ಫೋಟೊ ಗ್ಯಾಲರಿ

06-09-23 10:17 pm ಫೋಟೊ

ಕದ್ರಿಯಲ್ಲರಳಿದ ಕೃಷ್ಣನ ಬಾಲಲೀಲೆಗಳು !

ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನದ ಅಂಗಣದಲ್ಲಿ ಕಲ್ಕೂರ ಪ್ರತಿಷ್ಠಾನದಿಂದ ನಡೆದ ಕೃಷ್ಣ ವೇಷ ಸ್ಪರ್ಧೆಯಲ್ಲಿ ಅಂಬೆಗಾಲಿಕ್ಕುವ ಪುಟಾಣಿಗಳಿಂದ ತೊಡಗಿ ತಾಯಿ ಮಕ್ಕಳ ವರೆಗೂ ಕೃಷ್ಣ - ರಾಧೆಯರು ವಿವಿಧ ವೇಷ ಭೂಷಣಗಳಿಂದ ಮಿಂಚಿದರು. ತುಂಟಕೃಷ್ಣ, ಬಾಲಕೃಷ್ಣ, ರಾಧಾಕೃಷ್ಣ, ದೇವಕೀಕೃಷ್ಣ ಹೀಗೆ 32 ವಿಭಾಗಗಳಲ್ಲಿ ಕೃಷ್ಣ ವೇಷದ ಸ್ಪರ್ಧೆ ನಡೆಯಿತು. ಅಲ್ಲಿನ ಫೋಟೊ ಜಲಕ್ ಇಲ್ಲಿದೆ.