ಬ್ರೇಕಿಂಗ್ ನ್ಯೂಸ್
01-04-23 01:28 pm Source: news18 ಸಿನಿಮಾ
ಶಿವಾಜಿ ಸುರತ್ಕಲ್-2 ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಈ ಟ್ರೈಲರ್ನಲ್ಲಿ ಒಂದು ಸೀಕ್ರೆಟ್ ರಿವೀಲ್ ಆಗಿದೆ. ಆ ಸೀಕ್ರೆಟ್ ಚಿತ್ರದ ಟೈಟಲ್ನಲ್ಲಿಯೇ ಇದೆ. ಆದರೆ ಅದು ಏನೂ ಅನ್ನೋದು ಟ್ರೈಲರ್ ನಲ್ಲಿ ರಿಲೀಸ್ ಆಗಿದ್ದು ಪ್ರೇಕ್ಷಕರಿಗೆ ಶಾಕ್ ಕೊಟ್ಟಿದೆ. ಶಿವಾಜಿ ಸುರತ್ಕಲ್-2 ಚಿತ್ರದಲ್ಲಿ ಸಂಗೀತಾ ಶೃಂಗೇರಿ ಪಾತ್ರವೂ ಇದೆ. ಸ್ಪೆಷಲ್ ಹಾಡಲ್ಲಿ ಸಂಗೀತಾ ಇಲ್ಲಿ ಕಾಣಿಸುತ್ತಾರೆ. ಆದರೆ ಇವರ ಪಾತ್ರ ಕೂಡ ಇಲ್ಲಿ ಕೊಲೆ ಆಗುತ್ತದೆ ಅನ್ನುವ ವಿಷಯ ಇದೇ ಟ್ರೈಲರ್ನಲ್ಲಿ ರಿವೀಲ್ ಆಗಿದೆ ನೋಡಿ.


ಶಿವರಾಜಿ ಸುರತ್ಕಲ್ ಸಿನಿಮಾದಲ್ಲೂ ಅಂತಹ ನೆಗೆಟಿವ್ ರೋಲ್ ಇದೆ. ಅದನ್ನ ರಮೇಶ್ ಅರವಿಂದ್ ಇಲ್ಲಿ ಅದ್ಭುತವಾಗಿಯೇ ನಿರ್ವಹಿಸಿದ್ದಾರೆ. ಹೌದು, ಚಿತ್ರಕ್ಕೆ ಭಾಗ ಎರಡು ಅನ್ನೋದಕ್ಕೂ ಈ ಚಿತ್ರದಲ್ಲಿ ರಮೇಶ್ ಅರವಿಂದ್ ಅವರ ಎರಡು ರೀತಿಯ ಪಾತ್ರ ಇರೋದಕ್ಕೂ ಸಿಂಕ್ ಆಗುತ್ತದೆ ನೋಡಿ. ಶಿವಾಜಿ ಸುರತ್ಕಲ್ ಚಿತ್ರದಲ್ಲಿ ರಮೇಶ್ ಅರವಿಂದ್ ಅವರು ಬೇರೆ ಕೇಸ್ ಬೆನ್ನಟ್ಟಿ ಹೋಗುತ್ತಿದ್ದಾರೆ. 131 ಅನ್ನೋದು ಈ ಕೇಸ್ ನಂಬರ್ ಆಗಿದೆ. ಇದರ ಸುತ್ತವೇ ಇಡೀ ಕಥೆ ಇದೆ. ಆದರೆ ಈ ಚಿತ್ರದ ಶಿವಾಜಿ ಸುರತ್ಕಲ್ ಪಾತ್ರ ಸುತ್ತವೇ ಈ ಒಂದು ಕೇಸ್ ಅದ್ಹೇಗೋ ಕನೆಕ್ಟ್ ಆಗಿದೆ.


ರಮೇಶ್ ಅರವಿಂದ್ ಅವರು ಈ ಚಿತ್ರದಲ್ಲಿ ಎರಡು ಪಾತ್ರ ಮಾಡಿದ್ದಾರೆ ಅನ್ನೊದು ಟ್ರೈಲರ್ ನೋಡಿದಾಕ್ಷಣ ಗೊತ್ತಾಗುತ್ತದೆ. ಆದರೆ ಅದರ ಬೆನ್ನಲ್ಲಿಯೇ ಇನ್ನೂ ಒಂದು ಪ್ರಶ್ನೆ ಹುಟ್ಟುಕೊಳ್ಳುತ್ತದೆ. ಚಿತ್ರದಲ್ಲಿ ರಮೇಶ್ ಅರವಿಂದ್ ಸ್ಪ್ಲಿಟ್ ಪರ್ಸನಾಲಿಟಿ ಇರೋ ಪಾತ್ರವನ್ನ ನಿರ್ವಹಿಸಿದ್ದಾರೆಯೇ ಅನ್ನುವ ಅನುಮಾನ ಕೂಡ ಮೂಡುತ್ತಿದೆ.



ಶಿವಾಜಿ ಸುರತ್ಕಲ್-2 ಸಿನಿಮಾದಲ್ಲಿ ಈ ಸಲ ಜಾಸ್ತಿನೇ ಥ್ರಿಲ್ಲಿಂಗ್ ಇದೆ ಅನಿಸುತ್ತದೆ. ಕೊಲೆಗಾರನ ಜಾಡು ಹಿಡಿದು ಹೊರಡುವ ಶಿವಾಜಿ ಸುರತ್ಕಲ್, ಕೊಲೆಗಡುಕನ ಕ್ಲಿಂಗ್ ಪ್ಯಾಟರ್ನ್ ಪತ್ತೆ ಹೆಚ್ಚಲು ಪರದಾಡುತ್ತಿದ್ದಾರೆ. ಆ ಒಂದು ಝಲಕ್ ಅನ್ನ ಕೂಡ ಇದೇ ಟ್ರೈಲರ್ ನಲ್ಲಿ ವೀಕ್ಷಿಸಬಹುದು. ಶಿವಾಜಿ ಸುರತ್ಕಲ್-2 ಚಿತ್ರದ ಡೈರೆಕ್ಟರ್ ಆಕಾಶ್ ಶ್ರೀವತ್ಸ ಈ ಸಲ ಬೇರೆ ರೀತಿಯಲ್ಲಿಯೇ ಕಥೆ ಹೇಳುತ್ತಿದ್ದಾರೆ. ಹೊಸ ರೀತಿಯ ಪ್ಯಾಟರ್ನ್ನಲ್ಲಿಯೇ ಇಡೀ ಸಿನಿಮಾ ತೋರಿಸೋಕೆ ಹೊರಟ್ಟಿದ್ದಾರೆ ಅನಿಸುತ್ತದೆ. ವಿಷ್ಯೂಲ್ ಎಫೆಕ್ಟ್ ಜೊತೆಗೆ ಜೂಡಾ ಸ್ಯಾಂಡಿ ಸಂಗೀತದ ಸ್ಪರ್ಶವೂ ಇಲ್ಲಿ ಚಿತ್ರಕ್ಕೆ ಇನ್ನೂ ಒಂದು ಥ್ರಿಲ್ ತಂದುಕೊಟ್ಟಿದೆ. ಶಿವಾಜಿ ಸುರತ್ಕಲ್-2 ಸಿನಿಮಾ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಏಪ್ರಿಲ್-14 ರಂದು ಸಿನಿಮಾ ರಿಲೀಸ್ ಎಲ್ಲೆಡೆ ರಿಲೀಸ್ ಆಗುತ್ತಿದೆ. ಸದ್ಯಕ್ಕೆ ಟ್ರೈಲರ್ ರಿಲೀಸ್ ಆಗಿ ಇಡೀ ಚಿತ್ರದ ಒಂದು ಝಲಕ್ ಕೊಡ್ತಾಯಿದೆ.
kannada actor ramesh aravind acted shivaji surathkal 2 secrets reveal in trailer.
04-03-26 06:47 pm
HK News Staffer
ಅಡುಗೆ ವಿಚಾರದಲ್ಲಿ ಅತ್ತೆಯೊಂದಿಗೆ ಜಗಳ ಕಾದು ಯುವತಿ...
04-03-26 05:06 pm
ಚಿತ್ತೂರು ಬಳಿ ಭೀಕರ ರಸ್ತೆ ಅಪಘಾತ; ಕಂಟೇನರ್ ವಾಹನಕ್...
04-03-26 01:33 pm
ಮಾರ್ಚ್ 10ಕ್ಕೆ ಎಲ್ಲ ಶಾಸಕರು, ಸಚಿವರಿಗೆ ಡಿಕೆಶಿ ಡಿ...
04-03-26 01:27 pm
ಇರಾನ್ಗೆ ತೆರಳಿದ್ದ ಕಾಫಿನಾಡಿನ ಯುವಕ ನಾಪತ್ತೆ ; ಮಗ...
04-03-26 11:51 am
04-03-26 11:13 pm
HK News Desk
ಹರ್ಮುಜ್ ಜಲಸಂಧಿ ನಿರ್ಬಂಧ ಉಲ್ಲಂಘಿಸಿದ 10 ತೈಲ ಹಡಗಿ...
04-03-26 10:09 pm
ಇರಾನ್ ಹಡಗು ಸ್ಫೋಟ ಬೆನ್ನಲ್ಲೇ ಅಮೆರಿಕದ ಯುದ್ಧ ನೌಕೆ...
04-03-26 10:03 pm
ಇರಾನ್ ಸರ್ವೋಚ್ಚ ನಾಯಕರಾಗಿ ಖಮೇನಿ ಪುತ್ರ ಮೊಜ್ತಾಬಾ...
04-03-26 12:58 pm
ಯುದ್ಧಪೀಡಿತ ಮಧ್ಯಪ್ರಾಚ್ಯದಿಂದ ಪಾರಾಗಲು ಪ್ರತಿ ಸೀಟ್...
03-03-26 04:30 pm
05-03-26 02:34 pm
HK News Staffer
Aadhaar Card Found, Mangalore: ಫರಂಗಿಪೇಟೆ ನದಿ...
05-03-26 12:42 pm
ತುಳು ಎರಡನೇ ಅಧಿಕೃತ ಭಾಷೆ; ಆಂಧ್ರಪ್ರದೇಶದಲ್ಲಿ ಕೈಗೊ...
04-03-26 09:31 pm
ಉಡುಪಿ; ಲವ್ ಮ್ಯಾಟರ್ ರಾಜಿ ವೇಳೆ ಮೀನುಗಾರ ಮುಖಂಡನಿಗ...
04-03-26 10:54 am
ಬೇಸಗೆಯಲ್ಲಿ ಹಾವು ಕಡಿತ ಪ್ರಕರಣ ಹೆಚ್ಚಳ; ಕರಾವಳಿ, ಮ...
03-03-26 09:33 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm