ಬ್ರೇಕಿಂಗ್ ನ್ಯೂಸ್
14-07-23 01:11 pm Source: News18 Kannada ಸಿನಿಮಾ
ದೀಪಿಕಾ ಪಡುಕೋಣೆ ದೇಶಾದ್ಯಂತ ಫೇಮಸ್. ಹೀಗೆ ತನ್ನ ಅಭಿನಯದಿಂದಲೇ ದೇಶಾದ್ಯಂತ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ ಈ ಬ್ಯೂಟಿ ಕ್ವೀನ್. ಮದುವೆಯ ನಂತರ ಸರಣಿ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ದಕ್ಷಿಣದಿಂದ ಉತ್ತರದವರೆಗೆ ಚಿತ್ರರಂಗವನ್ನು ಆಳುತ್ತಿರುವ ಕೆಲವೇ ಕೆಲವು ನಾಯಕಿಯರಲ್ಲಿ ದೀಪಿಕಾ ಪಡುಕೋಣೆ ಒಬ್ಬರು. ಕನ್ನಡತಿಯಾದ ಈ ನಟಿ ಬಾಲಿವುಡ್ ನ ಮುಂಚೂಣಿ ನಟಿಯಾಗಿ ವಿಶೇಷ ಮನ್ನಣೆ ಗಳಿಸಿದ್ದಾರೆ. ಸಿನಿಮಾಗಳಲ್ಲಿ ನಟಿಸುತ್ತಿರುವಾಗಲೇ ಸಹ ನಟ ರಣವೀರ್ ಸಿಂಗ್ ಅವರನ್ನು ವಿವಾಹವಾದರು. ಮದುವೆಯ ನಂತರವೂ ಸಾಲು ಸಾಲು ಅವಕಾಶಗಳು ಅವರಿಗೆ ಸಿಗುತ್ತಿದೆ.
ದೀಪಿಕಾ ಪಡುಕೋಣೆಯನ್ನು ಪರಿಚಯಿಸುವ ಅಗತ್ಯವಿಲ್ಲ. ಮದುವೆಯ ನಂತರ ಪತಿಯೊಂದಿಗೆ ನಟಿಸಿದ ‘83’ ಸಿನಿಮಾ ಅಷ್ಟಾಗಿ ಹಿಟ್ ಆಗಲಿಲ್ಲ. ಅದಾದ ನಂತರ ರಣವೀರ್ ಸಿಂಗ್ ಅಭಿನಯದ ‘ಸರ್ಕಸ್’ ಚಿತ್ರದಲ್ಲಿ ಪತಿಯೊಂದಿಗೆ ಹಾಡೊಂದರಲ್ಲಿ ಹಾಡಿದ್ದಾರೆ. ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಡಿಸಾಸ್ಟರ್ ಆಗಿತ್ತು. ದೀಪಿಕಾ ಬಾಲಿವುಡ್ ಮಾತ್ರವಲ್ಲದೆ ಹಾಲಿವುಡ್ಗೂ ಪ್ರವೇಶಿಸಿ ಉತ್ತಮ ಯಶಸ್ಸನ್ನು ಪಡೆದರು. ಕನ್ನಡ ಚಿತ್ರರಂಗದ ಮೂಲಕ ವೃತ್ತಿ ಜೀವನ ಆರಂಭಿಸಿದ ದೀಪಿಕಾ ಪಡುಕೋಣೆ, ಸಲ್ಮಾನ್ ಖಾನ್ ಹೊರತುಪಡಿಸಿ ಉಳಿದೆಲ್ಲಾ ಬಾಲಿವುಡ್ ಸ್ಟಾರ್ ಹೀರೋಗಳೊಂದಿಗೆ ನಟಿಸಿದ್ದರು.
ಸದ್ಯ ತೆಲುಗಿನಲ್ಲಿ ನಾಗ್ ಅಶ್ವಿನ್ ನಿರ್ದೇಶನದ ಪ್ರಭಾಸ್ ನಾಯಕನಾಗಿ ನಟಿಸುತ್ತಿರುವ ‘ಪ್ರಾಜೆಕ್ಟ್ ಕೆ’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಸದ್ಯ ಈ ಚಿತ್ರದ ಶೂಟಿಂಗ್ ಹೈದರಾಬಾದ್ ನಲ್ಲಿ ನಡೆಯುತ್ತಿದೆ. ಇತ್ತೀಚೆಗೆ ಈ ನಟಿಗೆ ಒಂದು ವಿಚಾರದಲ್ಲಿ ಸಂಕಷ್ಟ ಎದುರಾಗಿದೆ. ಕಳೆದ ಕೆಲವು ವರ್ಷಗಳಿಂದ ಹೀರೋ ಮತ್ತು ಹೀರೋಯಿನ್ಗಳು ಅನೇಕ ವ್ಯವಹಾರಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಇತ್ತೀಚೆಗೆ ಅವರು ಸ್ಕಿನ್ ಕೇರ್ ಬ್ರ್ಯಾಂಡ್ಗೆ ಸಂಬಂಧಿಸಿದ ಸ್ಟಾರ್ಟ್ಅಪ್ನಲ್ಲಿ ಹೂಡಿಕೆ ಮಾಡಿದ್ದಾರೆ. ಆಕೆಯನ್ನು ನೋಡಿಯೇ ಹಲವರು ದೀಪಿಕಾ ಕಂಪನಿಯಲ್ಲಿ ಬಂಡವಾಳ ಹೂಡಿದ್ದರು.
ಕಳೆದ 10 ವರ್ಷಗಳಿಂದ ಈ ಸಂಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ಅಸಾಧಾರಣವಾಗಿ ಈ ಕಂಪನಿಯಲ್ಲಿನ ಪ್ರಮುಖ ಷೇರುದಾರರು ಹಣಕಾಸಿನ ಸಮಸ್ಯೆಯಿಂದ ಕಂಪನಿಯನ್ನು ತೊರೆದಿದ್ದಾರೆ. ಇದರಿಂದ ಆಕೆಗೆ ಸಂಬಂಧಿಸಿದ ಸ್ಕ್ರೀನ್ ಕೇರ್ ಉತ್ಪನ್ನ ಸಂಸ್ಥೆ ಆರ್ಥಿಕ ನಷ್ಟ ಅನುಭವಿಸುತ್ತಿದೆ ಎಂದು ಬಾಲಿವುಡ್ ಮಾಧ್ಯಮಗಳು ಹೇಳಿವೆ. ಪ್ರಮುಖ ಷೇರುದಾರರು ಕಂಪನಿ ಬಿಟ್ಟ ನಂತರ ಕಂಪನಿಯು ಕಾರ್ಯಾಚರಣೆಯನ್ನು ನಿಲ್ಲಿಸಿತು. ಇದರಿಂದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ರಸ್ತೆಗೆ ಬಿದ್ದಿದ್ದಾರೆ ಎನ್ನಲಾಗಿದೆ.
ದೀಪಿಕಾ ಪಡುಕೋಣೆ ಬಗ್ಗೆ ಹೇಳುವುದಾದರೆ, ಫರಾ ಖಾನ್ ನಿರ್ದೇಶನದ ಶಾರುಖ್ ಖಾನ್ ಅವರ 'ಓಂ ಶಾಂತಿ ಓಂ' ಚಿತ್ರದ ಮೂಲಕ ಅವರು ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ಮೊದಲ ಸಿನಿಮಾದಲ್ಲೇ ಅವರಿಗೆ ಸ್ಟಾರ್ ಹೀರೋಯಿನ್ ಸ್ಥಾನಮಾನ ಸಿಕ್ಕಿತು. ಅದಾದ ನಂತರ ಬಾಲಿವುಡ್ ನಲ್ಲಿ ಟಾಪ್ ಹೀರೋಗಳ ಜೊತೆ ನಟಿಸಿ ತನಗೊಂದು ವಿಶೇಷವಾದ ಗುರುತನ್ನು ಪಡೆದಿದ್ದಾರೆ.
Deepika Padukone Facing trouble what is that.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 12:00 am
HK News Desk
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
ರಾಷ್ಟ್ರಪತಿ ದ್ರೌಪದಿ ಮುರ್ಮು ಮೇ 18ರಂದು ಶಬರಿಮಲೆಗೆ...
08-05-25 12:47 pm
Masood Azhar: ಜೈಶ್ ಮೊಹಮ್ಮದ್ ಉಗ್ರರ ನೆಲೆ ಧ್ವಂಸ...
07-05-25 10:45 pm
08-05-25 10:54 pm
Mangalore Correspondent
Satish Kumapla, Mangalore, U T Khader: ಮೂಡಾ ಅ...
08-05-25 09:06 pm
Mangalore Rohan Corporation, Shah Rukh Khan:...
08-05-25 04:52 pm
Mangalore, Suhas Shetty, NIA, Sunil Kumar: ಸು...
08-05-25 04:14 pm
MLA Harish Poonja, High Court: ಮುಸ್ಲಿಮರ ಬಗ್ಗೆ...
07-05-25 10:30 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm