ಸಾರ್ವಜನಿಕ ಜೀವನದಲ್ಲಿ ಚಪ್ಪಲಿ ಹಾರ ಹಾಕಿಸಿಕೊಳ್ಳೋದಕ್ಕೂ ರೆಡಿ ಇರಬೇಕು ; ಕಾಂಗ್ರೆಸ್ ಮೇಲೆ ಹೊರಿಸಿ ಅಪಹಾಸ್ಯಕ್ಕೆ ಈಡಾಗಬೇಡಿ - ಮುತಾಲಿಕ್ 

20-05-23 07:23 pm       Mangalore Correspondent   ಕರಾವಳಿ

ಸಾರ್ವಜನಿಕ ಜೀವನದಲ್ಲಿ ಇದ್ದ ಮೇಲೆ ಚಪ್ಪಲಿ ಹಾರ ಹಾಕಿಸೋಕು ರೆಡಿ ಇರಬೇಕು. ಹೂವಿನ ಹಾರ ಹಾಕಿಸಿಕೊಳ್ಳೋಕು ರೆಡಿ ಇರಬೇಕು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. 

ಪುತ್ತೂರು, ಮೇ 20 : ಸಾರ್ವಜನಿಕ ಜೀವನದಲ್ಲಿ ಇದ್ದ ಮೇಲೆ ಚಪ್ಪಲಿ ಹಾರ ಹಾಕಿಸೋಕು ರೆಡಿ ಇರಬೇಕು. ಹೂವಿನ ಹಾರ ಹಾಕಿಸಿಕೊಳ್ಳೋಕು ರೆಡಿ ಇರಬೇಕು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. 

ಪೊಲೀಸರಿಂದ ಹಲ್ಲೆಗೀಡಾಗಿ ಆಸ್ಪತ್ರೆಗೆ ದಾಖಲಾದ ಬಿಜೆಪಿ ಕಾರ್ಯಕರ್ತರನ್ನು ಭೇಟಿಯಾದ ಮುತಾಲಿಕ್, ಹಿಂದು ಕಾರ್ಯಕರ್ತರ ಜೊತೆ ಮಾತುಕತೆ ನಡೆಸಿದರು. ಚಪ್ಪಲಿ ಹಾರ ಅಲ್ಲ, ಅದಕ್ಕಿಂತ ಹೆಚ್ಚು ಜನರು ಮುಖಕ್ಕೆ ಉಗಿಯುತ್ತಿದ್ದಾರೆ. ಲಕ್ಷಾಂತರ ಜನರಿಗೆ ಏನು ವಿಷಯ ಅಂತ ಗೊತ್ತಿದೆ. ಆದರೆ ಇಂಥ ಸ್ಥಿತಿ ಆಗಬಾರದಿತ್ತು. ಹಿಂದು ಕಾರ್ಯಕರ್ತರ ನಡುವೆಯೇ ಈ ರೀತಿ ಆಗಿರುವುದು ದುಷ್ಟ ಶಕ್ತಿಗಳು ಮೆರೆಯುವಂತಾಗಿದೆ. ನಮ್ಮವರನ್ನು ನೋಡಿ ನಗುತ್ತಿದ್ದಾರೆ.‌ ಇದನ್ನು ನಾವು ಕುಳಿತು ಸರಿ ಮಾಡಿಕೊಳ್ಳಬೇಕಿದೆ ಎಂದರು. 

ಪೊಲೀಸ್ ದೌರ್ಜನ್ಯವನ್ನು ಕಾಂಗ್ರೇಸ್ ಮೇಲೆ ಹೊರಿಸಿದ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ್ ಪ್ರಭಾಕರ್ ಭಟ್ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ ಮುತಾಲಿಕ್, ಕಾಂಗ್ರೆಸ್ ಮೇಲೆ ಆರೋಪ ಮಾಡೋದು ತಪ್ಪು, ಪ್ರಭಾಕರ್ ಭಟ್ ಅವರ ಮಾತು ಒಪ್ಪುವಂತದಲ್ಲ, ಯಾಕಂದ್ರೆ ಹಿಂದೂ ಕಾರ್ಯಕರ್ತರ ವಿರುದ್ಧ ಪ್ರತಿಭಟಿಸಿದ್ದು ಬಿಜೆಪಿ ಪರಾಜಿತ ಅಭ್ಯರ್ಥಿ ಮತ್ತು ಮಾಜಿ ಶಾಸಕರು. ಅವರೇ ಪ್ರತಿಭಟನೆಯಲ್ಲಿ ಹಿಂದು ಕಾರ್ಯಕರ್ತರಿಗೆ ಧಿಕ್ಕಾರ ಕೂಗಿದ್ದಾರೆ. ಕಾಂಗ್ರೆಸ್ ನವರು ಪ್ರತಿಭಟಿಸಿದ್ದಲ್ಲ. ಈ ರೀತಿ ಹೇಳಿಕೆ ನೀಡಿ ಅಪಹಾಸ್ಯಕ್ಕೆ ಈಡಾಗಬೇಡಿ ಎಂದರು. 

ಪ್ರಕರಣವನ್ನ ಮುಚ್ಚಿ ಹಾಕುವಂತ ಕೆಲಸ ಮಾಡಬೇಡಿ, ಅದು ಬಿಟ್ಟು ತಪ್ಪನ್ನ ಒಪ್ಪಿಕೊಂಡು ಸರಿಪಡಿಸುವ ಕೆಲಸ ಮಾಡಿ, ಜನರಿಗೆ ಸತ್ಯ‌ ಗೊತ್ತಿದೆ, ಇನ್ನೇನೋ ಹೇಳೋಕೆ ಹೋಗಿ ಮತ್ತೆ ಅಪಹಾಸ್ಯಕ್ಕೆ ಒಳಗಾಗುವುದು ಬೇಡ ಎಂದು ಪ್ರಭಾಕರ್ ಭಟ್ ಹೇಳಿಕೆಗೆ ಪ್ರಮೋದ್ ಮುತಾಲಿಕ್ ಟಾಂಗ್ ನೀಡಿದ್ದಾರೆ. ಡಿವೈಎಸ್ಪಿ ಅವರನ್ನು ಅಮಾನತು ಮಾಡಬೇಕು ಮತ್ತು ಈ ಪ್ರಕರಣದ ಹಿಂದೆ ಯಾರಿದ್ದಾರೆ ಅಂತ ಪತ್ತೆ ಮಾಡಬೇಕು. ಶ್ರೀರಾಮ ಸೇನೆಯಿಂದ ನೂತನ ಗೃಹ ಸಚಿವರನ್ನು ಭೇಟಿಯಾಗಿ ಈ ಬಗ್ಗೆ ತನಿಖೆ ಆಗಬೇಕೆಂದು ಆಗ್ರಹ ಮಾಡುತ್ತೇವೆ ಎಂದರು.

Puttur BJP Banner row, Police autrocity, Pramod Muthalik visits hospital to see victims. The controversial banner in Puttur mocks former Chief Minister D.V.Sadananda Gowda and Dakshina Kannada MP and State BJP president Nalin Kumar Kateel for the BJP’s defeat in Puttur Assembly constituency.