ಬ್ರೇಕಿಂಗ್ ನ್ಯೂಸ್
23-05-23 12:59 pm Source: news18 ಸಿನಿಮಾ
ಜೂನಿಯರ್ ಎನ್ಟಿಆರ್ ಅವರ ಒಂಭತ್ತು ಜನ ಅಭಿಮಾನಿಗಳನ್ನು ಪೊಲೀಸರು ಅರೆಸ್ಟ್ ಮಾಡಿರುವ ಘಟನೆ ನಡೆದಿದೆ. ಜೂನಿಯರ್ ಎನ್ಟಿಆರ್ ಅವರ ಬರ್ತ್ಡೇ ಸಂದರ್ಭವೇ ಅವರ ಅಭಿಮಾನಿಗಳನ್ನು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ. ಆಡುಗಳನ್ನು ಬಲಿಕೊಟ್ಟು ನಟನ ಬ್ಯಾನರ್ಗೆ ರಕ್ತಾಭಿಷೇಕ ಮಾಡಿದ ಹಿನ್ನೆಲೆಯಲ್ಲಿ ನಟನ ಅಭಿಮಾನಿಗಳನ್ನು ಬಂಧಿಸಲಾಗಿದೆ. ಪ್ರಾಣಿಗಳ ಬಲಿ ನಿಷೇಧಿಸಲಾಗಿದ್ದು ಆ ಕೃತ್ಯದಲ್ಲಿ ಪಾಲ್ಗೊಂಡಿದ್ದಕ್ಕೆ ಅಭಿಮಾನಿಗಳು ಅರೆಸ್ಟ್ ಆಗಿದ್ದಾರೆ.
ವಿಜಯವಾಡದಲ್ಲಿ ಘಟನೆ ನಡೆದಿದೆ. ನಟನ ಅಭಿಮಾನಿಗಳು ನಟನ ಬರ್ತ್ಡೇ ಆಚರಣೆ ಭಾಗವಾಗಿ ಥಿಯೇಟರ್ ಮುಂದೆ ಅವರ ಫ್ಲೆಕ್ಸಿ ಬ್ಯಾನರ್ಗೆ ಆಡುಗಳನ್ನು ಬಲಿ ಕೊಟ್ಟು ರಕ್ತ ಚಿಮ್ಮುವಂತೆ ಮಾಡಿದ್ದಾರೆ. ಅಭಿಮಾನಿಗಳು ಎರಡು ಆಡುಗಳನ್ನು ಸಾಯಿಸಿ ರಕ್ತಾಭಿಷೇಕ ಮಾಡಿದ್ದಾಗಿ ಆರೋಪಿಸಲಾಗಿದೆ. ನಟನ ಬರ್ತ್ಡೇ ಪ್ರಯುಕ್ತ ಅವರ ಹಳೆಯ ಸಿನಿಮಾ ಸಿಂಹಾದ್ರಿ ರಿ ರಿಲೀಸ್ ಆಗಿದೆ. ಈ ಸಂದರ್ಭ ಥಿಯೇಟರ್ ಮುಂದೆ ಈ ಘಟನೆ ನಡೆದಿದೆ.
ಪಿ. ಶಿವ ನಾಗ ರಾಜು, ಕೆ ಸಾಯಿ, ಜಿ ಸಾಯಿ, ಡಿ ನಾಗ ಭೂಷಣಂ, ವಿ ಸಾಯಿ, ಪಿ ನಾಗೇಶ್ವರ ರಾವ್, ವೈ. ಧರಣಿ, ಪಿ. ಶಿವ ಹಾಗೂ ಬಿ. ಅನಿಲ್ ಕುಮಾರ್ ಎಂಬವರನ್ನು ಈ ಘಟನೆಗೆ ಸಂಬಂಧಿಸಿ ಅರೆಸ್ಟ್ ಮಾಡಲಾಗಿದೆ. ಶಿವ ನಾಗ ರಾಜು ಹಾಗೂ ಅವರ ಸ್ನೇಹಿತರು ಸಿರಿ ಕೃಷ್ಣ ಹಾಗೂ ಸಿರಿ ವೆಂಕಟ ಥಿಯೇಟರ್ನಲ್ಲಿ ಮೇ 20ರಂದು ನಟನ ಬರ್ತ್ಡೇ ಆಚರಿಸಿದ್ದಾರೆ. ಈ ಸಂದರ್ಭದಲ್ಲಿಯೇ ಆಡನ್ನು ಬಲಿಕೊಟ್ಟ ಘಟನೆಯೂ ನಡೆದಿದೆ.
ನಟನ ಬರ್ತ್ಡೇ ಸಂದರ್ಭ ಇನ್ನೊಂದು ಘಟನೆಯಲ್ಲಿ ನಟ ಅಭಿಮಾನಿಗಳು ಥಿಯೇಟರ್ ಒಳಗಡೆ ಪಟಾಕಿ ಸಿಡಿಸಿ ಚಿತ್ರಮಂದಿರದೊಳಗೆ ಬೆಂಕಿ ಅವಘಡ ಸಂಭವಿಸುವಂತೆ ಮಾಡಿದ್ದಾರೆ. ಥಿಯೇಟರ್ನಲ್ಲಿ ಸೀಟುಗಳಿಗೂ ಹಾನಿಯಾಗಿದೆ. ಎಲ್ಲಾ ಕಡೆಗಳಲ್ಲಿ ಸಿನಿಮಾ ರಿ-ರಿಲೀಸ್ ಸಂಭ್ರಮ ತುಂಬಿದ್ದ ಹಿನ್ನೆಲೆಯಲ್ಲಿ ವಿಜಯವಾಡದಲ್ಲಿ ಸಂಭ್ರಮಾಚರಣೆ ವೇಳೆ ಅವಘಡ ಸಂಭವಿಸಿದೆ. ಘಟನೆಯ ಫೊಟೋ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದವು. ನಂತರ ಶೋ ಕ್ಯಾನ್ಸಲ್ ಮಾಡಲಾಯಿತು.
nine fans of jr ntr arrested for sacrificing goats.
26-07-24 10:39 pm
HK News Desk
Greater Bengalore, DK Shivakumar: ರಾಮನಗರ ಇನ್ನ...
26-07-24 09:58 pm
MUDA Scam, Byrathi Suresh: ಕೇಂದ್ರ ಸಚಿವ ಕುಮಾರಸ...
26-07-24 09:27 pm
Shalini Rajneesh, Rajneesh Goyal: ಮುಖ್ಯ ಕಾರ್ಯ...
26-07-24 09:00 pm
Bangalore bike wheelie: ಬೆಂಗಳೂರಿನಲ್ಲಿ ಹೆಚ್ಚಾಯ...
26-07-24 08:50 pm
26-07-24 05:51 pm
HK News Desk
ಬಯಲು ಶೌಚಕ್ಕೆ ಹೋದವನ ಕತ್ತಿಗೆ ಸುತ್ತಿಕೊಂಡ 13 ಅಡಿ...
25-07-24 01:03 pm
ನೇಪಾಳ ; ಟೇಕಾಫ್ ವೇಳೆ ರನ್ ವೇನಲ್ಲೇ ಹೊತ್ತಿ ಉರಿದ...
24-07-24 01:48 pm
ಪ್ಯಾರಿಸ್ ಒಲಿಂಪಿಕ್ಸ್ ಗೆ ಭಯೋತ್ಪಾದಕ ದಾಳಿ ಬೆದರಿಕೆ...
24-07-24 12:25 pm
IAS Wife Suicide, Rowdy, Crime; ರೌಡಿ ಹಿಂದೆ ಓಡ...
23-07-24 08:45 pm
26-07-24 10:24 pm
Mangalore Correspondent
Mangalore rain, Uchila, Someshwara beach: ಸೋಮ...
26-07-24 09:06 pm
Mangalore Liquid Lounge News: ವಿದ್ಯಾರ್ಥಿಗಳೇ ಬ...
26-07-24 05:07 pm
Mangalore, Vinay Kulkarni, Koragajja: ತುಳುನಾಡ...
26-07-24 02:11 pm
Mangalore rain, Ullal house collapsed: ಉಳ್ಳಾಲ...
25-07-24 11:19 pm
26-07-24 03:42 pm
Bangalore Correspondent
Mangalore Jail Raid: ನಸುಕಿನಲ್ಲಿ ಮಂಗಳೂರು ಜೈಲಿಗ...
25-07-24 11:44 am
Shivamogga Murder News: ಪ್ರೀತಿಸಿದ ಯುವತಿಯನ್ನೇ...
24-07-24 06:45 pm
Bangalore PG Murder: ಬೆಂಗಳೂರು ; ಲೇಡಿಸ್ ಪಿಜಿಗೆ...
24-07-24 05:09 pm
Ramnagara rape, crime: ಐಸ್ಕ್ರೀಮ್ ಕೊಡಿಸೋ ನೆಪ...
23-07-24 03:03 pm