ಬ್ರೇಕಿಂಗ್ ನ್ಯೂಸ್
16-08-23 02:49 pm Source: News18 Kannada ಸಿನಿಮಾ
ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಕಾಯುತ್ತಿದ್ದಾರೆ. ಯಶ್-19 ಸಿನಿಮಾ ಅನ್ನೋದೇ ಇವರ ಒಂದೇ ಒಂದು ಪ್ರಶ್ನೆಯಾಗಿದೆ. ಆದರೆ ಇದಕ್ಕೆ ಉತ್ತರ ಸಿಗುವ ದಿನಗಳು ಸನಿಹಕ್ಕೆ ಬರ್ತಿವೆ. ಯಶ್ ಮುಂದಿನ ಸಿನಿಮಾ ಬೇರೆ ಯಾವುದೋ ಅಲ್ಲ. ಅದು ಕೆಜಿಎಫ್-೩ ಚಿತ್ರವೇ ಆಗಲಿದೆ.
ಈ ಒಂದು ಸುದ್ದಿ ಮೊನ್ನೆಯಿಂದಲೇ ಹರಿದಾಡುತ್ತಿದೆ. ಪ್ರಶಾಂತ್ ನೀಲ್ ಇನ್ನೇನು ತಮ್ಮ ಕೆಜಿಎಫ್-3 ಚಿತ್ರದ ಸ್ಕ್ರಿಪ್ಟ್ ವರ್ಕ್ ಕೂಡ ಶುರು ಮಾಡ್ತಾರೆ ಅನ್ನೋ ಸುದ್ದಿ ವೈರಲ್ ಆಗಿದೆ. ಆದರೆ ಇದರ ಬೆನ್ನಲ್ಲಿಯೇ ಇನ್ನೂ ಒಂದಷ್ಟು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.
ಸಲಾರ್-2 ಸಿನಿಮಾ ಏನ್ ಆಯಿತು? ಜ್ಯೂನಿಯರ್ ಎನ್.ಟಿ.ಆರ್.ಸಿನಿಮಾ ಮಾಡೋದಿಲ್ವೇ? ಪ್ರಶಾಂತ್ ನೀಲ್ ಯಾಕೆ ಫ್ರೀ ಆದ್ರೂ ಅನ್ನೋದೇ ಆಗಿದೆ. ನಿಜ, ಈ ಒಂದು ಪ್ರಶ್ನೆಗೂ ಉತ್ತರ ರೂಪದ ಸುದ್ದಿಗಳು ಇವೆ. ಪ್ರಶಾಂತ್ ನೀಲ್ ಅವರು ಸಲಾರ್ ಚಿತ್ರದ ಕೆಲಸದಲ್ಲಿಯೇ ಬ್ಯುಸಿ ಆಗಿದ್ದಾರೆ.

ಡೈರೆಕ್ಟರ್ ಪ್ರಶಾಂತ್ ನೀಲ್ ಈಗ ಫ್ರೀ ಆದ್ರೇ?
ಸಲಾರ್ ಸಿನಿಮಾದ ಎಲ್ಲ ಕೆಲಸ ಮುಗಿಸಿದ ಬಳಿಕ ಕೆಜೆಎಫ್ ಚಿತ್ರದ ಸ್ಕ್ರಿಪ್ಟ್ ವರ್ಕ್ ಶುರು ಮಾಡಲಿದ್ದಾರೆ. ಸಲಾರ್-2 ಸಿನಿಮಾದ ಪ್ರೋಜೆಕ್ಟ್ ಸದ್ಯಕ್ಕೆ ಮುಂದಕ್ಕೆ ಹೋಗಿದೆ. ಇದು ಕೆಜಿಎಫ್-3 ಆದ್ಮೇಲೆ ಶುರು ಆಗೋ ಚಾನ್ಸಸ್ ಇದೆ. ಇನ್ನು ಜೂನಿಯರ್ ಎನ್ಟಿಆರ್ ಸದ್ಯ ದೇವರು ಚಿತ್ರ ಮಾಡುತ್ತಿದ್ದಾರೆ. ಬಾಲಿವುಡ್ನ ವಾರ್-2 ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಅಲ್ಲಿಗೆ ಪ್ರಶಾಂತ್ ನೀಲ್ ಜೊತೆಗಿನ ಸಿನಿಮಾ ತಡವಾಗಲಿದೆ.
ಇನ್ನುಳಿದಂತೆ ಕೆಜಿಎಫ್-3 ಚಿತ್ರದ ನಿರೀಕ್ಷೆ ಜಾಸ್ತಿ ಇದೆ. ಚಿತ್ರದ ಎರಡೂ ಸರಣಿ ಇನ್ನೂ ಓಡ್ತಿವೆ. ಜಪಾನ್ನಲ್ಲಿ ಈ ಎರಡೂ ಚಿತ್ರದ ನೋಡಿದ ಜನ ಖುಷಿಯಾಗಿದ್ದಾರೆ. ತುಂಬಾನೆ ಎಂಜಾಯ್ ಮಾಡುತ್ತಿದ್ದಾರೆ. ಆ ಕ್ರೇಜ್ನ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇವೆ.

ರಾಕಿ ಭಾಯ್ ಫ್ಯಾನ್ಸ್ ಫುಲ್ ಖುಷ್ ಆಗಿದ್ಯಾಕೆ?
ಇದರ ಮಧ್ಯೆ ಕೆಜಿಎಫ್-3 ಚಿತ್ರದ ಸುದ್ದಿ ರಾಕಿ ಭಾಯ್ ಫ್ಯಾನ್ಸ್ ದಿಲ್ ಖುಷ್ ಮಾಡಿದೆ. ಈ ಮೂಲಕ ಮತ್ತೆ ರಾಕಿ ಆನ್ ಸ್ಕ್ರೀನ್ ಅನ್ನೋದನ್ನ ನೆನಪಿಸಿಕೊಂಡು ಫ್ಯಾನ್ಸ್ ಸಂತೋಷ ಪಡ್ತಿದ್ದಾರೆ. ಈ ಒಂದು ಸುದ್ದಿಯೊಂದಿಗೆ ಒಂದಷ್ಟು ಕುತೂಹಲಗಳು ಹುಟ್ಟಿಕೊಂಡಿವೆ.
ಕೆಜಿಎಫ್ ಚಿತ್ರದ ಮೂರನೇ ಸರಣಿಯಲ್ಲಿ ರಾಕಿ ಭಾಯ್ ಕಥೆ ಹೇಗೆ ಸಾಗುತ್ತದೆ ಅನ್ನೋದೇ ಆಗಿದೆ. ಈ ಸಲ ಏನ್ ವಿಶೇಷ ಅನ್ನೋದು ಕೂಡ ಇದರ ಬೆನ್ನಲ್ಲಿಯೇ ಹುಟ್ಟಿದ ಕುತೂಹಲ ಆಗಿದೆ.
ಕೆಜಿಎಫ್-3 ಚಿತ್ರದ ಬಗ್ಗೆ ಇರೋ ಕ್ರೇಜ್ ಅಷ್ಟಿಷ್ಟಲ್ಲ ಬಿಡಿ. ಅಭಿಮಾನಿಗಳು ಕಾತರದಿಂದಲೇ ಕಾಯುತಿದ್ದಾರೆ. ಇವರ ಕಾತರಕ್ಕೆ ಅಧಿಕೃತ ಮಾಹಿತಿ ಯಾವಾಗ ಹೊರಬೀಳುತ್ತದೆ ಅನ್ನೊದೇ ಸದ್ಯದ ಕ್ವಶ್ಚನ್ ಆಗಿದೆ.
rocking Star yash 19 KGF3 movie Latest Viral News.
18-01-26 03:34 pm
Bangalore Correspondent
ಬ್ಯಾನರ್ ಗಲಾಟೆ ; ಸಿಬಿಐ ತನಿಖೆಗೆ ಬಿಜೆಪಿ ಆಗ್ರಹ, ಬ...
17-01-26 08:02 pm
Bangalore Accident, Budigere: ದೇವನಹಳ್ಳಿ - ಬೂದ...
17-01-26 05:53 pm
ಪಶ್ಚಿಮ ಬಂಗಾಳ -ಬೆಂಗಳೂರು ರೈಲಿನಲ್ಲೇ ಬರ್ತಿದ್ದಾರೆ...
17-01-26 05:29 pm
H.D. Kumaraswamy, Priyank Kharge: ಜೆಡಿಎಸ್ ನಿರ...
16-01-26 09:38 pm
18-01-26 11:47 am
HK News Desk
ಕುಂಬ್ಡಾಜೆ ; ಕರಿಮಣಿ ಸರ ಎಗರಿಸಲು ಮಹಿಳೆಯ ಕತ್ತು ಹಿ...
17-01-26 03:08 pm
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ...
17-01-26 01:47 pm
ಜ.20ರಂದು ಬಿಜೆಪಿಗೆ ನೂತನ ಅಧ್ಯಕ್ಷರ ಘೋಷಣೆ ; ಅತಿ...
16-01-26 06:33 pm
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
17-01-26 05:12 pm
Mangalore Correspondent
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ; ಮಂಗಳೂರು- ಮರವ...
16-01-26 07:33 pm
18-01-26 12:58 pm
Mangalore Correspondent
Mandya Murder: ಆಸ್ತಿ ವಿಚಾರಕ್ಕೆ ಗಲಾಟೆ ; ನಾಲ್ಕು...
16-01-26 09:01 pm
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm