ಬ್ರೇಕಿಂಗ್ ನ್ಯೂಸ್
28-08-23 02:06 pm Source: News18 Kannada ಸಿನಿಮಾ
ಕಾಟೇರ ಚಿತ್ರದ ಡೈರೆಕ್ಟರ್ ತುರಣ್ ಸುಧೀರ್ ತಮ್ಮ ಮಾತಾಡ್ತಾ ಹೋದ್ರು. ಸಿನಿಮಾದಲ್ಲಿ ಬೇರೆ ರೀತಿ ಕಾಣಿಸುತ್ತಾರೆ. ಬೇರೆ ಯಾವುದೇ ಚಿತ್ರದ ಇನ್ಫ್ಯೂಲೆನ್ಸ್ ಈ ಚಿತ್ರಕ್ಕೆ ಇಲ್ವೇ ಇಲ್ಲ. ಇದೊಂದು ಹಳ್ಳಿಬ್ಯಾಗ್ರೌಂಡ್ನಲ್ಲಿ ನಡೆಯೋ ಕಥೇನೆ. ಆದರೆ ರಿಯಲ್ ಇನ್ಸಿಡೆಂಟ್ಗಳ ಒಂದು ಒಟ್ಟು ಚಿತ್ರವೇ ಆಗಿದೆ.
ದರ್ಶನ್ ಇಲ್ಲಿವರೆಗೂ ಈ ರೀತಿಯ ಸಿನಿಮಾ ಮಾಡಿಯೇ ಇಲ್ಲ ಬಿಡಿ. ಭಾವತೀವ್ರತೆಯ ಸಿನಿಮಾ ಇದಾಗಿದೆ ಅನ್ನೋದು ಅಷ್ಟೆ ವಿಶೇಷವಾಗಿದೆ. ಹಳ್ಳಿಯ ಕಥೆ ಆಗಿರೋದ್ರಿಂದಲೇ ಅವರ ಲುಕ್ ಒಂದು ವಿಭಿನ್ನವಾಗಿಯೇ ಇದೆ. ಇದರೊಟ್ಟಿಗೆ ಇಲ್ಲಿ ಒಂದಷ್ಟು ವಿಶೇಷತೆಗಳು ಇವೆ.

ದರ್ಶನ್ ಸಿನಿಮಾಗಳಲ್ಲಿ ಆ್ಯಕ್ಷನ್ ಸಪರೇಟ್ ಪ್ಲಾನ್ ಮಾಡಲಾಗುತ್ತದೆ. ಕಾಟೇರ ಸಿನಿಮಾದಲ್ಲಿ ಆ ರೀತಿ ಇಲ್ಲ ನೋಡಿ. ಇಲ್ಲಿ ಬರೋ ಎಲ್ಲ ಆ್ಯಕ್ಷನ್ಗಳು ಕಥೆಯೊಳಗೇನೆ ಬರುತ್ತದೆ. ಆದರೆ ಎಲ್ಲೂ ಕಥೆ ಬಿಟ್ಟು ಯಾವುದೇ ಆಕ್ಷನ್ ಬರೋದೇ ಇಲ್ಲ. ಸಿನಿಮಾದ ಕೆಲಸ ನಡೀತಾನೇ ಇದೆ.
ಕಾಟೇರ ಸಿನಿಮಾ ಇದೇ ವರ್ಷ ರಿಲೀಸ್ ಪ್ಲಾನ್
ಕಾಟೇರ ಚಿತ್ರವನ್ನ ಇದೇ ವರ್ಷ ತೆರೆಗೆ ತರೋ ಪ್ಲಾನ್ ಇದೆ. ಅದಕ್ಕಾಗಿಯೇ ಎಲ್ಲ ಕೆಲಸ ಜೋರಾಗಿಯೇ ನಡೆಯುತ್ತಿದೆ. ಸಿನಿಮಾದ ನಾಯಕಿ ಆರಾಧನಾ ರಾಮ್ ಅವರಿಗೆ ಇದು ಮೊದಲ ಸಿನಿಮಾನೇ ಆಗಿದೆ. ನಮ್ಮ ಕಥೆಗೆ ಸೂಟ್ ಆಗ್ತಾರೆ ಅನ್ನುವ ಕಾರಣಕ್ಕೆ ಆಯ್ಕೆ ಮಾಡಿಕೊಂಡಿದ್ದೇವೆ.
ಚಿತ್ರದ ನಿರ್ಮಾಪಕರಾದ ರಾಕ್ ಲೈನ್ ಅವರೇ ಚಿತ್ರದ ನಾಯಕಿಯ ಬಗ್ಗೆ ಹೇಳಿದರು. ಆಡಿಷನ್ ಮಾಡಿಯೇ ತೆಗೆದುಕೊಳ್ಳಿ, ಪಾತ್ರಕ್ಕೆ ಸೂಕ್ತ ಆಗ್ತಾರೆ ಅನಿಸಿದ್ರೆ ತೆಗೆದುಕೊಳ್ಳಿ ಅಂತಲೂ ಹೇಳಿದರು. ಆ ಪ್ರಕಾರ ಆಡಿಷನ್ ಮಾಡಿಯೇ ಆರಾಧನಾ ರಾಮ್ ಅವರನ್ನ ಚಿತ್ರಕ್ಕೆ ಹಾಕಿಕೊಂಡಿದ್ದೇವೆ.

ಕಾಟೇರ ಸಿನಿಮಾದಲ್ಲಿ ಶೃತಿ ವಿಶೇಷ ಪಾತ್ರದಲ್ಲಿ ಅಭಿನಯ
ಸಿನಿಮಾದಲ್ಲಿ ಕುಮಾರ್ ಗೋವಿಂದ್ ಅಭಿನಯಿಸಿದ್ದಾರೆ. ಬಹಳ ದಿನಗಳ ಬಳಿಕವೇ ಈ ಚಿತ್ರದ ಮೂಲಕ ಬಣ್ಣ ಹಚ್ಚಿದ್ದಾರೆ. ಜಗಪತಿಬಾಬು ನಟಿಸಿದ್ದಾರೆ. ನಟಿ ಶೃತಿ ಅವರು ವಿಶೇಷವಾಗಿಯೇ ಈ ಚಿತ್ರ ಪಾತ್ರವನ್ನೆ ನಿರ್ವಹಿಸಿದ್ದಾರೆ. ವೈಜನಾಥ್ ಬಿರಾದಾರ್ ಅಭಿನಯಿಸಿದ್ದಾರೆ.
ತರುಣ್ ಸುಧೀರ್ ತಮ್ಮ ಕಾಟೇರ ಚಿತ್ರದ ಮಾಹಿತಿಯನ್ನ ಕೊಟ್ಟಿದ್ದಾರೆ. ಇವರು ಹೇಳಿದಂತೆ ಈ ಒಂದು ಸಿನಿಮಾ ಬೇರೆ ರೀತಿನೇ ಸದ್ದು ಮಾಡುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಅಭಿಮಾನಿಗಳು ಸಿನಿಮಾ ಪ್ರತಿ ಕ್ಷಣವನ್ನ ಹಬ್ಬದಂತೆ ಆದರಿಸುತ್ತಿದ್ದಾರೆ.
ಕಾಟೇರ ಸಿನಿಮಾ ಬಗ್ಗೆ ಒಂದು ನಿರೀಕ್ಷೆ ಇದೆ. ಅಭಿಮಾನಿಗಳು ಕಾಯ್ತಾ ಇದ್ದಾರೆ. ಕಾಟೇರ ಚಿತ್ರದಲ್ಲಿ ದರ್ಶನ್ ಈ ಸಲ ಏನ್ ಹೇಳ್ತಿದ್ದಾರೆ ಅನ್ನುವ ಕುತೂಹಲ ಕೂಡ ಈಗಲೇ ಮೂಡಿದೆ. ಉಳಿದಂತೆ ಕಾಟೇರ ಒಂದು ಕಲ್ಪ್ ಸಿನಿಮಾ ಆಗಲಿದೆ ಅಂತಲೇ ಹೇಳಬಹುದು.
Challenging Star Darshan Acted Kaatera movie Director Tharun Sudhir.
17-08-26 02:26 pm
HK News Staffer
ಜಮೀರ್ ಹಲ್ಲು ಕಿತ್ತ ಹಾವು, ನೆಪಕ್ಕಷ್ಟೇ ಸಚಿವ ಸ್ಥಾನ...
14-08-26 08:42 pm
ಗುಟ್ಕಾ-ಪಾನ್ ಮಸಾಲಾ ನಿಷೇಧಕ್ಕೆ 48 ಗಂಟೆಯಲ್ಲೇ ಯು-...
14-08-26 05:32 pm
ಅನುಭವ ಇಲ್ಲದ ಮಂಗ ಯತೀಂದ್ರಗೆ ಮೈಸೂರು ಜಿಲ್ಲಾ ಉಸ್ತು...
13-08-26 10:19 pm
ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ವಿ...
13-08-26 08:09 pm
11-08-26 10:25 pm
HK News Staffer
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
17-08-26 05:07 pm
HK News Staffer
ನಾಗರಪಂಚಮಿ ; ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಸ...
16-08-26 09:33 pm
After Rotten Chicken Scare at KFC, McDonald’s...
16-08-26 08:29 pm
McDonald's City Centre Raid, Mangalore: ಕೆಎಫ್...
16-08-26 08:20 pm
ಫೈವ್ ಸ್ಟಾರ್ ಹೊಟೇಲ್ ರೈಡ್ ಆದ್ರೂ ಕೊಳೆತ ಮಾಂಸ ಇಟ್ಕ...
16-08-26 04:14 pm
17-08-26 05:02 pm
HK News Staffer
ಬಂಟ್ವಾಳ ಪೊಲೀಸರ ಭರ್ಜರಿ ಬೇಟೆ; ಬೆಂಗಳೂರಿನಿಂದ ಕಾರಿ...
17-08-26 10:54 am
ಕಾಸರಗೋಡು ; ತಂದೆ, ಮಗಳು ಒಂದೇ ಕುಣಿಕೆಗೆ ನೇಣು ಬಿಗಿ...
16-08-26 09:03 pm
Kfc Raid, City Centre, Mangalore: ಸಿಟಿ ಸೆಂಟರ್...
15-08-26 09:06 pm
ಸ್ವಾತಂತ್ರ್ಯ ದಿನದಂದೇ ಚಾಮರಾಜನಗರದಲ್ಲಿ ಗುಂಡಿನ ಸದ್...
15-08-26 06:11 pm