ಬ್ರೇಕಿಂಗ್ ನ್ಯೂಸ್
 
            
                        21-11-22 06:26 pm Mangalore Correspondent ಕರಾವಳಿ
 
            ಮಂಗಳೂರು, ನ.21: ಕುಕ್ಕರ್ ಬಾಂಬ್ ಬ್ಲಾಸ್ಟ್ ಘಟನೆಯಿಂದಾಗಿ ಜನರು ಆತಂಕದಲ್ಲಿರುವಾಗಲೇ ಮಂಗಳೂರಿನಲ್ಲಿ ಮತ್ತೊಂದು ಅನುಮಾನಾಸ್ಪದ ವಸ್ತುವೊಂದು ಪತ್ತೆಯಾಗಿ ಪೊಲೀಸರನ್ನೇ ಆತಂಕಕ್ಕೀಡು ಮಾಡಿದ ಪ್ರಸಂಗ ನಡೆದಿದೆ.
ಸೋಮವಾರ ಮಧ್ಯಾಹ್ನ 2.30ರ ಸುಮಾರಿಗೆ ನಗರದ ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಅನಾಥ ಬ್ಯಾಗ್ ಪತ್ತೆಯಾಗಿದ್ದು, ಅಲ್ಲಿದ್ದ ಜನರು ಮತ್ತು ನಿಲ್ದಾಣದ ಸಿಬಂದಿ ಅದನ್ನು ನೋಡುತ್ತಲೇ ಆತಂಕಗೊಂಡಿದ್ದಾರೆ. ವಾರೀಸುದಾರರಿಲ್ಲದೆ ಬ್ಯಾಗ್ ಬಸ್ ನಿಲ್ದಾಣದ ಒಳಗಿನ ಮೆಟ್ಟಿಲ ಬಳಿ ಅನಾಥವಾಗಿ ಬಿದ್ದುಕೊಂಡಿತ್ತು. ವಿಷಯ ತಿಳಿದ ಪೊಲೀಸರು ಅಲ್ಲಿದ್ದ ಜನರನ್ನು ದೂರಕ್ಕೆ ತೆರಳುವಂತೆ ಸೂಚಿಸಿದ್ದಾರೆ.


ಮೆಟ್ಟಿಲ ಹಾದಿಗೆ ಬ್ಯಾರಿಕೇಡ್ ಹಾಕಿ ಅಲ್ಲಿಂದ ಜನ ಸಂಚಾರವನ್ನು ಬಂದ್ ಮಾಡಿದ್ದಾರೆ. ಕೂಡಲೇ ಶ್ವಾನದಳ ಮತ್ತು ಬಾಂಬ್ ನಿಷ್ಕ್ರಿಯ ದಳವನ್ನೂ ಸ್ಥಳಕ್ಕೆ ಕರೆಸಿದ್ದಾರೆ. ಶ್ವಾನದಳ ತಪಾಸಣೆ ನಡೆಸಿದಾಗ ಯಾವುದೇ ಅನುಮಾನಾಸ್ಪದ ವಸ್ತು ಕಂಡುಬಂದಿಲ್ಲ. ಹೀಗಾಗಿ ಪೊಲೀಸರು ಬ್ಯಾಗನ್ನು ತೆಗೆದು ಪರಿಶೀಲನೆ ನಡೆಸಿದಾಗ, ಅದರಲ್ಲಿ ಒಂದಷ್ಟು ಹಳೆಯ ಬಟ್ಟೆಗಳು ಮತ್ತು ಕಾಗದ ಪತ್ರಗಳಷ್ಟೇ ಇದ್ದವು. ಅದನ್ನು ನೋಡಿದ ಪೊಲೀಸರು ತಾವು ಇಷ್ಟಕ್ಕೇ ಇಷ್ಟೊಂದು ಹೆದರಿಕೊಂಡಿದ್ದೇ ಅನ್ನುವಂತಾಯಿತು.

ಬಂದರು ಠಾಣೆ ಪೊಲೀಸರು ಮತ್ತು ಶ್ವಾನದಳ ಬಸ್ ನಿಲ್ದಾಣದ ಸುತ್ತಮುತ್ತ ತಪಾಸಣೆಯನ್ನೂ ನಡೆಸಿತು. ಬ್ಯಾಗಿನಲ್ಲಿ ಏನೂ ಇಲ್ಲ ಎಂಬುದನ್ನು ತಿಳಿಯುತ್ತಲೇ ಬಸ್ ನಿಲ್ದಾಣದ ಸಿಬಂದಿ ಮತ್ತು ಪ್ರಯಾಣಿಕರು ನಿಟ್ಟುಸಿರು ಬಿಟ್ಟರು. ಎರಡು ದಿನಗಳ ಹಿಂದಷ್ಟೇ ಕುಕ್ಕರ್ ಬಾಂಬ್ ಬ್ಲಾಸ್ಟ್ ಆಗಿದ್ದು ಅದರಿಂದಾಗಿ ಬಾಂಬ್ ಆತಂಕದ ವಾತಾವರಣ ನೆಲೆಸಿದ್ದರಿಂದ ಜನರು ಮತ್ತು ಪೊಲೀಸರು ಸಹಜವಾಗಿಯೇ ಬ್ಯಾಗ್ ಕಂಡು ಆತಂಕಗೊಂಡಿದ್ದರು. ಯಾರೋ ಪ್ರಯಾಣಿಕರು ಬ್ಯಾಗನ್ನು ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದರು ಅನ್ನುವ ಅನುಮಾನವಿದ್ದು ಪೊಲೀಸರು ವಶಕ್ಕೆ ಪಡೆದಿದ್ದಾರೆ.
 
            
            
            Autorickshaw blast in Mangalore, Unidentified bag found in KSRTC bus stand create Panic. The bomb and canine squad of police rushed to the spot. After inspection, the owner of the bag was traced. The bag was that of a passenger.
 
    
            
             31-10-25 08:10 pm
                        
            
                  
                HK News Desk    
            
                    
 
    'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
 
    ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
 
    ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
 
    ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ನ.5ರಂದು ಮತ್ತೊಂದ...
30-10-25 06:22 pm
 
    
            
             30-10-25 03:20 pm
                        
            
                  
                HK News Desk    
            
                    
 
    ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
 
    ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
 
    ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
 
    ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
 
    
            
             31-10-25 10:47 pm
                        
            
                  
                Mangalore Correspondent    
            
                    
 
    MP Brijesh Chowta, Mangalore: ದೇಶವ್ಯಾಪಿ ಸರ್ದಾ...
31-10-25 09:23 pm
 
    ಅನಧಿಕೃತ ಪಾರ್ಕಿಂಗ್ ವಿರುದ್ಧ ಮಂಗಳೂರು ಪೊಲೀಸರ ಕಾರ್...
31-10-25 09:00 pm
 
    78 ಶೇ. ಜನರಿಗೆ ಎರಡು ವರ್ಷದಲ್ಲಿ 23 ಸಾವಿರ ಮಕ್ಕಳು,...
31-10-25 03:05 pm
 
    ಬಿಸಿ ರೋಡಿನಲ್ಲಿ ಆಂಬುಲೆನ್ಸ್ ಗೆ ಸೈಡ್ ಕೊಡದೆ ಸತಾಯಿ...
30-10-25 11:16 pm
 
    
            
             31-10-25 10:57 pm
                        
            
                  
                Mangalore Correspondent    
            
                    
 
    ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm
 
    ಇಂಗ್ಲೆಂಡಿನಲ್ಲಿ ಉದ್ಯೋಗ ಆಮಿಷ ; ಮಂಗಳೂರು- ಉಡುಪಿಯ...
29-10-25 10:43 pm
 
    ಪ್ರೇಯಸಿಗಾಗಿ ಕಳ್ಳತನಕ್ಕಿಳಿದ ಲವ್ವರ್ ; 40 ಲಕ್ಷ ಮ...
29-10-25 10:09 pm
 
    ವಿಷನ್ ಇಂಡಿಯಾ ಹೆಸರಲ್ಲಿ ನಕಲಿ ಲಕ್ಕಿ ಸ್ಕೀಮ್ ; ಪುತ...
29-10-25 02:53 pm