ಬ್ರೇಕಿಂಗ್ ನ್ಯೂಸ್
06-01-21 03:37 pm Headline Karnataka News Network ಸಿನಿಮಾ
ಬೆಂಗಳೂರು, ಜ.6: ಕಪಟ ಸ್ವಾಮಿ ಯುವರಾಜ್ ಜೊತೆಗಿನ ಸಂಪರ್ಕದ ಬಗ್ಗೆ ಸ್ಯಾಂಡಲ್ವುಡ್ ನಟಿ ರಾಧಿಕಾ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ನಮ್ಮ ತಂದೆಯವರ ಜೊತೆಗೆ ನಿಕಟ ಸಂಪರ್ಕ ಇದ್ದುದು ನಿಜ. 17 ವರ್ಷಗಳಿಂದ ತಂದೆಯವರ ಜೊತೆ ತುಂಬ ಆಪ್ತರಾಗಿದ್ದರು. ತಂದೆ ನಿಧನರಾದ ಬಳಿಕವೂ ಜ್ಯೋತಿಷ್ಯ ಹೇಳುವ ವಿಚಾರದಲ್ಲಿ ಸಂಪರ್ಕ ಇತ್ತು ಎಂದು ಹೇಳಿದ್ದಾರೆ.
ಬೆಂಗಳೂರಿನ ತಮ್ಮ ಡಾಲರ್ಸ್ ಕಾಲನಿಯಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡಿದ ರಾಧಿಕಾ, ಯುವರಾಜ್ ಒಂದು ಐತಿಹಾಸಿಕ ಸಿನಿಮಾ ಮಾಡಬೇಕೆಂದು ಹೇಳ್ತಾ ಇದ್ದರು. ತಂದೆ ನಿಧನರಾದ ಬಳಿಕ ಈ ಸಿನಿಮಾದ ಮಾತುಕತೆ ನಡೆದಿತ್ತು. ಅದಕ್ಕಾಗಿ 15 ಲಕ್ಷ ರೂ. ನನ್ನ ಖಾತೆಗೆ ಹಾಕಿದ್ದಾರೆ. ಆನಂತರ ಬೇರೊಬ್ಬ ನಿರ್ಮಾಪಕರ ಮೂಲಕ 60 ಲಕ್ಷ ಹಣ ಹಾಕಿದ್ದಾರೆ. ಅದು ಬಿಟ್ಟರೆ ಒಂದೂವರೆ ಕೋಟಿ ಹಣ ಬಂದಿದೆ ಅನ್ನುವುದೆಲ್ಲ ಸುಳ್ಳು ಎಂದು ಹೇಳಿದರು.

2019ರಲ್ಲಿ ತಂದೆ ನಿಧನರಾಗಿದ್ದರು. ತಂದೆಗೆ ಕಂಟಕ ಇರುವುದು, ಸಾಯುತ್ತಾರೆಂದು ಒಂದು ವರ್ಷದ ಮೊದಲೇ ಸ್ವಾಮಿ ಹೇಳಿದ್ದರು. ಏನೋ ಪೂಜೆ ಮಾಡುವಂತೆ ಸೂಚಿಸಿದ್ದರು. ಆದರೆ, ಅದನ್ನು ಮಾಡಲು ಸಾಧ್ಯವಾಗಲಿಲ್ಲ. ಅವರು ಹೇಳಿದಂತೇ ಆಗಿದ್ದರಿಂದ ನಮಗೆ ತುಂಬ ನಂಬಿಕೆ ಇತ್ತು. ನಮ್ಮ ತಾಯಿ ತುಂಬ ಗೌರವಿಸುತ್ತಿದ್ದರು. ನನಗೂ ಒಳ್ಳೇದಾಗುತ್ತದೆ, ಹೆಣ್ಣು ಮಗುವಾಗುತ್ತದೆ ಎಂದಿದ್ದರು. ಅವರು ಹೇಳಿದ್ದು ನಿಜವಾಗಿದೆ. ಜ್ಯೋತಿಷ್ಯ ವಿಚಾರದಲ್ಲಿ ಸಂಪರ್ಕ ಇತ್ತೇ ವಿನಾ ಬೇರಾವುದೇ ಸಂಬಂಧ ಇರಲಿಲ್ಲ ಎಂದು ರಾಧಿಕಾ ಸ್ಪಷ್ಟನೆ ನೀಡಿದ್ದಾರೆ.

ನಾಟ್ಯರಾಣಿ ಶಾಂತಲಾ ಹೆಸರಲ್ಲಿ ಸಿನಿಮಾ
ಅಲ್ಲದೆ, ಸ್ವಾಮಿಯವರು ತಮ್ಮ ಪತ್ನಿ ಹೆಸರಲ್ಲಿ ಚಿತ್ರ ನಿರ್ಮಾಣದ ಬ್ಯಾನರ್ ಮಾಡಿಕೊಂಡಿದ್ದರು. ನನ್ನ ಮಗಳ ಹೆಸರಲ್ಲೂ ಪ್ರೊಡಕ್ಷನ್ ಹೌಸ್ ಬ್ಯಾನರ್ ಇದ್ದುದರಿಂದ ಜೊತೆಯಾಗಿ ಮಾಡೋಣ ಎಂದಿದ್ದರು. ನಾಟ್ಯ ರಾಣಿ ಶಾಂತಲಾ ಹೆಸರಲ್ಲಿ ಚಿತ್ರ ಮಾಡಬೇಕೆಂದು ಇದ್ದರು. ಈ ಬಗ್ಗೆ ನನಗೂ ಆಸಕ್ತಿ ಇದ್ದುದರಿಂದ ಒಪ್ಪಿಕೊಂಡಿದ್ದೆ. ಕಳೆದ 2020ರ ಫೆಬ್ರವರಿ ಮಾರ್ಚ್ ವೇಳೆಗೆ ಮಾತುಕತೆ ನಡೆದಿದ್ದು, ನನ್ನ ಖಾತೆಗೆ 75 ಲಕ್ಷ ಹಣ ಹಾಕಿದ್ದು ಸತ್ಯ. ನಂಬಿಕೆ ಇದ್ದುದರಿಂದ ಈ ಬಗ್ಗೆ ಯಾವುದೇ ಅಗ್ರಿಮೆಂಟ್ ಮಾಡಿರಲಿಲ್ಲ. ಈ ಬಗ್ಗೆ ಎಲ್ಲ ದಾಖಲೆ ನೀಡಲು ಸಿದ್ಧಳಿದ್ದೇನೆ. ಸಿಸಿಬಿಯವರು ನನ್ನನ್ನು ವಿಚಾರಣೆಗೆ ಕರೆದಿಲ್ಲ. ಕರೆದರೆ ಈ ಬಗ್ಗೆ ದಾಖಲೆ ನೀಡುವುದಕ್ಕೆ ಸಿದ್ಧ ಎಂದು ಹೇಳಿದರು.

ಹಾಗೆಂದು ಸ್ವಾಮಿಯವರ ಖಾಸಗಿ ವಿಚಾರಗಳ ಬಗ್ಗೆ ನನಗೇನು ತಿಳಿದಿಲ್ಲ. ತಿಂಗಳ ಹಿಂದೆ ಅರೆಸ್ಟ್ ಆದಾಗ ನಿಜಕ್ಕೂ ಶಾಕ್ ಆಗಿತ್ತು. ಹೀಗೆಲ್ಲಾ ಮಾಡಿದ್ದಾರೆ ಎನ್ನುವುದು ಗೊತ್ತಿರಲಿಲ್ಲ ಎಂದು ಹೇಳಿದ ರಾಧಿಕಾ, ಕಳೆದ ಡಿಸೆಂಬರ್ ತಿಂಗಳಲ್ಲಿ ನನಗೆ ಟೈಮ್ ಸರಿ ಇಲ್ಲ ಎಂದಿದ್ದರು. ಆನಂತರ ಫೆಬ್ರವರಿ ಬಳಿಕ ಶುಕ್ರದೆಸೆ ಬರುತ್ತದೆ ಎಂದಿದ್ದರು. ಕುಟುಂಬ ಜ್ಯೋತಿಷ್ಯರಾಗಿದ್ದರಿಂದ ಎಲ್ಲವನ್ನೂ ನಂಬುತ್ತಿದ್ದೆವು ಎಂದಿದ್ದಾರೆ. ಇನ್ನು ನನ್ನ ಸೋದರನಿಗೆ ಯಾವುದೇ ಹಣದ ವ್ಯವಹಾರ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಆರೆಸ್ಸೆಸ್ ಮುಖಂಡನ ಸೋಗಿನಲ್ಲಿ ಕೋಟಿಗಟ್ಟಲೆ ವಂಚಿಸಿದ ಯುವರಾಜನಿಗೆ ಖ್ಯಾತ ನಟಿ ಜೊತೆ ಲಿಂಕ್ ?!
24-08-26 03:16 pm
HK News Staffer
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
24-08-26 06:25 pm
HK News Staffer
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
ಅಡಿಕೆ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ಸಿಪಿಸಿಆರ್ ಐ...
24-08-26 04:11 pm
ಎಂಆರ್ ಪಿಎಲ್ ನಲ್ಲಿ 26 ಇಂಜಿನಿಯರಿಂಗ್ ಹುದ್ದೆಗಳ ಭರ...
24-08-26 01:13 pm
ಹಲ್ಲೆಗೀಡಾದವರ ಮೇಲೆ ಕೊಲೆಯತ್ನ ಕೇಸು ಹಾಕಿದ್ದಾರೆ, ಹ...
23-08-26 06:17 pm
24-08-26 09:06 pm
HK News Staffer
ಸಾವಿರಾರು ಕೋಟಿ ವಂಚಕ, ಶಿವಂ ಅಸೋಸಿಯೇಟ್ಸ್ ಮಾಲೀಕ ಶಿ...
24-08-26 07:04 pm
ಚಿಕ್ಕಮಗಳೂರಿನಲ್ಲಿ ಈದ್ ಮೆರವಣಿಗೆ ಸಿದ್ಧತೆ ; ಬೃಹತ್...
24-08-26 02:35 pm
ಕುಂಬಳೆಯ ಮುಸ್ಲಿಂ ವ್ಯಾಪಾರಿಗೆ ಹನಿಟ್ರ್ಯಾಪ್ ; ವಿಡಿ...
24-08-26 02:25 pm
ನದಿಗೆ ಬಿದ್ದ ಫುಟ್ಬಾಲ್ ಹೆಕ್ಕಲು ಹೋಗಿ ಜೀವ ಕಳಕೊಂಡ...
24-08-26 01:03 pm