ಬ್ರೇಕಿಂಗ್ ನ್ಯೂಸ್
06-01-21 03:37 pm Headline Karnataka News Network ಸಿನಿಮಾ
ಬೆಂಗಳೂರು, ಜ.6: ಕಪಟ ಸ್ವಾಮಿ ಯುವರಾಜ್ ಜೊತೆಗಿನ ಸಂಪರ್ಕದ ಬಗ್ಗೆ ಸ್ಯಾಂಡಲ್ವುಡ್ ನಟಿ ರಾಧಿಕಾ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ನಮ್ಮ ತಂದೆಯವರ ಜೊತೆಗೆ ನಿಕಟ ಸಂಪರ್ಕ ಇದ್ದುದು ನಿಜ. 17 ವರ್ಷಗಳಿಂದ ತಂದೆಯವರ ಜೊತೆ ತುಂಬ ಆಪ್ತರಾಗಿದ್ದರು. ತಂದೆ ನಿಧನರಾದ ಬಳಿಕವೂ ಜ್ಯೋತಿಷ್ಯ ಹೇಳುವ ವಿಚಾರದಲ್ಲಿ ಸಂಪರ್ಕ ಇತ್ತು ಎಂದು ಹೇಳಿದ್ದಾರೆ.
ಬೆಂಗಳೂರಿನ ತಮ್ಮ ಡಾಲರ್ಸ್ ಕಾಲನಿಯಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡಿದ ರಾಧಿಕಾ, ಯುವರಾಜ್ ಒಂದು ಐತಿಹಾಸಿಕ ಸಿನಿಮಾ ಮಾಡಬೇಕೆಂದು ಹೇಳ್ತಾ ಇದ್ದರು. ತಂದೆ ನಿಧನರಾದ ಬಳಿಕ ಈ ಸಿನಿಮಾದ ಮಾತುಕತೆ ನಡೆದಿತ್ತು. ಅದಕ್ಕಾಗಿ 15 ಲಕ್ಷ ರೂ. ನನ್ನ ಖಾತೆಗೆ ಹಾಕಿದ್ದಾರೆ. ಆನಂತರ ಬೇರೊಬ್ಬ ನಿರ್ಮಾಪಕರ ಮೂಲಕ 60 ಲಕ್ಷ ಹಣ ಹಾಕಿದ್ದಾರೆ. ಅದು ಬಿಟ್ಟರೆ ಒಂದೂವರೆ ಕೋಟಿ ಹಣ ಬಂದಿದೆ ಅನ್ನುವುದೆಲ್ಲ ಸುಳ್ಳು ಎಂದು ಹೇಳಿದರು.

2019ರಲ್ಲಿ ತಂದೆ ನಿಧನರಾಗಿದ್ದರು. ತಂದೆಗೆ ಕಂಟಕ ಇರುವುದು, ಸಾಯುತ್ತಾರೆಂದು ಒಂದು ವರ್ಷದ ಮೊದಲೇ ಸ್ವಾಮಿ ಹೇಳಿದ್ದರು. ಏನೋ ಪೂಜೆ ಮಾಡುವಂತೆ ಸೂಚಿಸಿದ್ದರು. ಆದರೆ, ಅದನ್ನು ಮಾಡಲು ಸಾಧ್ಯವಾಗಲಿಲ್ಲ. ಅವರು ಹೇಳಿದಂತೇ ಆಗಿದ್ದರಿಂದ ನಮಗೆ ತುಂಬ ನಂಬಿಕೆ ಇತ್ತು. ನಮ್ಮ ತಾಯಿ ತುಂಬ ಗೌರವಿಸುತ್ತಿದ್ದರು. ನನಗೂ ಒಳ್ಳೇದಾಗುತ್ತದೆ, ಹೆಣ್ಣು ಮಗುವಾಗುತ್ತದೆ ಎಂದಿದ್ದರು. ಅವರು ಹೇಳಿದ್ದು ನಿಜವಾಗಿದೆ. ಜ್ಯೋತಿಷ್ಯ ವಿಚಾರದಲ್ಲಿ ಸಂಪರ್ಕ ಇತ್ತೇ ವಿನಾ ಬೇರಾವುದೇ ಸಂಬಂಧ ಇರಲಿಲ್ಲ ಎಂದು ರಾಧಿಕಾ ಸ್ಪಷ್ಟನೆ ನೀಡಿದ್ದಾರೆ.

ನಾಟ್ಯರಾಣಿ ಶಾಂತಲಾ ಹೆಸರಲ್ಲಿ ಸಿನಿಮಾ
ಅಲ್ಲದೆ, ಸ್ವಾಮಿಯವರು ತಮ್ಮ ಪತ್ನಿ ಹೆಸರಲ್ಲಿ ಚಿತ್ರ ನಿರ್ಮಾಣದ ಬ್ಯಾನರ್ ಮಾಡಿಕೊಂಡಿದ್ದರು. ನನ್ನ ಮಗಳ ಹೆಸರಲ್ಲೂ ಪ್ರೊಡಕ್ಷನ್ ಹೌಸ್ ಬ್ಯಾನರ್ ಇದ್ದುದರಿಂದ ಜೊತೆಯಾಗಿ ಮಾಡೋಣ ಎಂದಿದ್ದರು. ನಾಟ್ಯ ರಾಣಿ ಶಾಂತಲಾ ಹೆಸರಲ್ಲಿ ಚಿತ್ರ ಮಾಡಬೇಕೆಂದು ಇದ್ದರು. ಈ ಬಗ್ಗೆ ನನಗೂ ಆಸಕ್ತಿ ಇದ್ದುದರಿಂದ ಒಪ್ಪಿಕೊಂಡಿದ್ದೆ. ಕಳೆದ 2020ರ ಫೆಬ್ರವರಿ ಮಾರ್ಚ್ ವೇಳೆಗೆ ಮಾತುಕತೆ ನಡೆದಿದ್ದು, ನನ್ನ ಖಾತೆಗೆ 75 ಲಕ್ಷ ಹಣ ಹಾಕಿದ್ದು ಸತ್ಯ. ನಂಬಿಕೆ ಇದ್ದುದರಿಂದ ಈ ಬಗ್ಗೆ ಯಾವುದೇ ಅಗ್ರಿಮೆಂಟ್ ಮಾಡಿರಲಿಲ್ಲ. ಈ ಬಗ್ಗೆ ಎಲ್ಲ ದಾಖಲೆ ನೀಡಲು ಸಿದ್ಧಳಿದ್ದೇನೆ. ಸಿಸಿಬಿಯವರು ನನ್ನನ್ನು ವಿಚಾರಣೆಗೆ ಕರೆದಿಲ್ಲ. ಕರೆದರೆ ಈ ಬಗ್ಗೆ ದಾಖಲೆ ನೀಡುವುದಕ್ಕೆ ಸಿದ್ಧ ಎಂದು ಹೇಳಿದರು.

ಹಾಗೆಂದು ಸ್ವಾಮಿಯವರ ಖಾಸಗಿ ವಿಚಾರಗಳ ಬಗ್ಗೆ ನನಗೇನು ತಿಳಿದಿಲ್ಲ. ತಿಂಗಳ ಹಿಂದೆ ಅರೆಸ್ಟ್ ಆದಾಗ ನಿಜಕ್ಕೂ ಶಾಕ್ ಆಗಿತ್ತು. ಹೀಗೆಲ್ಲಾ ಮಾಡಿದ್ದಾರೆ ಎನ್ನುವುದು ಗೊತ್ತಿರಲಿಲ್ಲ ಎಂದು ಹೇಳಿದ ರಾಧಿಕಾ, ಕಳೆದ ಡಿಸೆಂಬರ್ ತಿಂಗಳಲ್ಲಿ ನನಗೆ ಟೈಮ್ ಸರಿ ಇಲ್ಲ ಎಂದಿದ್ದರು. ಆನಂತರ ಫೆಬ್ರವರಿ ಬಳಿಕ ಶುಕ್ರದೆಸೆ ಬರುತ್ತದೆ ಎಂದಿದ್ದರು. ಕುಟುಂಬ ಜ್ಯೋತಿಷ್ಯರಾಗಿದ್ದರಿಂದ ಎಲ್ಲವನ್ನೂ ನಂಬುತ್ತಿದ್ದೆವು ಎಂದಿದ್ದಾರೆ. ಇನ್ನು ನನ್ನ ಸೋದರನಿಗೆ ಯಾವುದೇ ಹಣದ ವ್ಯವಹಾರ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಆರೆಸ್ಸೆಸ್ ಮುಖಂಡನ ಸೋಗಿನಲ್ಲಿ ಕೋಟಿಗಟ್ಟಲೆ ವಂಚಿಸಿದ ಯುವರಾಜನಿಗೆ ಖ್ಯಾತ ನಟಿ ಜೊತೆ ಲಿಂಕ್ ?!
17-12-25 12:45 pm
Bangalore Correspondent
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
ದೆಹಲಿಯಲ್ಲು ಹೈಕಮಾಂಡ್ ಡಿನ್ನರ್ ಮೀಟಿಂಗ್ ; ಡಿಸಿಎಂ...
15-12-25 02:23 pm
17-12-25 01:38 pm
HK News Desk
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
ಪ್ರೇಕ್ಷಕ ಯುವಕನ ತಲೆಗೆ ಮರದ ಗುರಾಣಿಯಿಂದ ಹೊಡೆದ ತೈಯ...
15-12-25 08:09 pm
17-12-25 05:23 pm
Udupi Correspondent
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
Bride Missing, Mangalore: ಬೇರೆ ಲವ್ ಇದೆಯೆಂದರೂ...
16-12-25 08:53 pm
ಕೇರಳಕ್ಕೆ ನಾಲ್ಕು ಲಕ್ಷ ಮೌಲ್ಯದ ಎಂಡಿಎಂ ಡ್ರಗ್ಸ್ ಸಾ...
16-12-25 05:24 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm