ಬ್ರೇಕಿಂಗ್ ನ್ಯೂಸ್
06-07-25 01:23 pm HK News Desk ಕ್ರೈಂ
ಚಾಮರಾಜನಗರ, ಜು 05: ಗರ್ಭಿಣಿ ಹೆಂಡತಿಯನ್ನ ತಾಳಿ ಕಟ್ಟಿದ ಪತಿಯೇ ಕೊಲೆ ಮಾಡಿರುವ ಘಟನೆ ತಾಲೂಕಿನ ಡೊಳ್ಳಿಪುರದ ತೋಟದ ಮನೆಯಲ್ಲಿ ನಡೆದಿದೆ.
ಶುಭಾ ಎರಡೂವರೆ ತಿಂಗಳ ಗರ್ಭಿಣಿ, ಸಂತೋಷದಲ್ಲಿ ತೇಲಾಡುತ್ತಿದ್ದ ಹೆಂಡತಿಗೆ ಮನೆಯಲ್ಲೇ ಕೊಲೆಗಡುಕ ಅಡ್ಡಾಡಿಕೊಂಡಿರುವ ವಿಷಯ ಗೊತ್ತಿರಲಿಲ್ಲ. ಇತ್ತ ಗಂಡನಿಗೆ ಹಣಕಾಸಿನ ತೊಂದರೆ, ಹೀಗಾಗಿ ಪತ್ನಿ ಶುಭಾಳಿಗೆ ತವರು ಮನೆಯಿಂದ ಹಣ ತರುವಂತೆ ಪದೇ ಪದೇ ಪೀಡಿಸುತ್ತಿದ್ದ. ಶುಭಾ ಮಗು ಬೇಕು ಅಂತ ಹಠ ಮಾಡುತ್ತಿದ್ದಳು, ಗಂಡ ಮಹೇಶ್ ಮಾತ್ರ ಈಗ ಮಗು ಬೇಡ ಎಂದು ಗಲಾಟೆ ಮಾಡ್ತಿದ್ದ. ಕೊನೆಗೂ ಗರ್ಭಿಣಿಯಾದ ಶುಭ ಗಂಡನಿಗೆ ವಿಷಯ ತಿಳಿಸಿರಲಿಲ್ಲ, ಕುಟುಂಬಸ್ಥರಲ್ಲಿ ಸಂತೋಷವೇ ಸಂತೋಷ, ಇನ್ನೊಂದೆಡೆ ಗರ್ಭಿಣಿಯಾಗಿರುವುದನ್ನ ಇಷ್ಟು ತಡವಾಗಿ ಯಾಕೆ ಹೇಳುತ್ತಿದ್ದಿಯ ಎಂದು ಜಗಳ ಮಾಡುತ್ತಿದ್ದ ಗಂಡ, ಪತ್ನಿ ಗರ್ಭಿಣಿಯಾಗಿರುವ ಬಗ್ಗೆ ಅನುಮಾನ. ಇದನ್ನೇ ನೆಪವಾಗಿಟ್ಟುಕೊಂಡು ಹೆಂಡತಿಯನ್ನ ಫಿನಿಷ್ ಮಾಡಿಯೇಬಿಟ್ಟ.
ಈ ಕುರಿತು ಎಸ್ಪಿ ಕವಿತಾ ಮಾತನಾಡಿದ್ದು, ಮಹಿಳೆಯ ಕೊಲೆ ಕುರಿತು ಕಂಟ್ರೋಲ್ ರೂಮ್ಗೆ ಕರೆ ಬಂದಿತ್ತು. ನಂತರ ನಮ್ಮ ಸಿಬ್ಬಂದಿಗಳು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಅಲ್ಲಿ ಶುಭಾ ಮನೆ ಮುಂದೆ ರಕ್ತದ ಮಡುವಿನಲ್ಲಿ ಬಿದ್ದಿದ್ದು ಎಂದು ಮಾಹಿತಿ ನೀಡಿದ್ದಾರೆ.
ಮೃತ ಮಹಿಳೆ ತನ್ನ ಗಂಡ ಮಹೇಶ್ ಹಾಗೂ ಅತ್ತೆ ಭಾರತಿ ಜೊತೆ ತೋಟದ ಮನೆಯಲ್ಲಿ ವಾಸ ಮಾಡುತ್ತಿದ್ದರು. ಮಧ್ಯಾಹ್ನದ ನಂತರ ಬೆಂಗಳೂರಿನಿಂದ ಬಂದ ಶುಭಾ ಅವರ ಸಹೋದರಿ ಠಾಣೆಗೆ ಒಂದು ದೂರು ಕೊಟ್ಟಿದ್ದರು. ಅದರಲ್ಲಿ ನಮ್ಮ ಅಕ್ಕನ ಗಂಡನೇ ಕೊಲೆ ಮಾಡಿರಬಹುದು, ಅದಕ್ಕೆ ಅವರ ಅತ್ತೆಯೇ ಕುಮ್ಮಕ್ಕು ಕೊಟ್ಟಿರಬಹುದು ಎಂದು ಸಂಶಯ ವ್ಯಕ್ತಪಡಿಸಿ ದೂರನ್ನು ದಾಖಲಿಸಿದ್ದರು.
ಕೊಲೆಗೆ ಬಳಸಿದ ಆಯುಧವನ್ನು ಮನೆಯಿಂದ ಸ್ವಲ್ಪ ದೂರದಲ್ಲಿ ಹೋಗಿ ಬಚ್ಚಿಟ್ಟಿದ್ದ. ಅದನ್ನು ವಶಕ್ಕೆ ಪಡೆದು ನಂತರ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದೇವೆ ಎಂದು ತಿಳಿಸಿದ್ದಾರೆ.
"ಗರ್ಭಿಣಿಯಾದ ಮಗಳ ಶವ ರಕ್ತದ ಮಡುವಿನಲ್ಲಿ ರಸ್ತೆ ಬದಿಯಲ್ಲಿ ಬಿದ್ದಿರುವುದನ್ನು ಕಂಡ ಕ್ಷಣ… ಆ ಮನೆಯವರ ಹೃದಯವೇ ತುಂಡಾಗಿ ಬಿದ್ದಿತು! ಇಡೀ ಜೀವನದ ಕನಸು, ಆಸೆ, ಭವಿಷ್ಯದ ಕನಸುಗಳೆಲ್ಲಾ ಒಂದೇ ಕ್ಷಣದಲ್ಲಿ ಕೆಡವಾಯಿತು. ಮಗಳ ಕರುವಿನ ಮೊರೆ ಕೇಳಲು ಕಾದು ಕುಳಿತಿದ್ದ ಮನೆಯವರು, ಈಗ ಆ ಮಗು ಕೂಡಾ ಬೆಳಗದೇ ಹೋಗಿರುವ ಆಘಾತಕ್ಕೆ ಶಬ್ದವೇ ಇಲ್ಲ…!
In a shocking incident, a man has allegedly murdered his pregnant wife at a farmhouse in Dollepur village of the taluk. The accused, identified as Mahesh, is said to have killed his wife Shubha, who was over two and a half months pregnant.
10-07-25 09:53 pm
Bangalore Correspondent
ED Raid Congress MLA Subba Reddy: ಮಲೇಶ್ಯಾ, ಬ್...
10-07-25 12:45 pm
ಹರಿಪ್ರಸಾದ್ ಹೇಳಿಕೆಗೆ ಬಿಜೆಪಿ ಕೆಂಡಾಮಂಡಲ ; ಅರ್ಧ ನ...
09-07-25 10:45 pm
Chamarajanagar Heart Attack, Student; 'ಹೃದಯ"ಕ...
09-07-25 04:12 pm
ಬೆಂಗಳೂರಿನಲ್ಲಿ ಐದು ಕಡೆ ಎನ್ಐಎ ದಾಳಿ ; ಭಯೋತ್ಪಾದಕ...
09-07-25 01:53 pm
11-07-25 12:08 pm
HK News Desk
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
Bangle Seller, Changur Baba Arrest, Uttar Pra...
10-07-25 03:24 pm
Amit Shah; ರಾಜಕೀಯ ನಿವೃತ್ತಿ ಬಳಿಕ ವೇದ, ಉಪನಿಷತ್...
10-07-25 01:00 pm
ಗೋಮಾಂಸ ತಿನ್ನಿಸಿ ಮತಾಂತರಕ್ಕೆ ಯತ್ನ ; ಫೇಸ್ಬುಕ್ಕಲ್...
07-07-25 08:45 pm
10-07-25 07:23 pm
Mangalore Correspondent
Mangalore, Traffic Constable, Lokayukta, Tasl...
10-07-25 04:01 pm
ಮಂಗಳೂರಿನ ಟೈಲರಿಂಗ್ ಶಾಪಲ್ಲೇ ಕುಸಿದು ಬಿದ್ದಿದ್ದ ನವ...
09-07-25 10:25 pm
Mangalore Home Minister Parameshwara, Peace M...
09-07-25 10:17 pm
Peace Meeting, Mangalore, Brijesh Chowta, Ash...
09-07-25 09:01 pm
10-07-25 08:09 pm
HK News Desk
Kerala Couple, Chit Fund Scam; ಚಿಟ್ ಫಂಡ್ ಹೆಸರ...
10-07-25 01:05 pm
Double Murder Hassan, crime: ಆಸ್ತಿ ವಿಚಾರಕ್ಕೆ...
10-07-25 12:04 pm
Drugs News, Mangalore: ಮಂಗಳೂರಿಗೆ ಡ್ರಗ್ಸ್ ಪೂರೈ...
09-07-25 10:56 pm
Kerala Chit Fund, Fraud, Mangalore: 20 ವರ್ಷಗಳ...
08-07-25 10:01 pm