ಬ್ರೇಕಿಂಗ್ ನ್ಯೂಸ್
28-06-21 12:10 pm Shreeraksha, BoldSky Kannada ಡಾಕ್ಟರ್ಸ್ ನೋಟ್
ಆಲೂಗಡ್ಡೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುವ ತರಕಾರಿ. ಜೊತೆಗೆ ಪೋಷಕಾಂಶಗಳು ಅಷ್ಟೇ ಸಮೃದ್ಧವಾಗಿವೆ. ಆದರೆ ನಾವು ತೆಗೆದು ಬಿಸಾಡುವ ಆಲೂಗಡ್ಡೆ ಸಿಪ್ಪೆಯಲ್ಲಿ ಎಷ್ಟೆಲ್ಲಾ ಪೋಷಕಾಂಶಗಳಿವೆ ಎಂದು ನಿಮಗೆ ತಿಳಿದಿದೆಯಾ?. ಹೌದು ಈ ಲೇಖನದಲ್ಲಿ ಆಲೂಗಡ್ಡೆ ಸಿಪ್ಪೆಯಲ್ಲಿ ಇರುವ ನಾನಾ ಆರೋಗ್ಯ ಪ್ರಯೋಜನಗಳನ್ನು ವಿವರಿಸಿದ್ದೇವೆ. ಇದನ್ನು ಓದಿ ಇನ್ನು ಮುಂದೆ ನೀವು ಆಲೂಗಡ್ಡೆಯ ಸಿಪ್ಪೆಯನ್ನು ತೆಗೆಯಲು ಹೋಗಬೇಡಿ.
ರಕ್ತದೊತ್ತಡ ನಿಯಂತ್ರಣ:
ಆಲೂಗಡ್ಡೆಗಳಲ್ಲಿ ಉತ್ತಮ ಪ್ರಮಾಣದ ಪೊಟ್ಯಾಸಿಯಮ್ ಕಂಡುಬರುತ್ತದೆ. ಇದು ರಕ್ತದೊತ್ತಡ ನಿಯಂತ್ರಣದಲ್ಲಿ ಪರಿಣಾಮಕಾರಿಯಾಗಿದೆ.ಪೊಟ್ಯಾಸಿಯಮ್ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಇನ್ನು ಮುಂದೆ ಆಲೂಗಡ್ಡೆ ಪಲ್ಯ ತಯಾರಿಸುವಾಗ ಅದರ ಸಿಪ್ಪೆ ತೆಗೆಯಬೇಡಿ. ಸಿಪ್ಪೆ ಸಮೇತ ಆಹಾರಗಳನ್ನು ತಯಾರಿಸಿ.
ರಕ್ತಹೀನತೆ ನಿಯಂತ್ರಣ:
ರಕ್ತಹೀನತೆ ಅಥವಾ ಕಬ್ಬಿಣದ ಕೊರತೆಯನ್ನು ನಿವಾರಿಸಲು ಇತರ ತರಕಾರಿಗಳೊಂದಿಗೆ ಆಲೂಗೆಡ್ಡೆ ಸಿಪ್ಪೆಗಳನ್ನು ತಿನ್ನುವುದು ಸಹ ಬಹಳ ಪ್ರಯೋಜನಕಾರಿ. ಆಲೂಗಡ್ಡೆ ಸಿಪ್ಪೆಗಳು ಉತ್ತಮ ಪ್ರಮಾಣದ ಕಬ್ಬಿಣದ ಅಂಶವನ್ನು ಹೊಂದಿರುತ್ತವೆ, ಇದು ರಕ್ತಹೀನತೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಹಾಗೂ ಸಾಕಷ್ಟು ಪ್ರಮಾಣದ ಕಬ್ಬಿಣವನ್ನು ನಿಮ್ಮ ದೇಹಕ್ಕೆ ನೀಡುವುದು.
ದೇಹವನ್ನು ಬಲಗೊಳಿಸುವುದು:
ಆಲೂಗೆಡ್ಡೆ ಸಿಪ್ಪೆಗಳಲ್ಲಿ ವಿಟಮಿನ್ ಬಿ 3 ಹೇರಳವಾಗಿ ಕಂಡುಬರುತ್ತದೆ. ಈ ವಿಟಮಿನ್ ಬಿ 3 ದೇಹಕ್ಕೆ ಶಕ್ತಿ ನೀಡುವ ಕೆಲಸ ಮಾಡುತ್ತದೆ. ಇದಲ್ಲದೆ, ಇದರಲ್ಲಿರುವ ನಾಸಿನ್ ಕಾರ್ಬ್ಸ್ ಅನ್ನು ಶಕ್ತಿಯನ್ನಾಗಿ ಪರಿವರ್ತಿಸುತ್ತದೆ. ಆದ್ದರಿಂದ ಆಲೂಗಡ್ಡೆಯನ್ನು ಸಿಪ್ಪೆ ಸಮೇತ ತಿನ್ನುವುದು ಉತ್ತಮ. ಇದು ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸುವುದು.
ಜೀರ್ಣ ಕ್ರಿಯೆ ಸುಧಾರಣೆ:
ಫೈಬರ್ ಸಮೃದ್ಧವಾಗಿರುವ ಆಹಾರ ಸೇವನೆಯಿಂದ ಜೀರ್ಣಕ್ರಿಯೆ ಸರಾಗವಾಗಿ ನಡೆಯುವುದು. ಒಂದೆಡೆ, ಆಲೂಗಡ್ಡೆ ಫೈಬರ್ನಲ್ಲಿ ಸಮೃದ್ಧವಾಗಿದ್ದರೆ, ಅದರ ಸಿಪ್ಪೆಯಲ್ಲಿ ಸಹ ಉತ್ತಮ ಪ್ರಮಾಣದ ಫೈಬರ್ ಇರುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುವುದು.
ಮೂಳೆ ಬಲಕ್ಕಾಗಿ:
ಆಲೂಗೆಡ್ಡೆ ಸಿಪ್ಪೆಯಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಸಂಕೀರ್ಣವಿದೆ. ಇದು ಮೂಳೆಗಳನ್ನು ಬಲಪಡಿಸುವುದಲ್ಲದೇ, ದೇಹವು ವಿಟಮಿನ್ ಬಿ ಯಿಂದ ಶಕ್ತಿಯನ್ನು ಪಡೆಯುತ್ತದೆ. ಆದ್ದರಿಂದ ಆಲೂಗಡ್ಡೆ ಭಕ್ಷ್ಯ ತಯಾರಿಸಿದಾಗಲೆಲ್ಲಾ ಸಿಪ್ಪೆಯೊಂದಿಗೆತಯಾರಿಸಲು ಪ್ರಯತ್ನಿಸಿ. ಅಥವಾ ಇದನ್ನು ಲಘು ಆಹಾರವಾಗಿ ಬಳಸಬಹುದು.
ಕಪ್ಪು ಚರ್ಮ ನಿವಾರಣೆ:
ಕಣ್ಣುಗಳ ಕೆಳಗೆ ಡಾರ್ಕ್ ಸರ್ಕಲ್ ಗಳು ರೂಪುಗೊಂಡಿದ್ದರೆ ಅಥವಾ ಸೂರ್ಯನ ಬೆಳಕಿನಿಂದ ಚರ್ಮವು ಕಂದು ಬಣ್ಣಕ್ಕೆ ತಿರುಗಿದ್ದರೆ, ಆಲೂಗಡ್ಡೆ ಸಿಪ್ಪೆ ಉತ್ತಮ ಮನೆಮದ್ದಾಗಿ ಕಾರ್ಯನಿರ್ವಹಿಸುವುದು. ಇದಕ್ಕಾಗಿ ನೀವು ಆಲೂಗೆಡ್ಡೆ ಸಿಪ್ಪೆಯನ್ನು ಜಜ್ಜಿ, ಅದರ ರಸವನ್ನು ಹೊರತೆಗೆದು ಮುಖಕ್ಕೆ ಹಚ್ಚಿ.ಇದರಿಂದ ಕಪ್ಪು ಬಣ್ಣ ಮಾಸುವುದನ್ನು ಕಾಣಬಹುದು.
ಕೂದಲು ಬೆಳ್ಳಗಾಗುವುದನ್ನ ತಡೆಯುವುದು:
ನಿಮ್ಮ ಕೂದಲು ಬಿಳಿಯಾಗುತ್ತಿದ್ದರೆ , ನೀವು ಆಲೂಗೆಡ್ಡೆ ಸಿಪ್ಪೆಯನ್ನು ಅರ್ಧ ಲೀಟರ್ ನೀರಿನಲ್ಲಿ ಕುದಿಸಿ. ನೀರು ಒಂದರಿಂದ ಎರಡು ಚಮಚಗಳಾಗಿ ಉಳಿದ ನಂತರ ಅದನ್ನು ನಿಮ್ಮ ಕೂದಲಿಗೆ ಹಚ್ಚಿ. ಇದನ್ನು ಪದೇ ಪದೇ ಮಾಡುವುದರಿಂದ, ನಿಮ್ಮ ಕೂದಲು ಕಪ್ಪು ಬಣ್ಣಕ್ಕೆ ತಿರುಗುತ್ತದೆ.
(Kannada Copy of Boldsky Kannada)
06-06-25 12:58 am
Bengaluru Staff
Bangalore Police commissioner Dayanand, RCB,...
05-06-25 11:04 pm
Rcb, Death, Bangalore, Araga Jnandnder: ಕಾಲ್ತ...
05-06-25 09:27 pm
DK Shivakumar, Crying, RCB, Bangalore; ಬೆಂಗಳೂ...
05-06-25 04:31 pm
Anjum Parwez, CM Siddaramaiah: ಸಿಎಂ ಸಿದ್ದರಾಮಯ...
05-06-25 11:06 am
05-06-25 07:54 pm
HK News Desk
30 ಅಡಿ ಉದ್ದದ ಅತಿ ವಿರಳ ದೇವರ ಮೀನು ತಮಿಳುನಾಡಿನಲ್ಲ...
04-06-25 05:05 pm
MP Brijesh Chowta, Delegation: ಐದು ದೇಶಗಳಲ್ಲಿ...
03-06-25 10:10 pm
ಎರಡನೇ ಮಹಡಿಯಿಂದ ಕೆಳಕ್ಕೆ ಬಿದ್ದ ಕಟ್ಟಡ ಕಾರ್ಮಿಕನನ್...
01-06-25 12:35 pm
ಮಲಪ್ಪುರಂನಲ್ಲಿ ಕುಸಿದು ಹೋದ ರಾಷ್ಟ್ರೀಯ ಹೆದ್ದಾರಿ,...
26-05-25 11:34 pm
05-06-25 10:29 pm
Mangalore Correspondent
Mangalore Congress: ಶಾಂತಿ ಮರುಸ್ಥಾಪನೆ ಬಗ್ಗೆ ಅಧ...
05-06-25 07:05 pm
Ramesh Rai, BJP, Puttur, Mangalore: ಪುತ್ತೂರು...
05-06-25 06:00 pm
BK Hariprasad, Mangalore, Congress; ಮಂಗಳೂರಿಗೆ...
05-06-25 03:56 pm
B K Hariprasad, Mangalore, RCB; ಐಪಿಎಲ್ ನಡೆಸೋರ...
05-06-25 03:05 pm
03-06-25 10:25 pm
Mangalore Correspondent
Mangalore Suhas Shetty Murder Case, arrest; ಸ...
03-06-25 08:01 pm
Bank robbery, Vijayapura, 58 crore: ವಿಜಯಪುರದಲ...
03-06-25 01:33 pm
Mangalore Police, CCB, Cattle trafficking, Ta...
02-06-25 04:01 pm
Ullal, Mangalore, Crime: ಕೋಮು ದ್ವೇಷದ ನೆಲದಲ್ಲ...
01-06-25 11:02 pm