲ್ಲಿ ರಕ್ತ ಹೆಪ್ಪುಗಟ್ಟಿರುವುದು ವರದಿಯಾಗಿಲ್ಲ.
ಈ ರೀತಿ ಲಸಿಕೆ ಪಡೆದ ಬಳಿಕ ಯಾವಾಗ ಕಂಡು ಬರುತ್ತದೆ?
ಈ ರೀತಿ ರಕ್ತ ಹೆಪ್ಪು ಗಟ್ಟುವ ಸಮಸ್ಯೆ ಕೆಲವರಲ್ಲಿ ಕೊವಿಶೀಲ್ಡ್ ಮೊದಲ ಡೋಸ್ ಪಡೆದ ವಾರದ ಬಳಿಕ ಕಂಡು ಬರುತ್ತದೆ. ರಕ್ತಸ್ರಾವ, ರಕ್ತ ಹೆಪ್ಪುಗಟ್ಟುವುದು ಕಂಡು ಬರುವುದು.
ರಕ್ತ ಹೆಪ್ಪುಗಟ್ಟಿದಾಗ ಕಂಡು ಬರುವ ಲಕ್ಷಣಗಳೇನು?
ಕೊವಿಶೀಲ್ಡ್ ಲಸಿಕೆ ಪಡೆದ ಬಳಿಕ ತುಂಬಾ ತಲೆನೋವು, ತಲೆಸುತ್ತು, ವಾಂತಿ, ಹೊಟ್ಟೆ ನೋವು, ಉಸಿರಾಟಕ್ಕೆ ತೊಂದರೆ ಈ ರೀತಿಯ ಲಕ್ಷಣಗಳು ಕಂಡು ಬಂದರೆ ಕೂಡಲೇ ವೈದ್ಯರಿಗೆ ತಿಳಿಸಿ. ಭಾರತದಲ್ಲಿ ಮಾರ್ಚ್ 31ರವರೆಗಿನ ಅಂಕಿ ಅಂಶದ ಪ್ರಕಾರ 700 ಜನರಲ್ಲಿ ಈ ರೀತಿಯ ಅಡ್ಡಪರಿಣಾಮ ಕಂಡು ಬಂದಿದೆ. ಅದರಲ್ಲಿ 617 ಜನರ ಸ್ಥಿತಿ ಗಂಭೀರವಾಗಿತ್ತು. 130 ಸಾವು ಸಂಭವಿಸಿದೆ. ಭಾರತದಲ್ಲಿ ಮೇ 14ರವರೆಗೆ 18.4 ಕೋಟಿ ಜನರು ಲಸಿಕೆ ಪಡೆದಿದ್ದಾರೆ.
(Kannada Copy of Boldsky Kannada)
01-06-25 10:08 pm
HK News Desk
Tobacco Ban, Karnataka: ಸಾರ್ವಜನಿಕ ಸ್ಥಳಗಳಲ್ಲಿ...
01-06-25 09:37 pm
ಎಚ್ಎಂಟಿ ಅರಣ್ಯ ಭೂಮಿಯಲ್ಲಿ ರಿಯಲ್ ಎಸ್ಟೇಟ್ ದಂಧೆ ;...
01-06-25 08:33 pm
Karnataka Traffic Police New Rules: ಸಕಾರಣವಿಲ್...
01-06-25 11:50 am
Siddaramaiah, HD Kumaraswamy: ಸಿದ್ದರಾಮಯ್ಯನವರೇ...
31-05-25 09:41 pm
01-06-25 12:35 pm
HK News Desk
ಮಲಪ್ಪುರಂನಲ್ಲಿ ಕುಸಿದು ಹೋದ ರಾಷ್ಟ್ರೀಯ ಹೆದ್ದಾರಿ,...
26-05-25 11:34 pm
ಭಯೋತ್ಪಾದನೆ ವಿರುದ್ಧ ಭಾರತದ ರಾಜತಾಂತ್ರಿಕ ಬಲವರ್ಧನೆ...
26-05-25 10:13 pm
Gujrath, ATS: ಪಾಕ್ ಐಎಸ್ಐಗೆ ದೇಶದ ಭದ್ರತೆ ಬಗ್ಗೆ...
26-05-25 09:50 pm
ಪಾಕ್ ಐಎಸ್ಐಗೆ ದೇಶದ ಭದ್ರತೆ ಬಗ್ಗೆ ಸೂಕ್ಷ್ಮ ಮಾಹಿತಿ...
26-05-25 08:33 pm
02-06-25 12:51 pm
Mangalore Correspondent
Mangalore Muslim Leaders, Dinesh Gundurao: ಕೋ...
01-06-25 12:32 pm
Mangalore Congress, Notice: ಪಕ್ಷದ ಸೂಚನೆ ಮೀರಿ...
01-06-25 11:59 am
ಕೋಮು ಪ್ರಚೋದಕ ಭಾಷಣಕ್ಕೆ ಕಠಿಣ ಕ್ರಮಕ್ಕೆ ಮುಸ್ಲಿಂ ನ...
31-05-25 11:14 pm
Mangalore Police Chief Sudheer Kumar Reddy, V...
31-05-25 10:57 pm
02-06-25 04:01 pm
Mangalore Correspondent
Ullal, Mangalore, Crime: ಕೋಮು ದ್ವೇಷದ ನೆಲದಲ್ಲ...
01-06-25 11:02 pm
Belagavi Rape, Arrest, Crime: ಬೆಳಗಾವಿಯಲ್ಲಿ ಮತ...
01-06-25 07:56 pm
Bantwal Crime, Mangalore, Stone Petling: ಮುಸ್...
31-05-25 10:47 pm
Mangalore crime, Threat: ಲಿಸ್ಟ್ ರೆಡಿ ಮಾಡಿದ್ದೇ...
29-05-25 11:04 pm