ಫೋಟೊ ಗ್ಯಾಲರಿ

26-08-24 10:42 pm ಫೋಟೊ

ಮಳೆಯ ನಡುವೆ ಕೃಷ್ಣ ರಾಧೆಯರ ರಂಗಿನಾಟ, ಫೋಟೋ ಝಲಕ್

ಮಂಗಳೂರು, ಆಗಸ್ಟ್ 26: ಶ್ರೀಕೃಷ್ಣಾಷ್ಟಮಿ ಪ್ರಯುಕ್ತ ನಗರದ ಕದ್ರಿ ಮಂಜುನಾಥ ದೇವಸ್ಥಾನ ಆವರಣದಲ್ಲಿ ಕಲ್ಕೂರ ಪ್ರತಿಷ್ಠಾನ ವತಿಯಿಂದ 42ನೇ ವರ್ಷದ ಕೃಷ್ಣ ವೇಷ ಸ್ಪರ್ಧೆ ಏರ್ಪಡಿಸಲಾಗಿತ್ತು. ಮಳೆಯ ನಡುವೆಯೂ 20ಕ್ಕೂ ಹೆಚ್ಚು ವಿಭಾಗದಲ್ಲಿ ತುಂಟ ಕೃಷ್ಣರ ರಂಗಿನಾಟ ನಡೆಯಿತು. ತಾಯಂದಿರು ತಮ್ಮ ಮಕ್ಕಳನ್ನು ಕೃಷ್ಣ ವೇಷ ತೊಡಿಸಿ, ಕೆಲವರು ತಾವೇ ರಾಧೆಯರಾಗಿ ವೇಷ ಹಾಕ್ಕೊಂಡು ಬಂದು ಪ್ರದರ್ಶನ ನೀಡಿದರು. ತುಂಟಕೃಷ್ಣ, ರಾಧಾಕೃಷ್ಣ, ಬಾಲಕೃಷ್ಣ ಹೀಗೆ ನಾನಾ ರೀತಿಯಲ್ಲಿ ಆರು ತಿಂಗಳ ಕಂದನಿಂದ ಹಿಡಿದು ದೊಡ್ಡವರ ವರೆಗೂ ಕೃಷ್ಣರು ನೋಡುಗರಿಗೆ ಮುದ ನೀಡಿದರು.