ಬ್ರೇಕಿಂಗ್ ನ್ಯೂಸ್
02-07-24 10:35 pm Mangalore Correspondent ಕರಾವಳಿ
ಮಂಗಳೂರು, ಜುಲೈ.2: ನೀಟ್ ಪರೀಕ್ಷೆ ರದ್ದುಪಡಿಸಬೇಕು ಎಂದು ಒತ್ತಾಯಿಸಿ ಎನ್ಎಸ್ ಯುಐ ಮತ್ತು ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದ ಕ್ಲಾಕ್ ಟವರ್ ಮುಂಭಾಗದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಬಿಜೆಪಿ ಡೌನ್ ಡೌನ್ ಎಂದು ಘೋಷಣೆ ಕೂಗಿದ್ದಲ್ಲದೆ, ನೀಟ್ ಪರೀಕ್ಷೆಯಲ್ಲಿ ಹಗರಣ ಆಗಿದ್ದರೂ, ಮೌನ ವಹಿಸಿರುವ ಪ್ರಧಾನಿ ಮೋದಿಗೆ ಧಿಕ್ಕಾರ ಕೂಗಿದ್ದಾರೆ.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ರಾಜ್ಯ ಕಾಂಗ್ರೆಸ್ ವಕ್ತಾರ ಎಂಜಿ ಹೆಗ್ಡೆ, ನೀಟ್ ಹಗರಣ ಸಂಬಂಧಿಸಿ ಸಿಬಿಐ ಅಧಿಕಾರಿಗಳು ಗುಜರಾತ್ ಮತ್ತು ಬಿಹಾರದಲ್ಲಿಯೇ ಹೆಚ್ಚಿನ ಕಡೆ ದಾಳಿ ನಡೆಸಿದ್ದಾರೆ. ಬಿಹಾರದಲ್ಲಿ ಕೋಚಿಂಗ್ ಸೆಂಟರ್ ಹೊಂದಿರುವ ವ್ಯಕ್ತಿಯೇ ಇದರ ಕಿಂಗ್ ಪಿನ್. ವಿಶೇಷ ಅಂದ್ರೆ, ಆತ ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿ. ಆತನ ಕೋಚಿಂಗ್ ಸೆಂಟರಿನಿಂದ ಪರೀಕ್ಷೆ ಬರೆದವರೆಲ್ಲ ಪಾಸ್ ಆಗಿದ್ದಾರೆ. ಪರೀಕ್ಷೆಗೂ ಮೊದಲೇ ಪ್ರಶ್ನೆ ಪತ್ರಿಕೆ ಬಿಹಾರದಲ್ಲಿ ಹಂಚಿಕೆಯಾಗಿದೆ ಎನ್ನುವುದಕ್ಕಿದು ಸಾಕ್ಷಿ. ಬಿಹಾರದಲ್ಲಿ 20ಕ್ಕೂ ಹೆಚ್ಚು ಬಂಧನ ಆಗಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಬಾಯಿಬಿಟ್ಟಿದ್ದಾರೆ. ಹಾಗಿದ್ದರೂ, ಕೇಂದ್ರ ಸರಕಾರ ಈ ಬಗ್ಗೆ ಮೌನ ವಹಿಸಿದ್ದು ನೋಡಿದರೆ ಇವರು ಮಕ್ಕಳ ಪರೀಕ್ಷೆ ವಿಚಾರದಲ್ಲಿಯೂ ಕಾಸು ಮಾಡಿದ್ದಾರೆ ಎನ್ನುವುದು ತಿಳಿಯುತ್ತದೆ ಎಂದರು.
ನೀಟ್ ಲೀಕ್, ಎನ್ ಡಿಎ ಲೀಕ್ ಎನ್ನುವ ಭಿತ್ತಿಪತ್ರ ಹಿಡಿದು ಕಾರ್ಯಕರ್ತರು ಘೋಷಣೆ ಕೂಗಿದರು. ಮಾಜಿ ಸಚಿವ ರಮಾನಾಥ ರೈ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್, ಎನ್ಎಸ್ ಯುಐ ಜಿಲ್ಲಾಧ್ಯಕ್ಷ ಸುಹಾನ್ ಆಳ್ವ ಮತ್ತಿತರರಿದ್ದರು. ಪ್ರತಿಭಟನೆಯ ಕೊನೆಯಲ್ಲಿ ಪೊಲೀಸರು ಹಾಕಿದ್ದ ಬ್ಯಾರಿಕೇಡನ್ನು ತಳ್ಳಿಕೊಂಡು ಕಾರ್ಯಕರ್ತರು ಹೊರಬಂದಿದ್ದು ಕೆಲಕಾಲ ಗೊಂದಲ ಮೂಡಿಸಿದ್ದಾರೆ.
The Dakshina Kannada National Students Union of India (NSUI) led by prominant Congress leaders of the district staged a protest at Clock Tower, Mangaluru, on Tuesday, July 2, criticising the Central BJP Government over the NEET question paper leak.
04-07-24 06:03 pm
HK News Desk
ಡೆಂಗಿ ಪರೀಕ್ಷೆಗೆ ಹೆಚ್ಚಿನ ಬೆಲೆ ವಿಧಿಸುತ್ತಿದ್ದ ಆಸ...
03-07-24 09:23 pm
Kolar crime, College Baby; ಕಾಲೇಜಿನ ಶೌಚಾಲಯದಲ್ಲ...
03-07-24 08:07 pm
VRL Vijay Sankeshwar daughter husband, crime:...
02-07-24 09:58 pm
Kolar baby delivery college, crime: ಕೋಲಾರ ; ಕ...
02-07-24 08:38 pm
04-07-24 09:14 pm
HK News Desk
ಜಾರ್ಖಂಡಿನಲ್ಲಿ ಮತ್ತೆ ಅಧಿಕಾರ ಗಿಟ್ಟಿಸಿದ ಹೇಮಂತ್ ಸ...
04-07-24 05:57 pm
ಬಿಹಾರದಲ್ಲಿ 17 ದಿನಗಳ ಅಂತರದಲ್ಲಿ 12 ಸೇತುವೆ ಕುಸಿತ...
04-07-24 03:40 pm
ಸೌದಿ ಅರೇಬಿಯಾದಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿದ್ದ ಕ...
04-07-24 12:05 pm
Allahabad High Court Flags Conversion: ಮತಾಂತರ...
03-07-24 01:14 pm
04-07-24 10:12 pm
Mangalore Correspondent
Mangalore MP Brijesh Chowta: ದಕ್ಷಿಣ ಕನ್ನಡ ಜಿ...
04-07-24 10:04 pm
Mangalore rain, water falls, trekking: ಭಾರೀ ಮ...
04-07-24 03:05 pm
Mangalore rain, schools holiday: ಕರಾವಳಿಯಲ್ಲಿ...
04-07-24 01:54 pm
Mangalore Doctor Dr Mohammed Ismail Hejamady:...
04-07-24 12:32 pm
04-07-24 10:18 pm
Udupi Correspondent
Mangalore Ulaibettu Dacoity case, 10 arrested...
04-07-24 07:41 pm
Bitcoin scam, Mangalore, fraud: ಬಿಟ್ ಕಾಯಿನ್ ಹ...
03-07-24 08:04 pm
Mysuru crime: ಮೈಸೂರು ; ಮಗನನ್ನ ಕೊಂದ ಅಳಿಯ, ಅಗಲಿ...
02-07-24 06:03 pm
Jail Mangalore crime, attack; ಮಂಗಳೂರು ಜೈಲಿನಲ್...
01-07-24 09:38 pm