ಬ್ರೇಕಿಂಗ್ ನ್ಯೂಸ್
22-11-22 10:50 am Mangalore Correspondent ಕರಾವಳಿ
ಮಂಗಳೂರು, ನ.21: ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಗಾಯಗೊಂಡು ಸಿಕ್ಕಿಬಿದ್ದಿರುವ ಉಗ್ರ ಮೊಹಮ್ಮದ್ ಶಾರೀಕ್ ಮೈಸೂರಿನಿಂದ ಒಬ್ಬಂಟಿಯಾಗಿಯೇ ಮಂಗಳೂರಿಗೆ ಬಂದಿದ್ದನೇ ಅಥವಾ ಆತನ ಜೊತೆಗೆ ಇನ್ನೊಬ್ಬ ಬಂದಿದ್ದನೇ ಎಂಬ ಬಗ್ಗೆ ಶಂಕೆ ಮೂಡಿದೆ. ಪ್ರಕರಣದ ಹಿನ್ನೆಲೆ ಪೊಲೀಸರು ಪಡೀಲಿನಿಂದ ಪಂಪ್ವೆಲ್ ವರೆಗಿನ ಹೆದ್ದಾರಿಯ ಉದ್ದಕ್ಕೂ ಇರುವ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ, ಹಲವಾರು ಅನುಮಾನಗಳಿಗೆ ಈಡು ಮಾಡುವ ಸಾಕ್ಷ್ಯಗಳು ಪೊಲೀಸರಿಗೆ ಲಭಿಸಿವೆ.
ಪೊಲೀಸರ ಅಂದಾಜು ಪ್ರಕಾರ, ಆತ ಬಸ್ಸಿನಲ್ಲಿ ಬಂದಿದ್ದು ಮೈಸೂರು, ಮಡಿಕೇರಿಯಿಂದ ಮಂಗಳೂರಿಗೆ ಬರುವ ಬಸ್ಸಿನಲ್ಲಿ ಬಂದು ಪಡೀಲಿನಲ್ಲಿ ಇಳಿದಿದ್ದಾನೆ. ಆನಂತರ, ಅಲ್ಲಿಂದ ನಡೆದುಕೊಂಡೇ ಒಂದು ಕಿಮೀ ಸಾಗಿದ್ದಾನೆ. ಈ ನಡುವೆ, ಹೆದ್ದಾರಿ ಬದಿಯ ವೈನ್ ಶಾಪ್ ನಲ್ಲಿ ದಾಖಲಾಗಿರುವ ಸಿಸಿಟಿವಿಯಲ್ಲಿ ಇಬ್ಬರು ಜೊತೆಯಾಗಿ ಅಲ್ಲಿಗೆ ಬಂದಿರುವುದು ಕಾಣಿಸಿದೆ. ಅದರಲ್ಲಿ ಒಬ್ಬಾತ ಮೊಹಮ್ಮದ್ ಶಾಕೀರ್ ಅನ್ನುವ ಅನುಮಾನ ಪೊಲೀಸರದ್ದು. ಆ ಸಂದರ್ಭದಲ್ಲಿ ಶಾಕೀರ್ ಜೊತೆಗೆ ಇನ್ನೊಬ್ಬ ಯುವಕನೂ ಇದ್ದ. ಇಬ್ಬರು ಕೂಡ ಕೈಯಲ್ಲಿ ಒಂದೇ ಗಾತ್ರದ ಬ್ಯಾಗ್ ಹಿಡಿದುಕೊಂಡಿದ್ದರು. ಶಾರೀಕ್ ಈ ಸಂದರ್ಭದಲ್ಲಿ ತನ್ನ ಕೈಯಲ್ಲಿ ಕುಕ್ಕರ್ ಬಾಂಬ್ ಹಿಡಿದುಕೊಂಡೇ ಬಂದಿದ್ದರೆ, ಇನ್ನೊಬ್ಬನ ಕೈಯಲ್ಲಿದ್ದ ಬ್ಯಾಗ್ ನಲ್ಲಿ ಏನಿತ್ತು ಅನ್ನುವ ಅನುಮಾನ ಎದ್ದಿದೆ. ಅದರಲ್ಲು ಇದ್ದಿರಬಹುದಾದ ಬಾಂಬ್ ಎಲ್ಲಿ ಹೋಯಿತು ಎನ್ನುವ ಅನುಮಾನ, ಪ್ರಶ್ನೆ ಎದುರಾಗಿದೆ.
ವೈನ್ ಶಾಪ್ ನಲ್ಲಿ ಕ್ವಾರ್ಟರ್ ಬಾಟಲಿ ಪಡೆದಿದ್ದ !
ವೈನ್ ಶಾಪ್ ಗೆ ಬಂದಿದ್ದ ಇಬ್ಬರು ಯುವಕರು ಅಲ್ಲಿಂದ ಐಬಿ ಬ್ರಾಂಡಿನ ಕ್ವಾರ್ಟರ್ ಬಾಟಲಿಯನ್ನು ಖರೀದಿಸಿದ್ದರು. ಕ್ವಾರ್ಟರ್ ಕುಡಿದು ಅದೇ ಭಂಡ ಧೈರ್ಯದಲ್ಲಿ ಅದೇ ಪರಿಸರದಲ್ಲಿ ಕುಕ್ಕರ್ ಒಳಗೆ ಬಾಂಬ್ ವೈರ್ ಕನೆಕ್ಟ್ ಮಾಡಿದ್ದನೇ ಅನ್ನುವ ಸಂಶಯಗಳಿವೆ. ಅಲ್ಲಿಂದ ಸ್ವಲ್ಪ ಮುಂದಕ್ಕೆ ಹೆದ್ದಾರಿಯಲ್ಲಿ ಬಂದು ರೈಲ್ವೇ ನಿಲ್ದಾಣದಿಂದ ಮೇಲೆ ಹೆದ್ದಾರಿಗೆ ಬರುತ್ತಿದ್ದ ಆಟೋ ರಿಕ್ಷಾಕ್ಕೆ ಕೈ ಹಿಡಿದು ನಿಲ್ಲಿಸಿ, ಅದರಲ್ಲಿ ಹತ್ತಿಕೊಂಡಿದ್ದ. ಆಟೋ ರಿಕ್ಷಾ ಅರ್ಧ ಕಿಮೀ ಸಾಗುವಷ್ಟರಲ್ಲಿ ಬ್ಲಾಸ್ಟ್ ಆಗಿತ್ತು. ಆದರೆ ಆಟೋದಲ್ಲಿ ಇದ್ದದ್ದು ಒಬ್ಬನೇ ಆಗಿರುವುದರಿಂದ ಆತನ ಜೊತೆಗಿದ್ದ ವ್ಯಕ್ತಿ ಎಲ್ಲಿ ಹೋದ ಅನ್ನುವ ಪ್ರಶ್ನೆ ಉಂಟಾಗಿದೆ.
ಜೊತೆಗಿದ್ದ ಇನ್ನೊಬ್ಬ ವ್ಯಕ್ತಿಯ ಕೈಯಲ್ಲೂ ಇನ್ನೊಂದು ಬಾಂಬ್ ಇತ್ತೇ ಎನ್ನುವ ಅನುಮಾನಗಳಿವೆ. ಅಲ್ಲದೆ, ಆ ವ್ಯಕ್ತಿ ಇನ್ನೂ ಪೊಲೀಸರ ಕೈಗೆ ಸಿಕ್ಕಿಲ್ಲ. ಈ ಬಗ್ಗೆ ಜೊತೆಗಿದ್ದ ವ್ಯಕ್ತಿ ಯಾರು ಎಂದು ಪತ್ತೆ ಮಾಡಲು ಇತ್ತ ಶಾರೀಕ್ ಮಾತನಾಡುತ್ತಿಲ್ಲ. ಹೀಗಾಗಿ ಪೊಲೀಸರು ಜೊತೆಗಿದ್ದ ವ್ಯಕ್ತಿಯ ಬಗ್ಗೆ ಮಾಹಿತಿ ಕಲೆಹಾಕಲು ತಲೆಕೆಡಿಸಿಕೊಂಡಿದ್ದಾರೆ.
Autorickshaw bomb blast in Mangalore, CCTV footage shows Mohammed Shariq along with another friend buying alcohol. But the friend who was also carrying a big bag is not yet traced.
13-09-25 10:38 pm
Bangalore Correspondent
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
Hassan truck Accident: ಅರಕಲಗೂಡು ; ಗಣೇಶ ಮೆರವಣಿ...
13-09-25 10:19 am
13-09-25 03:25 pm
HK News Desk
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
13-09-25 11:05 pm
Udupi Correspondent
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm