ಬ್ರೇಕಿಂಗ್ ನ್ಯೂಸ್
21-08-23 01:42 pm Source: News18 Kannada ಸಿನಿಮಾ
ಭಾರತದ ಬಹುನೀರಿಕ್ಷೆಯ ಚಂದ್ರಯಾನ-3ರ ಉಡಾವಣೆ (Chandrayaan 3 Launch) ಯಶಸ್ವಿಯಾಗಿ ನಡೆದಿದೆ. ಜುಲೈ 14ರಂದು ಮಧ್ಯಾಹ್ನ 2.35ಕ್ಕೆ ಸರಿಯಾಗಿ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (ISRO) ಚಂದ್ರಯಾನ-3 ಮಿಷನ್ ಯಶಸ್ವಿಯಾಗಿ ಟೇಕಾಫ್ ಆಗಿದ್ದು, ವಿಜ್ಞಾನಿಗಳು ಸೇರಿದಂತೆ ಸಮಸ್ತ ಭಾರತೀಯರ ಮೊಗದಲ್ಲಿ ಸಂತಸ ಮೂಡಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ವಿಕ್ರಂ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಅನ್ನು ಹೊತ್ತ ಜಿಎಸ್ಎಲ್ವಿ ಮಾರ್ಕ್ 3 ಎಂದು ಕರೆಯಲ್ಪಟುವ ಲಾಂಚ್ ವೆಹಿಕಲ್ ಮಾರ್ಕ್-3 'ಬಾಹುಬಲಿ ರಾಕೆಟ್' ಆಗಸದತ್ತ ಚಿಮ್ಮಿದೆ.
ಚಂದ್ರಯಾನ - 3 ಬಗ್ಗೆ ದೇಶವೇ ಹೆಮ್ಮೆಪಡುತ್ತಿರುವ ಕೆಜಿಎಫ್ ನಟ ಪ್ರಕಾಶ್ ರಾಜ್ ಅವರು ಮಾಡಿರುವ ಟ್ವೀಟ್ ವೈರಲ್ ಆಗಿದೆ. ಚಂದ್ರಯಾನ 3ನ್ನು ವ್ಯಂಗ್ಯ ಮಾಡಿದ ಪ್ರಕಾಶ್ ರಾಜ್ ಏನಂದಿದ್ದಾರೆ ಗೊತ್ತೇ? ವ್ಯಕ್ತಿಯೊಬ್ಬ ಚಹಾ ಮಗುಚುವ ವ್ಯಂಗ್ಯ ಚಿತ್ರ ಫೋಸ್ಟ್ ಮಾಡಿದ ಪ್ರಕಾಶ್ ರಾಜ್, ತಾಜಾ ಸುದ್ದಿ: ಚಂದ್ರಯಾನದಿಂದ ಈಗಷ್ಟೇ ಬಂದ ಮೊದಲ ದೃಶ್ಯ ಎಂದು ಕ್ಯಾಪ್ಶನ್ ಬರೆದು ಜಸ್ಟ್ ಆಸ್ಕಿಂಗ್, ವಿಕ್ರಮ್ ಲ್ಯಾಂಡರ್ ಎಂದು ಕ್ಯಾಪ್ಶನ್ ಬರೆದಿದ್ದಾರೆ.
ಈ ವ್ಯಂಗ್ಯವಾದ ಟ್ವೀಟ್ ನೋಡಿದ ನೆಟ್ಟಿಗರು ನಟನಿಗೆ ಚೆನ್ನಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಮೋದಿ ಹಾಗೂ ಆರ್ಎಸ್ಎಸ್ನ್ನು ಬಳಸಿಕೊಂಡು ನೀವು ದ್ವೇಷ ಬಿತ್ತುತ್ತೀರಿ. ಆದರೆ ಅವರನ್ನು ಬಳಸಿಕೊಂಡು ದೇಶವನ್ನು ಬೈಯುವುದೇ ನಿಮ್ಮ ಅಸಲಿ ವ್ಯಕ್ತಿತ್ವ ಎಂದಿದ್ದಾರೆ. ಇನ್ನೂ ಕೆಲವರು ಕಮೆಂಟ್ ಮಾಡಿ ನನ್ನ ಕನ್ನಡ ಮತಾನಾಡುವ ಜನರೇ ಅವರಿಗೆ ಕನ್ನಡದಲ್ಲಿಯೇ ಕ್ಲಾಸ್ ತೆಗೆದುಕೊಳ್ಳಿ ಎಂದು ಇಂಗ್ಲಿಷ್ನಲ್ಲಿ ಬರೆದಿದ್ದಾರೆ.
ಮೋದಿ ಕುರಿತ ದ್ವೇಷದಲ್ಲಿ ಈ ವ್ಯಕ್ತಿ ಇನ್ನೇನು ಮಾಡುತ್ತಾರೋ, ದೇಶವನ್ನು, ಸೈಂಟಿಸ್ಟ್ಗಳನ್ನೂ ದ್ವೇಷಿಸಲು ಅವರ ಕಠಿಣ ಪರಿಶ್ರಮವನ್ನೂ ವ್ಯಂಗ್ಯ ಮಾಡಲಾರಂಭಿಸಿದ್ದಾರೆ ಎಂದು ತಿಳಿಸಿದ್ದಾರೆ. ನೆಕ್ಸ್ಟ್ ಟೈಮ್ ಯಾರಾದ್ರು ಲ್ಯಾಡರ್ ಉಡಾವಣೆ ಮಾಡಿದ್ರೆ ಈ ಪ್ರಣ್ಯತ್ಮನ್ನು ಅದರ ಜೊತೆ ಕಳುಹಿಸಿ ಕೊಡಿ , ಇಲ್ಲ ದೇಶದ ಪ್ರಧಾನ ಮಂತ್ರಿಗಳಿಗೆ ಹಾಗೂ ನಮ್ಮ ಹೆಮ್ಮೆಯ ಇಸ್ರೋ ಮಾಡಿದ ಅವಮಾನಕ್ಕೆ ಜೈಲ್ ಗೆ ಹಾಕಿ ಎಂದಿದ್ದಾರೆ ಇನ್ನೊಬ್ಬರು.
ನಟ ಪ್ರಕಾಶ್ ರಾಜ್ ಅವರಿಗೆ ಹಿಗ್ಗಾಮುಗ್ಗ ಕ್ಲಾಸ್ ತೆಗೆದುಕೊಂಡ ನೆಟ್ಟಿಗರು ವ್ಯಂಗ್ಯ ಮಾಡುವುದಕ್ಕೂ ಲಿಮಿಟ್ ಇದೆ. ದೇಶದ ವಿರುದ್ಧವೇ ಟ್ವೀಟ್ ಮಾಡುವುದಲ್ಲ ಎಂದು ಬುದ್ದಿ ಹೇಳಿದ್ದಾರೆ. ಬಹಳಷ್ಟು ಜನರು ನಟನ ಟ್ವೀಟ್ ಖಂಡಿಸಿದ್ದಾರೆ. ಕುತಬ್ ಮಿನಾರ್ನ ಅರ್ಧದಷ್ಟು ಎತ್ತರವಿರುವ 43.5 ಮೀಟರ್ ಉದ್ದದ ರಾಕೆಟ್, ಸುಮಾರು 40 ದಿನಗಳ ಪಯಣದ ಬಳಿಕ ಆಗಸ್ಟ್ 23 ಅಥವಾ 24ರಂದು ಚಂದ್ರನ ಮೇಲ್ಮೈ ಅನ್ನು ಮುಟ್ಟುವ ನಿರೀಕ್ಷೆ ಇದೆ.
KGF Actor Prakash Raj Tweets Mocking Chandrayaan 3 Netizens React.
15-10-25 10:59 pm
Bangalore Correspondent
ದೀಪಾವಳಿಗೆ ಹೆಚ್ಚುವರಿ ರೈಲು ; ಮಂಗಳೂರು- ಬೆಂಗಳೂರು,...
15-10-25 03:35 pm
ರಘು ದೀಕ್ಷಿತ್ ಜೀವನದಲ್ಲಿ ಎರಡನೇ ಇನ್ನಿಂಗ್ಸ್ ; 50ರ...
15-10-25 03:32 pm
ಕಾರ್ಕಳ ಮಾಜಿ ಶಾಸಕ ಗೋಪಾಲ ಭಂಡಾರಿ ಪುತ್ರ ರೈಲಿನಡಿಗೆ...
14-10-25 11:24 am
CM Siddaramaiah, DK Shivakumar:ಶಾಸಕರ ಬೆಂಬಲವಿಲ...
13-10-25 10:09 pm
15-10-25 11:02 pm
HK News Desk
ರಾಜಸ್ಥಾನದಲ್ಲಿ ಭೀಕರ ಬಸ್ ದುರಂತ ; ಮಕ್ಕಳು, ಮಹಿಳೆಯ...
15-10-25 12:09 pm
ಟ್ರಂಪ್ ಒತ್ತಡ ನಡುವೆಯೇ ಭಾರತದಲ್ಲಿ ಗೂಗಲ್ ಸಂಸ್ಥೆ ಭ...
14-10-25 10:33 pm
ಹಮಾಸ್ - ಇಸ್ರೇಲ್ ಶಾಂತಿ ಒಪ್ಪಂದ ; ಎರಡು ವರ್ಷಗಳ ಅಕ...
14-10-25 11:22 am
ಕರೂರು ಕಾಲ್ತುಳಿತ ಪ್ರಕರಣ ; ಸಿಬಿಐ ತನಿಖೆಗೆ ಒಪ್ಪಿಸ...
14-10-25 11:11 am
15-10-25 05:36 pm
Mangalore Correspondent
ಬೈಂದೂರಿನಲ್ಲಿ ಮೂವರು ವಿದ್ಯಾರ್ಥಿಗಳು ಸಮುದ್ರಪಾಲು ;...
15-10-25 12:12 pm
ಮೈಸೂರು, ಬೆಂಗಳೂರು, ಶಿವಮೊಗ್ಗ ಕಂಬಳಕ್ಕೆ ಹೈಕೋರ್ಟ್...
14-10-25 10:36 pm
ಸುಳ್ಯ ಮೂಲದ ಯುವಕ ಮಾರಿಷಸ್ ನಲ್ಲಿ ಜಲಪಾತಕ್ಕೆ ಬಿದ್ದ...
14-10-25 10:13 pm
ರಸ್ತೆಯಲ್ಲೇ ತ್ಯಾಜ್ಯ ಸುರಿಸುವ ಮೀನಿನ ಲಾರಿಗಳಿಗೆ ಮತ...
14-10-25 09:12 pm
15-10-25 04:51 pm
Bangalore Correspondent
ನಿಡ್ಡೋಡಿ ಮನೆಯಲ್ಲಿ ಗ್ಯಾಂಗ್ ರೇಪ್ ಸಂಚು ; ನಾಲ್ವರು...
15-10-25 12:00 pm
ಅಮಲಿಗಾಗಿ ಯುವಕರಿಗೆ ಕಫ್ ಸಿರಪ್ ಮಾರಾಟ ದಂಧೆ ; ದಾವಣ...
14-10-25 04:44 pm
ರುಪಾಯಿಗೆ ನಾಲ್ಕು ಪಟ್ಟು ಯುಕೆ ಪೌಂಡ್ ಕರೆನ್ಸಿಯ ಆಮಿ...
14-10-25 11:19 am
Vitla, Honey Trap, Mangalore Crime: ಗಲ್ಫ್ ಉದ್...
13-10-25 10:04 pm