ಬ್ರೇಕಿಂಗ್ ನ್ಯೂಸ್
25-06-21 11:00 am Shreeraksha, BoldSky Kannada ಡಾಕ್ಟರ್ಸ್ ನೋಟ್
ಕೆಲವೊಮ್ಮೆ ನಾವು ಬೆಳಿಗ್ಗೆ ಏಳುವಾಗ ತುಂಬಾ ಹಸಿವಿನಿಂದ ಕೂಡಿರುತ್ತೇವೆ. ಆ ಸಮಯದಲ್ಲಿ ನಮಗೆ ಏನು ಸಿಗುತ್ತದೆಯೋ ಅದನ್ನು ಹಿಂದೆ-ಮುಂದೆ ಯೋಚಿಸದೇ ತಿನ್ನಲು ಪ್ರಾರಂಭಿಸುತ್ತೇವೆ. ಆದರೆ ಹಾಗೆ ಮಾಡುವುದರಿಂದ ನಿಮ್ಮ ಅರೋಗ್ಯಕ್ಕೆ ಮಾರಕವಾಗಬಹುದು. ಆಯುರ್ವೇದದ ಪ್ರಕಾರ, ಹೆಚ್ಚು ಹಸಿವು ಆದಾಗ ತಿನ್ನಬಾರದಂತಹ ಎಂದು ಕೆಲವು ವಿಷಯಗಳಿವೆ. ಅವು ಯಾವುವು ಎಂಬುದನ್ನು ಈ ಕೆಳಗೆ ನೀಡಲಾಗಿದೆ:
ಪೇರಳೆ:
ಪೇರಳೆಯನ್ನು ನೀವು ಹೆಚ್ಚು ಹಸಿವಾದಾಗ ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು. ಏಕೆಂದರೆ ಇದು ವಿಭಿನ್ನ ಪರಿಸ್ಥಿತಿಗಳಲ್ಲಿ ತಿಂದಾಗ ವಿಭಿನ್ನ ಫಲಿತಾಂಶಗಳನ್ನು ನೀಡುತ್ತದೆ. ಅಂದರೆ, ಚಳಿಗಾಲದಲ್ಲಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪೇರಳೆಯನ್ನು ಸೇವಿಸಿದರೆ, ನಿಮಗೆ ಹೊಟ್ಟೆ ನೋವಿನ ಅನುಭವವಾಗಬಹುದು. ಒಂದು ವೇಳೆ ಬೇಸಿಗೆಯಲ್ಲಿ ಖಾಲಿ ಹೊಟ್ಟೆಯಲ್ಲಿ ಪೇರಳೆಯನ್ನು ಸೇವಿಸದರೆ, ಅದು ಕೆಲವೊಂದು ಆರೋಗ್ಯ ಪ್ರಯೋಜನವನ್ನು ನೀಡುತ್ತದೆ. ಆದ್ದರಿಂದ ಖಾಲಿ ಹೊಟ್ಟೆಯಲ್ಲಿ ಪೇರಳೆ ಸೇವಿಸುವಾಗ ಒಂದು ಬಾರಿ ಯೋಚಿಸುವುದು ಉತ್ತಮ.
ಸೇಬು:
ಪ್ರತಿದಿನ ಸೇಬು ತಿಂದರೆ ಆರೋಗ್ಯಕ್ಕೆ ಒಳ್ಳೆಯದು ಎಂಬ ಮಾತನ್ನು ಹಿಂದಿನಿಂದಲೂ ಕೇಳಿಕೊಂಡೇ ಬಂದಿದ್ದೇವೆ. ಆದರೆ ಚಳಿಗಾಲದಲ್ಲಿ ಖಾಲಿ ಹೊಟ್ಟೆಯಲ್ಲಿ ಸೇಬು ತಿನ್ನುವುದರಿಂದ ನಿಮ್ಮ ಬಿಪಿ ಹೆಚ್ಚಾಗುತ್ತದೆ. ನೀವು ಬೆಳಿಗ್ಗೆ ಏನನ್ನೂ ತಿನ್ನದೆ ಸೇಬನ್ನು ಸೇವಿಸಿದರೆ, ನೀವು ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ಎದುರಿಸಬೇಕಾಗಬಹುದು. ಆದರೆ ಬೇಸಿಗೆಯಲ್ಲಿ ನೀವು ಖಾಲಿ ಹೊಟ್ಟೆಯಲ್ಲಿ ಸೇಬನ್ನು ತಿನ್ನಬಹುದು. ಇದರಿಂದ ಏನೂ ಸಮಸ್ಯೆಯಾಗುವುದಿಲ್ಲ.
ಟೊಮ್ಯಾಟೋ:
ಟೊಮ್ಯಾಟೋಸ್ ನೈಸರ್ಗಿಕವಾಗಿ ಬಿಸಿಯಾಗಿರುತ್ತದೆ. ಚಳಿಗಾಲದಲ್ಲಿ ನೀವು ಅದನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಬಹುದು, ಆದರೆ ಬೇಸಿಗೆಯಲ್ಲಿ ಹಾಗೆ ಮಾಡುವುದರಿಂದ ಹೊಟ್ಟೆ ಅಥವಾ ಎದೆಯಲ್ಲಿ ಸುಡುವ ಸಂವೇದನೆ ಉಂಟಾಗುತ್ತದೆ. ಇದರಿಂದ ಗ್ಯಾಸ್ಟ್ರಿಕ್ ಅಥವಾ ಅಸಿಡಿಟಿ ಸಮಸ್ಯೆ ಉಂಟಾಗಬಹುದು. ಆದ್ದರಿಂದ ಈ ಕಾಲದಲ್ಲಿ ನೀವು ಬೆಳಿಗ್ಗೆ ಎದ್ದ ಕೂಡಲೇ ಟೊಮೆಟೊ ತಿನ್ನುವುದನ್ನು ತಪ್ಪಿಸಬೇಕು.
ಚಹಾ ಮತ್ತು ಕಾಫಿ:
ಚಹಾ ಅಥವಾ ಕಾಫಿ ಬೆಳಿಗ್ಗೆ ಕುಡಿಯುವುದು ರೂಢಿ. ಆದರೆ ತುಂಬಾ ಹಸಿವಿದ್ದಾಗ ಕೇವಲ ಚಹಾ ಅಥವಾ ಕಾಫಿಯನ್ನು ಮಾತ್ರ ಕುಡಿಯಬೇಡಿ. ಅದರ ಜೊತೆಗೆ ಏನಾದರೂ ತಿಂಡಿ ಸೇವಿಸುವುದು ಉತ್ತಮ. ಕೇವಲ ಚಹಾ ಕಾಫಿಯಷ್ಟೇ ಕುಡಿದರೆ ನಿಮಗೆ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗಬಹುದು. ಆದ್ದರಿಂದ ಈ ವಿಚಾರಗಳಲ್ಲಿ ಎಚ್ಚರಿಕೆ ವಹಿಸಿ.
ಮೊಸರು :
ಬೆಳಿಗ್ಗೆ ಎದ್ದು ಹಸಿವಾದಾಗ ಮೊಸರು ಸೇವಿಸುವ ಜನರು ಅನೇಕರಿದ್ದಾರೆ. ಆದರೆ ಆ ಮೊಸರು ಅವರಿಗೆ ಪ್ರಯೋಜನಕ್ಕೆ ಬದಲು ಹಾನಿ ಮಾಡುವುದೇ ಹೆಚ್ಚು. ಇಂತಹ ಪರಿಸ್ಥಿತಿಯಲ್ಲಿ, ಮೊಸರನ್ನು ಖಾಲಿ ಹೊಟ್ಟೆಯಲ್ಲಿ ಬೆಳಿಗ್ಗೆ ಸೇವಿಸುವುದನ್ನು ತಪ್ಪಿಸಬೇಕು, ಇಲ್ಲದಿದ್ದರೆ ನಿಮ್ಮ ಆರೋಗ್ಯವು ಹದಗೆಡಬಹುದು.
(Kannada Copy of Boldsky Kannada)
03-09-25 09:00 pm
HK News Desk
ಧರ್ಮಸ್ಥಳ ಚಲೋ' ಬಿಜೆಪಿ ನಾಯಕರ ವಿಡಿಯೋ ಬಳಸಿ ಜಾಲತಾಣ...
03-09-25 08:35 pm
ಪ್ರೀಮಿಯಂ ಬ್ರಾಂಡ್ ಮದ್ಯಗಳ ಬೆಲೆ ಇಳಿಕೆಗೆ ಚಿಂತನೆ ;...
03-09-25 02:30 pm
Mangalore, Moodbidri Police, Constable Shanta...
03-09-25 01:36 pm
ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ;...
02-09-25 11:04 pm
04-09-25 08:47 pm
HK News Desk
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
ಯಮ‘ಕಂಪನ’ ; ತಾಲಿಬಾನಿಗಳ ನೆಲೆ ಈಗ ಗಢಗಢ..ಭೂಕಂಪಕ್ಕೆ...
03-09-25 07:18 pm
04-09-25 11:07 pm
Mangalore Correspondent
Dharmasthala, Sameer Md, House Raid: ಧರ್ಮಸ್ಥಳ...
04-09-25 10:29 pm
Brijesh Chowta, Mangalore: ಜಿಎಸ್ಟಿ ಹೊರೆ ಇಳಿಸಿ...
04-09-25 07:57 pm
Mangalore, Loudspeaker Ban: ರಾತ್ರಿ ವೇಳೆ ಧ್ವನಿ...
04-09-25 07:39 pm
KMC Attavar Performs Rare, Life-Saving Surger...
03-09-25 11:03 pm
05-09-25 12:34 pm
Udupi Correspondent
ಹಟ್ಟಿಯಲ್ಲಿದ್ದ ಹಸುವನ್ನು ನಡುರಾತ್ರಿ ಎಳೆದೊಯ್ದು ರೈ...
05-09-25 11:43 am
Mangalore, Honey Trap, Kundapur, Crime: ಹುಡುಗ...
04-09-25 01:10 pm
Udupi Crime, Baby Sale Racket: ಮಂಗಳೂರಿನ ಪ್ರತಿ...
04-09-25 12:25 pm
Bagalur Police, Drugs, Crime: ಬ್ಯುಸಿನೆಸ್ ವೀಸಾ...
03-09-25 05:40 pm