ಬ್ರೇಕಿಂಗ್ ನ್ಯೂಸ್
22-11-22 09:31 pm Bangalore Correspondent ಕರ್ನಾಟಕ
ಬೆಂಗಳೂರು, ನ.22: ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಸಿಕ್ಕಿಬಿದ್ದಿರುವ ಐಸಿಸ್ ಉಗ್ರ ಮೊಹಮ್ಮದ್ ಶಾರೀಕ್ ಒಬ್ಬಂಟಿಯಾಗಿದ್ದ. ಒಂಟಿಯಾಗಿಯೇ ಮಂಗಳೂರಿನಲ್ಲಿ ಸರಣಿ ಸ್ಫೋಟಕ್ಕೆ ಸಂಚು ಹೂಡಿದ್ದ. ಆತ ಇದಕ್ಕಾಗಿ ಯಾವುದೇ ಗ್ಯಾಂಗ್ ಮಾಡಿಕೊಂಡಿರಲಿಲ್ಲ. ಯಾರದ್ದೇ ಸಹಾಯವನ್ನೂ ಪಡೆದಿರಲಿಲ್ಲ ಎಂದು ಗುಪ್ತಚರ ಮೂಲಗಳು ಹೇಳುತ್ತಿವೆ.
ಹೀಗಾಗಿ ಮೊಹಮ್ಮದ್ ಶಾರೀಕ್ ಜಮ್ಮು ಕಾಶ್ಮೀರದ ಉಗ್ರರ ರೀತಿ ಒಂಟಿ ತೋಳ ಆಗಿದ್ದ ನ್ಯೂಸ್ 18 ವೆಬ್ ಕೇಂದ್ರ ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಆತ ಸುಸೈಡ್ ಬಾಂಬರ್ ಆಗಿರಲಿಲ್ಲ. ಬದಲಿಗೆ, ಮಂಗಳೂರು ಸೇರಿ ಹಲವು ಕಡೆ ಬಾಂಬ್ ಇಟ್ಟು ಸ್ಫೋಟಿಸಲು ಪ್ಲಾನ್ ಹಾಕಿದ್ದ ಎನ್ನುವ ಅಂದಾಜನ್ನು ಗುಪ್ತಚರ ಸಂಸ್ಥೆಗಳು ಮಾಡಿವೆ. ಅಲ್ಲದೆ, ಶಾರೀಕ್ ಇದಕ್ಕಾಗಿ ಯಾವುದೇ ತಂಡವನ್ನು ಕಟ್ಟಿಕೊಂಡಿರಲಿಲ್ಲ ಎಂದು ಹೇಳಿವೆ.


ಶಾರೀಕ್ ತನ್ನ ಕೃತ್ಯದ ಬಗ್ಗೆ ಯಾರ ಜೊತೆಗೂ ಹೇಳಿಕೊಂಡಿರಲಿಲ್ಲ. ಬಾಂಬ್ ತಯಾರಿಗೆ ಬಳಸಿದ ಸಾಮಗ್ರಿಗಳು ಸೇರಿದಂತೆ ಎಲ್ಲವನ್ನೂ ಆತನೇ ರೆಡಿ ಮಾಡಿಕೊಂಡಿದ್ದ. ಆತನ ಫೋನ್ ಕರೆ, ಇನ್ನಿತರ ದಾಖಲೆಗಳನ್ನು ಕಲೆ ಹಾಕುತ್ತಿದ್ದೇವೆ. ಆತನ ಜೊತೆಗೆ ಕ್ಲೋಸ್ ಇದ್ದವರನ್ನೂ ವಿಚಾರಣೆ ಮಾಡುತ್ತಿದ್ದೇವೆ ಎಂದು ಗುಪ್ತಚರ ಸಂಸ್ಥೆಗಳು ಮಾಹಿತಿ ನೀಡಿವೆ.



ಐಸಿಸ್ ಉಗ್ರವಾದಿ ಸಂಘಟನೆಯಿಂದ ಪ್ರೇರಿತನಾಗಿದ್ದ ಶಾರೀಕ್, ಒಬ್ಬಂಟಿಯಾಗಿಯೇ ವಿಧ್ವಂಸಕ ಕೃತ್ಯ ಎಸಗಲು ಮುಂದಾಗಿದ್ದ ಎನ್ನುವ ಮಾಹಿತಿಯನ್ನು ಗುಪ್ತಚರ ಸಂಸ್ಥೆಗಳು ನೀಡಿವೆ. ಇದೇ ಆಧಾರದಲ್ಲಿ ಮಂಗಳೂರಿಗೆ ಬಂದಿದ್ದ ಎಡಿಜಿಪಿ ಅಲೋಕ್ ಕುಮಾರ್, ಆತನನ್ನು ಬದುಕಿಸುವುದೇ ನಮ್ಮ ಮೊದಲ ಆದ್ಯತೆ. ಆನಂತರ, ಆತನನ್ನು ಪ್ರಶ್ನೆ ಮಾಡಲಾಗುವುದು ಎಂದು ಹೇಳಿದ್ದರು.
Mohammed Shariq, 24, the passenger and prime suspect in Saturday’s autorickshaw blast in Mangaluru, is a lone wolf, top intelligence sources told CNN-News18. The suspect has suffered 45% burns. He probably wanted to attack all places on his own and was not a suicide bomber, they said. “Shariq was not in touch with anyone and had no gang. The theory on his associates has been proved wrong,” they said.
07-11-25 09:59 pm
HK News Desk
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
07-11-25 10:58 pm
Mangalore Correspondent
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
70 ಅನಾಥ ಶವಗಳ ಬಗ್ಗೆ ಪ್ರತ್ಯೇಕ ಎಫ್ಐಆರ್ ದಾಖಲಿಸಿ ತ...
07-11-25 02:08 pm
07-11-25 11:20 pm
Mangalore Correspondent
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm
ಥಾಯ್ಲೇಂಡ್ ದೇಶದಲ್ಲಿ ಉದ್ಯೋಗಕ್ಕೆ ತೆರಳಿ ಅಲೆದಾಟ ;...
06-11-25 02:08 pm