ಬ್ರೇಕಿಂಗ್ ನ್ಯೂಸ್
17-07-23 02:16 pm Source: Filmy Beat ಸಿನಿಮಾ
2018ರಲ್ಲಿ ತೆರೆಗೆ ಬಂದಿದ್ದ ಅಯೋಗ್ಯ ಚಿತ್ರದ ಮೂಲಕ ಸಿನಿ ರಸಿಕರ ಮನ ಗೆದ್ದಿದ್ದ ರಚಿತಾ ರಾಮ್ ಹಾಗೂ ನೀನಾಸಂ ಸತೀಶ್ ಜೋಡಿ ಎರಡನೇ ಬಾರಿಗೆ ಒಂದಾಗುತ್ತಿರುವ ಈ ಚಿತ್ರಕ್ಕೆ ಮನೋಹರ್ ಕಾಂಪಳ್ಳಿ ಆಕ್ಷನ್ ಕಟ್ ಹೇಳಿದ್ದಾರೆ.
ಅಂದಹಾಗೆ ಮ್ಯಾಟ್ನಿ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯಗೊಂಡಿದ್ದು, ಕಳೆದ ವರ್ಷದ ಪ್ರೇಮಿಗಳ ದಿನಾಚರಣೆಯ ದಿನದಂದು ಚಿತ್ರದ ವಿಶೇಷ ಟೀಸರ್ ಸಹ ಬಿಡುಗಡೆಗೊಂಡಿತ್ತು. ರಚಿತಾ ರಾಮ್ ಹುಟ್ಟುಹಬ್ಬದ ಪ್ರಯುಕ್ತ ಹಾಗೂ ಹಬ್ಬಗಳ ಪ್ರಯುಕ್ತ ಸಹ ವಿಶೇಷ ಪೋಸ್ಟರ್ಗಳನ್ನು ಹಂಚಿಕೊಂಡಿದ್ದ ಮ್ಯಾಟ್ನಿ ಚಿತ್ರತಂಡ ಆದಷ್ಟು ಬೇಗ ಚಿತ್ರವನ್ನು ಬಿಡುಗಡೆ ಮಾಡಲಿದ್ದೇವೆ ಎಂಬ ಸೂಚನೆಯನ್ನು ನೀಡಿತ್ತು.
ಆದರೆ ಅದ್ಯಾಕೋ ಹೋದ ವರ್ಷದ ಯುಗಾದಿ ಹಬ್ಬದ ಬಳಿಕ ಮ್ಯಾಟ್ನಿ ಚಿತ್ರತಂಡ ಸೈಲೆಂಟ್ ಆಗಿಬಿಟ್ಟಿತ್ತು. ಚಿತ್ರದ ಯಾವುದೇ ಅಪ್ಡೇಟ್ ಸಹ ಹೊರಬಿದ್ದಿರಲಿಲ್ಲ. ಅರೇ... ಒಳ್ಳೆಯ ಗುಣಮಟ್ಟದ ಪೋಸ್ಟರ್ಗಳನ್ನು ಹಂಚಿಕೊಳ್ಳುತ್ತಿದ್ದ ಮ್ಯಾಟ್ನಿ ಚಿತ್ರತಂಡ ಹೀಗೆ ಸುಮ್ಮನೆ ಏಕಾಯಿತು, ಚಿತ್ರವೇನಾದ್ರೂ ನಿಂತು ಹೋಯ್ತಾ ಎಂಬ ಬೇಸರದ ಪ್ರಶ್ನೆ ರಚಿತಾ ರಾಮ್ ಹಾಗೂ ಸತೀಶ್ ನೀನಾಸಂ ಅಭಿಮಾನಿ ಬಳಗದಲ್ಲಿ ಮೂಡಿತ್ತು.
ಆದರೆ ಇದೀಗ ಮ್ಯಾಟ್ನಿ ಚಿತ್ರತಂಡ ಅಪ್ಡೇಟ್ ಒಂದನ್ನು ಹಂಚಿಕೊಳ್ಳುವುದರ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಸುದ್ದಿ ಮಾಡಲು ಆರಂಭಿಸಿದೆ. ಹೌದು, ನಿನ್ನೆ ಚಿತ್ರದ ಪೋಸ್ಟರ್ ಹಂಚಿಕೊಂಡಿರುವ ಚಿತ್ರತಂಡ ಇಂದು ( ಜುಲೈ 17 ) ಸಂಜೆ 6.03ಕ್ಕೆ ಚಿತ್ರದ ಮುಂದಿನ ಅಪ್ಡೇಟ್ ಅನ್ನು ಅನಾವರಣ ಮಾಡಲಿದ್ದೇವೆ ಎಂದು ಬರೆದುಕೊಂಡಿದೆ.
ಈ ಮೂಲಕ ಮ್ಯಾಟ್ನಿ ಚಿತ್ರತಂಡ ತನ್ನ ಟ್ರೈಲರ್ ಬಿಡುಗಡೆ ದಿನಾಂಕವನ್ನೇದಾರೂ ಘೋಷಿಸುತ್ತಾ ಅಥವಾ ಚಿತ್ರ ಚಿತ್ರಮಂದಿರಗಳಿಗೆ ಯಾವಾಗ ಲಗ್ಗೆ ಇಡಲಿದೆ ಎಂಬ ಮಾಹಿತಿಯನ್ನೇದರೂ ಹಂಚಿಕೊಳ್ಳುತ್ತಾ ಎಂಬುದನ್ನು ಕಾದು ನೋಡಬೇಕಿದೆ. ಇನ್ನು ಕಳೆದ ವರ್ಷದ ಪ್ರೇಮಿಗಳ ದಿನಾಚರಣೆಯ ದಿನದಂದು ಬಿಡುಗಡೆಯಾಗಿದ್ದ ಟೀಸರ್ನಲ್ಲಿನ ಕಂಟೆಂಟ್ ನೋಡಿದರೆ ಇದೊಂದು ಪಕ್ಕಾ ಪ್ರೇಮ ಕಥೆಯುಳ್ಳ ಚಿತ್ರ ಎಂಬುದು ತಿಳಿದುಬಂದಿತ್ತು.
ನಾಯಕಿಯ ಅಂದ ಹಾಗೂ ಸ್ನೇಹದ ಕುರಿತು ಸಾಲು ಸಾಲು ಮೆಚ್ಚುಗೆಯ ಕವನಗಳನ್ನು ಹೇಳಿದ್ದ ನಾಯಕ ಆಕೆಯ ಕಾಲಿಗೆ ಗೆಜ್ಜೆ ಕಟ್ಟಿ ತನ್ನ ಒಲವನ್ನು ಹೇಳಿಕೊಂಡಿದ್ದ. ಪ್ರೇಮಿಗಳ ದಿನಾಚರಣೆಯ ವಿಶೇಷ ದಿನದಂದು ಬಂದಿದ್ದ ಈ ಟೀಸರ್ ಹಾಗೂ ಅದರಲ್ಲಿನ ಕಂಟೆಂಟ್ ಅಂದಿನ ದಿನಕ್ಕೆ ತಕ್ಕನಾಗಿತ್ತು ಹಾಗೂ ಸಿನಿ ರಸಿಕರ ಮನ ಗೆದ್ದಿತ್ತು. ಅಯೋಗ್ಯ ಚಿತ್ರದ ಮೂಲಕ ಮೋಡಿ ಮಾಡಿದ್ದ ಈ ಜೋಡಿ ಮ್ಯಾಟ್ನಿ ಮೂಲಕ ಮತ್ತೊಮ್ಮೆ ಗೆಲ್ಲಲಿದೆಯಾ ಕಾದ ನೋಡಬೇಕಿದೆ.
Satish ninasam and Rachita ram starrer matinee update to be out today at 6 pm.
02-06-25 10:43 pm
Bangalore Correspondent
Shivamogga Airport, Training: ಶಿವಮೊಗ್ಗ ವಿಮಾನ...
01-06-25 10:08 pm
Tobacco Ban, Karnataka: ಸಾರ್ವಜನಿಕ ಸ್ಥಳಗಳಲ್ಲಿ...
01-06-25 09:37 pm
ಎಚ್ಎಂಟಿ ಅರಣ್ಯ ಭೂಮಿಯಲ್ಲಿ ರಿಯಲ್ ಎಸ್ಟೇಟ್ ದಂಧೆ ;...
01-06-25 08:33 pm
Karnataka Traffic Police New Rules: ಸಕಾರಣವಿಲ್...
01-06-25 11:50 am
01-06-25 12:35 pm
HK News Desk
ಮಲಪ್ಪುರಂನಲ್ಲಿ ಕುಸಿದು ಹೋದ ರಾಷ್ಟ್ರೀಯ ಹೆದ್ದಾರಿ,...
26-05-25 11:34 pm
ಭಯೋತ್ಪಾದನೆ ವಿರುದ್ಧ ಭಾರತದ ರಾಜತಾಂತ್ರಿಕ ಬಲವರ್ಧನೆ...
26-05-25 10:13 pm
Gujrath, ATS: ಪಾಕ್ ಐಎಸ್ಐಗೆ ದೇಶದ ಭದ್ರತೆ ಬಗ್ಗೆ...
26-05-25 09:50 pm
ಪಾಕ್ ಐಎಸ್ಐಗೆ ದೇಶದ ಭದ್ರತೆ ಬಗ್ಗೆ ಸೂಕ್ಷ್ಮ ಮಾಹಿತಿ...
26-05-25 08:33 pm
02-06-25 10:59 pm
Mangalore Correspondent
ಜೇನುಗೂಡಿಗೆ ಕಲ್ಲು ಹೊಡೆಯಬೇಡಿ, ಸರಕಾರವೇ ಸಮಾಜದ ಸ್ವ...
02-06-25 10:54 pm
ಹಿಂದೂ ಮುಖಂಡರನ್ನು ಟಾರ್ಗೆಟ್ ಮಾಡುತ್ತಿರುವುದರ ಹಿಂದ...
02-06-25 10:49 pm
ಹಿಂದುತ್ವ ಹೋರಾಟಕ್ಕೆ ಖಾಕಿ ಬಿಸಿ! ಮಹೇಶ್ ಶೆಟ್ಟಿ ತಿ...
02-06-25 09:08 pm
Mangalore, Dr Kalladka Prabhakar Bhat, FIR: ಸ...
02-06-25 12:51 pm
02-06-25 04:01 pm
Mangalore Correspondent
Ullal, Mangalore, Crime: ಕೋಮು ದ್ವೇಷದ ನೆಲದಲ್ಲ...
01-06-25 11:02 pm
Belagavi Rape, Arrest, Crime: ಬೆಳಗಾವಿಯಲ್ಲಿ ಮತ...
01-06-25 07:56 pm
Bantwal Crime, Mangalore, Stone Petling: ಮುಸ್...
31-05-25 10:47 pm
Mangalore crime, Threat: ಲಿಸ್ಟ್ ರೆಡಿ ಮಾಡಿದ್ದೇ...
29-05-25 11:04 pm