ಬ್ರೇಕಿಂಗ್ ನ್ಯೂಸ್
07-07-23 03:47 pm Source: News18 Kannada ಸಿನಿಮಾ
ರೋರಿಂಗ್ ಸ್ಟಾರ್ ಮುರಳಿ ಅಭಿನಯದ ರಥಾವರ ಸಿನಿಮಾ ನೆನಪಿರಬೇಕಲ್ವೇ ? ಹೌದು, ಆ ಚಿತ್ರದಲ್ಲಿ ಶ್ರೀ ಮುರಳಿ ಅದ್ಭುತ ಪಾತ್ರ ಮಾಡಿದ್ದರು. ಭಜರಂಗಿ ಚಿತ್ರ ಖ್ಯಾತಿಯ ನಟ ಲೋಕಿ ಕೂಡ ಈ ಸಿನಿಮಾದಲ್ಲಿ ಬೇಜಾನ್ ಸಖತ್ ರೋಲ್ ಮಾಡಿದ್ದರು. ಇದೆಲ್ಲ ಡೈರೆಕ್ಟರ್ ಕಲ್ಪನೆಯ ಅಧ್ಯಯನದ ರೂಪವೇ ಆಗಿತ್ತು.
ಅದೇ ನಿರ್ದೇಶಕ ಆನೆ ಪಟಾಕಿ ಅನ್ನುವ ಸಿನಿಮಾ ಮಾಡಿದ್ದರು.ಇದು ಇವರ ಮೊದಲ ಸಿನಿಮಾನೇ ಆಗಿತ್ತು. ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಈ ಚಿತ್ರದ ನಾಯಕರಾಗಿದ್ದರು. ಸಖತ್ ಹಾಸ್ಯವನ್ನ ಕೂಡ ಮಾಡಿದ್ದರು. ಈ ಚಿತ್ರದ ಓಟದಿಂದ ನಿರ್ಮಾಪಕರು ಕೂಡ ಫುಲ್ ಖುಷ್ ಆಗಿದ್ದರು.

ಹೌದು, ಡೈರೆಕ್ಟರ್ ಚಂದ್ರಶೇಖರ್ ಬಂಡಿಯಪ್ಪ ಒಳ್ಳೆ ಸಿನಿಮಾಗಳನ್ನ ಮಾಡಿದ್ದಾರೆ. ಬೆರಳೆನಿಕೆಯಷ್ಟು ಸಿನಿಮಾ ಮಾಡಿರೋದು ಗೊತ್ತೇ ಇದೆ. ಆ ಸಾಲಿನಲ್ಲಿ ತಾರಕಾಸುರ ಸಿನಿಮಾ ಕೂಡ ಇತ್ತು. ಇದರಲ್ಲೂ ಒಳ್ಳೆ ಸ್ಟೋರಿ ಇತ್ತು. ಈ ಚಿತ್ರ ಆದ್ಮೇಲೆ ಚೌಕಿದಾರ್ ಸಿನಿಮಾ ಕೂಡ ಮಾಡುತ್ತಿದ್ದಾರೆ. ಇವರ ವೈರ್ಮುಡಿ ಸಿನಿಮಾ ಈಗ ಪ್ರೀ ಪ್ರೋಡಕ್ಷನ್ ಹಂತದಲ್ಲಿಯೇ ಇದೆ.
ಬಾಲಿವುಡ್ "ರೆಡ್ ಕಾಲರ್" ಸಿನಿಮಾದಲ್ಲಿ ಕಿಶೋರ್ ಹೀರೋ!
ಆದರೆ ಸದ್ದಿಲ್ಲದೇ ಬಾಲಿವುಡ್ ಸಿನಿಮಾ ಮಾಡಿದ್ದಾರೆ. ಕ್ರೈಂ ಕಥೆ ಹೊಂದಿರೋ ಈ ಚಿತ್ರಕ್ಕೆ ರೆಡ್ ಕಾಲರ್ ಅನ್ನುವ ಹೆಸರಿದೆ. ಇದಕ್ಕೂ ಹೆಚ್ಚಾಗಿ ಇದೊಂದು ದೇಸಿ ಕಂಟೆಂಟ್ ಇರೋ ಸಿನಿಮಾ ಅನ್ನೋದನ್ನ ಚಂದ್ರಶೇಖರ್ ಹೇಳುತ್ತಾರೆ.
ಈಗಾಗಲೇ ಸಿನಿಮಾದ ಶೂಟಿಂಗ್ ಕೂಡ ಪೂರ್ಣಗೊಂಡಿದೆ. ಪೋಸ್ಟ್ ಪ್ರೋಡಕ್ಷನ್ ಹಂತದಲ್ಲಿಯೇ ಈ ಚಿತ್ರ ಇದೆ. ಚಿತ್ರದಲ್ಲಿ ಇನ್ನೂ ಒಂದು ವಿಶೇಷ ಇದೆ. ಕನ್ನಡದ ಸ್ಪೆಷಲ್ ನಟ ಕಿಶೋರ್ ಈ ಸಿನಿಮಾದಲ್ಲಿ ಲೀಡ್ ರೋಲ್ ಅಲ್ಲಿಯೇ ಇದ್ದಾರೆ. ಈ ಮೂಲಕ ಕಿಶೋರ್ ಬಾಲಿವುಡ್ಗೆ ಮತ್ತೆ ಎಂಟ್ರಿ ಕೊಟ್ಟಿದ್ದಾರೆ.
ಕಿಶೋರ್ 3 ನೇ ಬಾಲಿವುಡ್ ಸಿನಿಮಾ ಶೂಟಿಂಗ್ ಕಂಪ್ಲೀಟ್
ಈ ಹಿಂದೆ ಕಿಶೋರ್ ಬಾಲಿವುಡ್ನ ವೆಬ್ ಸಿರೀಸ್ಗಳಾದ ದಿ ಫ್ಯಾಮಿಲಿ ಮ್ಯಾನ್, She ಅಲ್ಲೂ ಅಭಿನಯಿಸಿದ್ದಾರೆ. ಆದರೆ ಹಿಂದಿ ಸಿನಿಮಾ ಅಂತ ಬಂದ್ರೆ, ರೆಡ್ ಕಾಲರ್ ಸಿನಿಮಾ ಫಸ್ಟ್ ಅಂತಲೇ ಹೇಳಬಹುದು.
ಬಾಂಬೆ ಹೀರೋಯಿನ್ ಅಭಿನಯದ ಈ ಚಿತ್ರದ ಚಿತ್ರೀಕರಣ ಲಕ್ನೋದಲ್ಲಿ ನಡೆದಿದೆ. ಉತ್ತರ ಪ್ರದೇಶದಲ್ಲೂ ಮಾಡಲಾಗಿದೆ. ಇನ್ನುಳಿದಂತೆ ಡೈರೆಕ್ಟರ್ ಚಂದ್ರಶೇಖರ್ ಬಂಡಿಯಪ್ಪ ಈ ಮೂಲಕ ಬಾಲಿವುಡ್ಗೂ ಪ್ರವೇಶ ಪಡೆದಿದ್ದಾರೆ. ತಮ್ಮ ಮೊದಲ ಹಿಂದಿ ಚಿತ್ರದ ಚಿತ್ರೀಕರಣದ ನಂತರದ ಕೆಲಸದಲ್ಲಿಯೇ ಈಗ ಬ್ಯುಸಿ ಇದ್ದಾರೆ ಅಂತಲೇ ಹೇಳಬಹುದು.
Sandalwood Kantara Fame Actor Kishore Hindi Movie Latest News Updates.
18-01-26 03:34 pm
Bangalore Correspondent
ಬ್ಯಾನರ್ ಗಲಾಟೆ ; ಸಿಬಿಐ ತನಿಖೆಗೆ ಬಿಜೆಪಿ ಆಗ್ರಹ, ಬ...
17-01-26 08:02 pm
Bangalore Accident, Budigere: ದೇವನಹಳ್ಳಿ - ಬೂದ...
17-01-26 05:53 pm
ಪಶ್ಚಿಮ ಬಂಗಾಳ -ಬೆಂಗಳೂರು ರೈಲಿನಲ್ಲೇ ಬರ್ತಿದ್ದಾರೆ...
17-01-26 05:29 pm
H.D. Kumaraswamy, Priyank Kharge: ಜೆಡಿಎಸ್ ನಿರ...
16-01-26 09:38 pm
18-01-26 11:47 am
HK News Desk
ಕುಂಬ್ಡಾಜೆ ; ಕರಿಮಣಿ ಸರ ಎಗರಿಸಲು ಮಹಿಳೆಯ ಕತ್ತು ಹಿ...
17-01-26 03:08 pm
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ...
17-01-26 01:47 pm
ಜ.20ರಂದು ಬಿಜೆಪಿಗೆ ನೂತನ ಅಧ್ಯಕ್ಷರ ಘೋಷಣೆ ; ಅತಿ...
16-01-26 06:33 pm
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
17-01-26 05:12 pm
Mangalore Correspondent
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ; ಮಂಗಳೂರು- ಮರವ...
16-01-26 07:33 pm
18-01-26 12:58 pm
Mangalore Correspondent
Mandya Murder: ಆಸ್ತಿ ವಿಚಾರಕ್ಕೆ ಗಲಾಟೆ ; ನಾಲ್ಕು...
16-01-26 09:01 pm
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm