ಬ್ರೇಕಿಂಗ್ ನ್ಯೂಸ್
04-10-21 02:47 pm Source: News 18 Kannada ಡಾಕ್ಟರ್ಸ್ ನೋಟ್
ಅಚಿಯೋಟ್ ಹಣ್ಣಿನ ಬೀಜಗಳಿಂದ ಹೊರ ತೆಗೆಯಲಾದ ಆಹಾರದ ಬಣ್ಣ ಮತ್ತು ಕಾಂಡಿಮೆಂಟ್ ಅನ್ನು ಅನ್ನಾಟೊ ಎಂದು ಕರೆಯಲಾಗುತ್ತದೆ. ಇದು ಹಲವಾರು ವರ್ಷಗಳಿಂದ ಹೆಚ್ಚು ಬಳಕೆಯಲ್ಲಿದೆ. ಅಚಿಯೋಟ್ ಮರವು ಉಷ್ಣವಲಯದ ಬೆಳೆಯುವ ಸಣ್ಣ ಮರವಾಗಿದ್ದು ಇದು ಮಧ್ಯ ಮತ್ತು ದಕ್ಷಿಣ ಅಮೆರಿಕಾದಲ್ಲಿ ಬಿಕ್ಸಾ ಒರೆಲ್ಲಾನಾ ಎಂಬ ವೈಜ್ಞಾನಿಕ ಹೆಸರಿನಲ್ಲಿ ಬೆಳೆಯುತ್ತದೆ. ಈ ಉಷ್ಣವಲಯದ ಮರದ ಹೂವುಗಳು ಬಿಳಿ ಅಥವಾ ಗುಲಾಬಿ ಬಣ್ಣದ್ದಾಗಿರುತ್ತವೆ, ಆದರೆ ಹಣ್ಣುಗಳು ಮೊನಚಾದ ಕಂದು ಮತ್ತು ಕೆಂಪು ಬೀಜಕೋಶಗಳಿಂದ ಕೂಡಿರುತ್ತದೆ. ಆ ಬೀಜಗಳು ಒಣಗಿದಾಗ ಮತ್ತು ಬಿರುಕು ಬಿಟ್ಟಾಗ, ಅವು ಕೆಂಪು ಬಣ್ಣದ ವಸ್ತುವನ್ನು ಹೊರಹಾಕುತ್ತವೆ. ಇದರಿಂದ ಕೆಂಪು ವರ್ಣದ್ರವ್ಯವನ್ನು ಹೊರತೆಗೆಯಬಹುದು. ಅದಕ್ಕಾಗಿಯೇ ಅಚಿಯೋಟ್ ಮರವನ್ನು ಹೆಚ್ಚಾಗಿ ಲಿಪ್ಸ್ಟಿಕ್ ಮರ ಎಂದು ಕರೆಯಲಾಗುತ್ತದೆ.
ಅನ್ನಾಟೊದ ಬಲವಾದ ದ್ರವ್ಯವು ಇದನ್ನು ನೈಸರ್ಗಿಕ ಆಹಾರ ಬಣ್ಣವನ್ನಾಗಿ ಮಾಡುತ್ತದೆ, ಮತ್ತು ಇದು ಸೌಂದರ್ಯವರ್ಧಕಗಳಲ್ಲಿ ಸಾಕಷ್ಟು ಬಳಕೆ ಮಾಡಲಾಗುತ್ತದೆ. ಆದರೆ ಮುಖ್ಯವಾಗಿ, ಇದು ಹಲವಾರು ಔಷಧೀಯ ಮತ್ತು ಗಿಡಮೂಲಿಕೆಗಳ ಪ್ರಯೋಜನಗಳನ್ನು ಹೊಂದಿದೆ ಎಂಬುದು ಎಷ್ಟೋ ಜನರಿಗೆ ತಿಳಿದಿಲ್ಲ. ಹೌದು, ಈ ಅನ್ನಾಟೊದಲ್ಲಿ ಬಹಳಷ್ಟು ಆರೋಗ್ಯ ಪ್ರಯೋಜನಗಳಿವೆ.

ಅನಾಟೊ ಬೀಜಗಳ ಕೆಂಪು ಬಣ್ಣ ಮತ್ತು ಅವುಗಳಿಂದ ಹೊರತೆಗೆಯಲಾದ ವರ್ಣದ್ರವ್ಯವು ಆ ಬೀಜಗಳಲ್ಲಿನ ಕ್ಯಾರೊಟಿನಾಯ್ಡ್ ಅಂಶದಿಂದಾಗಿ ಕಣ್ಣಿನ ಆರೋಗ್ಯಕ್ಕೆ ಬಹಳ ಉಪಯುಕ್ತ ಎನ್ನಲಾಗುತ್ತದೆ. ಅನ್ನಾಟೊ ಬೀಜಗಳನ್ನು ಕಿತ್ತಳೆ ಅಥವಾ ಕೆಂಪು ಬಣ್ಣದಲ್ಲಿದ್ದರೆ ಮಾತ್ರ ಖರೀದಿಸಿ. ಈ ಹೆಚ್ಚಿನ ಕ್ಯಾರೊಟಿನಾಯ್ಡ್ ಅಂಶವು ನಿಮ್ಮ ಕಣ್ಣಿನ ವ್ಯವಸ್ಥೆಯಲ್ಲಿ ಆ್ಯಂಟಿಆಕ್ಸಿಡೆಂಟ್ಗಳಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಕಣ್ಣಿನ ಪೊರೆಗಳ ಬೆಳವಣಿಗೆಯನ್ನು ತಡೆಯುತ್ತದೆ, ಹಾಗೆಯೇ ಮ್ಯಾಕ್ಯುಲರ್ ಡಿಜೆನರೇಶನ್ ಅನ್ನು ತಡೆಯುತ್ತದೆ.
ಕಾರ್ಯನಿರ್ವಹಿಸುತ್ತದೆ ಟೊಕೊಟ್ರಿಯೆನಾಲ್ಗಳಂತಹ ಅನ್ನಾಟ್ಟೊದಲ್ಲಿರುವ ಸಾವಯವ ಅಂಶಗಳು ದೇಹದ ಇತರ ಭಾಗಗಳಲ್ಲಿ ಆಂಟಿಆಕ್ಸಿಡೆಂಟ್ಗಳಾಗಿ ಕಾರ್ಯನಿರ್ವಹಿಸುತ್ತವೆ, ಇದು ಚರ್ಮದ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ನಿಮ್ಮ ಚರ್ಮದ ಸುಕ್ಕಿನ ಸಮಸ್ಯೆಗೆ ಪರಿಹಾರ ಬೇಕಿದ್ದರೆ, ಅನ್ನಾಟೋ ಪೇಸ್ಟ್ ಹಚ್ಚುವುದು ಸುಕ್ಕುಗಳು, ಕಲೆಗಳು ಮತ್ತು ಇತರ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಹಾಗು ಚರ್ಮವನ್ನು ಬಿಗಿಗೊಳಿಸುವುದರ ಜೊತೆಗೆ ನಿಮ್ಮ ಚರ್ಮದ ಕಿರಿಕಿರಿಯನ್ನು ನಿವಾರಣೆ ಮಾಡುತ್ತದೆ.

ಅನಾಟೊ ಬೀಜಗಳಲ್ಲಿ ಕಂಡುಬರುವ ಉನ್ನತ ಮಟ್ಟದ ಫೈಬರ್, ಮತ್ತು ಅಚಿಯೋಟ್ ಕರುಳಿನ ಮೂಲಕ ಆಹಾರವನ್ನು ಸರಾಗವಾಗಿ ಸಾಗಿಸಲು ಮತ್ತು ಪೋಷಕಾಂಶಗಳನ್ನು ಸಮರ್ಥವಾಗಿ ತೆಗೆದುಕೊಳ್ಳಲು ಉತ್ತೇಜಿಸುವ ಮೂಲಕ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಫೈಬರ್ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮತ್ತು ಮಧುಮೇಹವನ್ನು ನಿರ್ವಹಿಸಲು ಬಹಳ ಪ್ರಮುಖವಾಗಿದೆ. ಏಕೆಂದರೆ ಇದು ರಕ್ತದಲ್ಲಿನ ಇನ್ಸುಲಿನ್ ಮತ್ತು ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸಲು ಹಾಗೂ ನಿಯಂತ್ರಿಸಲು ಪರಿಣಾಮಕಾರಿ ಎಂಬುದು ತಿಳಿದಿರುವ ವಿಚಾರ. ಇದನ್ನು ಪುರಾತನ ಕಾಲದಿಂದಲೂ ಮಧುಮೇಹ ನಿರ್ವಹಣೆಯ ಮೂಲಿಕೆಯನ್ನಾಗಿಯೂ ಬಳಕೆ ಮಾಡಲಾಗುತ್ತಿದೆ.

ವಯಸ್ಸಾದಂತೆ ಶಕ್ತಿ ಮತ್ತು ಆಯಾಸ ಕಡಿಮಾಗುತ್ತದೆ. ಹಾಗಾಗಿ ನಿಮ್ಮ ಮೂಳೆಯ ಖನಿಜಗಳ ಅವಶ್ಯಕತೆ ಹೆಚ್ಚಿರುತ್ತದೆ. ಅನಾಟೊದಲ್ಲಿ ಕಂಡುಬರುವ ಕ್ಯಾಲ್ಸಿಯಂನ ಮಟ್ಟವು ಸ್ನಾಯು ಶಕ್ತಿಯನ್ನು ಹೆಚ್ಚಿಸಲು ಮುಖ್ಯವಾಗುತ್ತದೆ. ಆಸ್ಟಿಯೊಪೊರೋಸಿಸ್ ಸಮಸ್ಯೆ ಯಾರಲ್ಲಿ ಬೇಕಾದರೂ ಕಾಣಿಸಿಕೊಳ್ಳಬಹುದು. ಆದ್ದರಿಂದ ಕ್ಯಾಲ್ಸಿಯಂನಂತಹ ಅಗತ್ಯ ಖನಿಜಗಳು ಅದನ್ನು ತಡೆಗಟ್ಟುಲು ಸಹಕಾರಿಯಾಗಿದೆ.
ಹೊಟ್ಟೆ ನೋವನ್ನು ಶಮನಗೊಳಿಸಲು, ಅನ್ನಾಟೋವನ್ನು ಹೆಚ್ಚಾಗಿ ಸೇವಿಸಲಾಗುತ್ತದೆ, ಏಕೆಂದರೆ ಇದು ಎದೆಯುರಿ ಮತ್ತು ಹೊಟ್ಟೆಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಅಲ್ಲದೇ ಇದು ವೈರಲ್ ಸೋಂಕುಗಳಿಂದ ದೇಹವನ್ನು ಕಾಪಾಡಲು ಸಹಾಯ ಮಾಡುತ್ತದೆ.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm